Home ಕಾಸರಗೋಡು ಏ ಕೆ ಪಿ ಎ ಫೋಟೋ ಫೆಸ್ಟ್ ವಾಹನ ಪರ್ಯಟನೆ, ಕುಂಬಳೆಯಲ್ಲಿ ಸಮಾರೋಪ

ಏ ಕೆ ಪಿ ಎ ಫೋಟೋ ಫೆಸ್ಟ್ ವಾಹನ ಪರ್ಯಟನೆ, ಕುಂಬಳೆಯಲ್ಲಿ ಸಮಾರೋಪ

Hindu neighbor gifts plot of land

Hindu neighbour gifts land to Muslim journalist

ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ರಾಜ್ಯ ಸಮಿತಿ ನೇತೃತ್ವದಲ್ಲಿ 23 24 25 ರಂದು ತ್ರಿಶೂರ್ ಅಂಗಮಾಲಿಯಲ್ಲಿ ನಡೆಯುವ ಕಾರ್ಯಕ್ರಮದ ಪ್ರಚಾರಾರ್ಥ , ರಾಜ್ಯ ದಿಂದ ಹೊರಟ ವಾಹನ ಪ್ರಚಾರಕ್ಕೆ ಏ ಕೆ ಪಿ ಎ ಕುಂಬಳೆ ವಲಯ ಸಮಿತಿ ವತಿಯಿಂದ ಕುಂಬಳೆಯಲ್ಲಿ ಸ್ವಾಗತ ನೀಡಲಾಯಿತು. ಆದಿತ್ಯವಾರ ಕಾಸರಗೋಡು ಜಿಲ್ಲಾ ಪರ್ಯಟನೆ ನಂತರ ಕುಂಬಳೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಎಕೆಪಿಎ ಫೋಟೋಗ್ರಾಫಿ ಕ್ಲಬ್ ಸಂಚಾಲಕ ಗೋವಿಂದ ನ್ ಚೆಂಗರ ಕಾಡು ಉದ್ಘಾಟಿಸಿದರು. ಏ ಕೆ ಪಿ ಎ ರಾಜ್ಯ ಅಧ್ಯಕ್ಷ ಗಿರೀಶ್ ಪಟ್ಟಾಂಬಿ ಫೇಸ್ಬುಕ್ ಲೈವ್ ಮೂಲಕ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಕಾರ್ಯದರ್ಶಿ ಉಣ್ಣಿ ಕೋವೂಡ್, ಜಿಲ್ಲಾಧ್ಯಕ್ಷ ಎನ್ ಎ ಭರತನ್, ರಾಜ್ಯ ಸದಸ್ಯ ಹರೀಶ್ ಪಾಲಕ್ಕುನ್ನು, ಜಿಲ್ಲಾ ಕಾರ್ಯದರ್ಶಿ ವಾಸು ಕಾಸರಗೋಡು, ಜಿಲ್ಲಾ ಪದಾಧಿಕಾರಿ ಶರೀಫ್ , ಜಿಲ್ಲಾ ಉಪಾಧ್ಯಕ್ಷ ವಿಜಯನ್ ಕೆ ನಾಯರ್, ಮತ್ತಿತರರು ಮಾತನಾಡಿದರು, ಕುಂಬಳೆ ವಲಯ ಅಧ್ಯಕ್ಷ ಸುನಿಲ್, ಅಧ್ಯಕ್ಷತೆವಹಿಸಿದ್ದರು ಕಾರ್ಯದರ್ಶಿ ಸುರೇಶ ಆಚಾರ್ಯ ಸ್ವಾಗತಿಸಿದರು ,ಪಿ ಆರ್ ಒ ಉದಯ ಕಂಬಾರ್ ವಂದಿಸಿದರು. ಉಪ್ಪಳ ಕುಂಬಳೆ ಬದಿಯಡ್ಕ ಯೂನಿಟ್ ಗಳ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.