Home » Jalil-Masood murder case: ಜಲೀಲ್, ಮಸೂದ್ ಹತ್ಯಾ ಪ್ರಕರಣ ಶೀಘ್ರ SIT ಗೆ ? ರಮಾನಾಥ ರೈರವರ ಇಂದಿನ ಹೇಳಿಕೆ ಸೃಷ್ಟಿಸಿದೆ ಆ ಅನುಮಾನ !

Jalil-Masood murder case: ಜಲೀಲ್, ಮಸೂದ್ ಹತ್ಯಾ ಪ್ರಕರಣ ಶೀಘ್ರ SIT ಗೆ ? ರಮಾನಾಥ ರೈರವರ ಇಂದಿನ ಹೇಳಿಕೆ ಸೃಷ್ಟಿಸಿದೆ ಆ ಅನುಮಾನ !

0 comments
Jalil-Masood murder case

Jalil-Masood murder case: ಮಂಗಳೂರು: ಕೋಮು ಸೂಕ್ಷ್ಮ ಕರಾವಳಿ ಜಿಲ್ಲೆಯಲ್ಲಿ ನಡೆದಿರುವ ಎಲ್ಲ ಧರ್ಮಾಧಾರಿತ ಮತ್ತು / ಅಥವಾ ರಾಜಕೀಯ ಹತ್ಯೆಗಳ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕೆಂದು ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಧರ್ಮಾಧಾರಿತ ಅಥವಾ ರಾಜಕೀಯ ಹತ್ಯೆಗಳಲ್ಲಿ ಶರತ್ ಮಡಿವಾಳ, ಅಶ್ರಫ್, ಜಲೀಲ್, ಮಸೂದ್, (Jalil-Masood murder case) ಪ್ರವೀಣ್ ನೆಟ್ಟಾರು ಇನ್ನೂ ಅನೇಕ ಅಮಾಯಕರು ಜೀವ ಕಳೆದುಕೊಂಡಿದ್ದು, ಹತ್ಯೆ ಪ್ರಕರಣಗಳಲ್ಲಿ ಭಾಗಿಯಾದವರಲ್ಲಿ ಬಿಜೆಪಿ ಮತ್ತು ಎಸ್‌ಡಿಪಿಐ ಪಕ್ಷಗಳ ಕಾರ್ಯಕರ್ತರು ಇರಬಹುದು ಎಂದವರು ಹೇಳಿದ್ದಾರೆ.

ಮಾಜಿ ಮಂತ್ರಿ ರಾಮನಾಥ ರೈ ಅವರ ಹೇಳಿಕೆಯ ಮೂಲಕ ಈ ಎಲ್ಲಾ ಕೊಲೆ ಪ್ರಕರಣಗಳು ಮರು ತನಿಖೆಗೆ ಒಳಪಡುವ ಅನುಮಾನ ಮೂಡಿದೆ. ಮಂಗಳೂರಿನಲ್ಲಿ ಜಲೀಲ ಮತ್ತು ಬೆಳ್ಳಾರೆಯ ಮಸೂದ್ ಹತ್ಯಾ ಪ್ರಕರಣಗಳ ತನಿಖೆ ಸರಿಯಾಗಿ ನಡೆದಿಲ್ಲ ಎಂದು ಪೋಷಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ ಕಣ್ಣೀರು ಕರೆದಿದ್ದರು. ಬಹುಶ: ಇವೆಲ್ಲ ಕೊಲೆ ಪ್ರಕರಣಗಳು ಮರು ತನಿಖೆಗೆ ಒಳಪಡುವ ಸಂಭವವಿದೆ. ಆ ಮೂಲಕ ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ಮುನ್ನುಡಿ ಬರೆಯುತ್ತಿದೆಯೇ ಎನ್ನುವ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ.

ರಮನಾಥ ರೈ ಅವರು ಹೇಳಿಕೆ ನೀಡಿ, ‘ ಒಬ್ಬರೇ ಒಬ್ಬ ಕಾಂಗ್ರೆಸ್‌ ಕಾರ್ಯಕರ್ತ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ನಾನು ಅನೇಕ ಬಾರಿ ಪುನರುಚ್ಚರಿಸಿದ್ದೇನೆ. ಇದನ್ನೂ ಕೂಡ ಗಂಭೀರವಾಗಿ ಪರಿಗಣಿಗಬೇಕಾಗಿದೆ ‘ ಎಂದಿದ್ದಾರೆ. ಇದೀಗ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಹೆಚ್ಚಿನ ಹತ್ಯಾ ಪ್ರಕರಣಗಳು ಮರು ತನಿಖೆಗೆ ಒಳಪಡುವುದು ಖಚಿತ.

banner

ಮುಖ್ಯಮಂತ್ರಿ ಸಿದ್ದರಾಮಯ್ಯನವರು 24 ಹತ್ಯೆ ಮಾಡಿಸಿದ್ದಾರೆ ಎಂದು ಹೇಳಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಕಾಂಗ್ರೆಸ್ ಜಿಲ್ಲಾ ಘಟಕ ಮುಂದಾಗಿದೆ. ಈ ಬಗ್ಗೆ ಕೂಡ ತನಿಖೆ ನಡೆಯಬೇಕು ಎಂದು ರೈ ಹೇಳಿದ್ದಾರೆ. ಹೊಸ ಬೆಳವಣಿಗೆಗಳಿಗೆ ಕರ್ನಾಟಕದ ರಾಜಕೀಯ ನಿಧಾನವಾಗಿ ತೆಗೆದುಕೊಳ್ಳುತ್ತಿದೆ.

 

ಇದನ್ನು ಓದಿ: New Parliament Building: ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕೆಂದು ಕೋರಿದ ಅರ್ಜಿಗೆ ಹಿನ್ನಡೆ, ಅರ್ಜಿದಾರರಿಗೆ ಮತ್ತು ಬಾಯ್ಕಾಟ್ ಮಾಡಿದ 19 ಪ್ರತಿಪಕ್ಷಗಳಿಗೆ ಮುಖಭಂಗ 

You may also like

Leave a Comment