Home » Davangere : ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ – ದಾವಣಗೆರೆ ದಕ್ಷಿಣದಿಂದ NDA ಅಭ್ಯರ್ಥಿಯಾಗಿ ಅಚ್ಚರಿ ವ್ಯಕ್ತಿ ಸ್ಪರ್ಧೆಗೆ JDU ಸೂಚನೆ

Davangere : ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ – ದಾವಣಗೆರೆ ದಕ್ಷಿಣದಿಂದ NDA ಅಭ್ಯರ್ಥಿಯಾಗಿ ಅಚ್ಚರಿ ವ್ಯಕ್ತಿ ಸ್ಪರ್ಧೆಗೆ JDU ಸೂಚನೆ

0 comments

Hindu neighbor gifts plot of land

Hindu neighbour gifts land to Muslim journalist

Davangere : ವೀರಶೈವ ಲಿಂಗಾಯತ ನಾಯಕ ಮತ್ತು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಈ ಕ್ಷೇತ್ರಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಮಹಿಮಾ ಪಟೇಲ್ ಅವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಈ ಸ್ಥಾನ ತೆರವಾಗಿದೆ. ಈ ಹಿನ್ನಲೆಯಲ್ಲಿ ಮಹಿಮಾ ಮಾರ್ಚ್ 7 ಮತ್ತು 8 ರಂದು ನಿತೀಶ್ ಅವರನ್ನು ಭೇಟಿ ಮಾಡಲು ಪಾಟ್ನಾಗೆ ಭೇಟಿ ನೀಡಲಿದ್ದಾರೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಮುಂಬರುವ ಉಪಚುನಾವಣೆಯಲ್ಲಿ ಜೆಡಿಯು ಪಾತ್ರದ ಬಗ್ಗೆ ಅವರು ಚರ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 

 ಕರ್ನಾಟಕ ರಾಜಕೀಯದಲ್ಲಿ ಲಿತೀಶ್ ಕುಮಾರ್ ಅವರು ಹಸ್ತಕ್ಷೇಪ ಮಾಡುತ್ತಿರುವುದು, ಜೆ ಎಚ್ ಪಟೇಲ್ ಅವರ ಪುತ್ರರಿಗೆ ಸಪೋರ್ಟ್ ಮಾಡುತ್ತಿರುವುದು ಅಚ್ಚರಿಯ ವಿಚಾರವಾದರೂ, ಅವರು NDA ಜೊತೆಗಿನ ಪ್ರಮುಖ ಮೈತ್ರಿ ಪಕ್ಷ ಎಂಬುದು ಮುಖ್ಯವಾಗುತ್ತದೆ. ಇನ್ನೂ ಬಿಜೆಪಿ ಮತ್ತು ಜೆಡಿಎಸ್ ಈ ನಡೆಯ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ಟಿಕೆಟ್‌ಗಾಗಿ, ವಿಶೇಷವಾಗಿ ಕೇಸರಿ ಪಕ್ಷದಲ್ಲಿ ತೀವ್ರ ಪೈಪೋಟಿ ನಡೆಯಲಿದೆ.

You may also like