Home » ನಾ ಸೋಮೇಶ್ವರ ನೇತೃತ್ವದ ‘ವಿಕಾಸ ಥಟ್ ಅಂತ ಹೇಳಿ ‘ ಕಾರ್ಯಕ್ರಮ – ಗಂಗಾವತಿಯ ಶ್ರೀಧರ.ಎಸ್ ಸೊಪ್ಪಿಮಠ ಪ್ರಥಮ, ಹೊಸಪೇಟೆಯ ಮಧುಶ್ರೀ ಎ ದ್ವಿತೀಯ

ನಾ ಸೋಮೇಶ್ವರ ನೇತೃತ್ವದ ‘ವಿಕಾಸ ಥಟ್ ಅಂತ ಹೇಳಿ ‘ ಕಾರ್ಯಕ್ರಮ – ಗಂಗಾವತಿಯ ಶ್ರೀಧರ.ಎಸ್ ಸೊಪ್ಪಿಮಠ ಪ್ರಥಮ, ಹೊಸಪೇಟೆಯ ಮಧುಶ್ರೀ ಎ ದ್ವಿತೀಯ

0 comments

Hindu neighbor gifts plot of land

Hindu neighbour gifts land to Muslim journalist

ವಿಜಯನಗರ (ಹೊಸಪೇಟೆ): ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ, ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ ಡಾ. ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ “ವಿಕಾಸ ಥಟ್ ಅಂತ ಹೇಳಿ” ಸರಣಿ ಕಾರ್ಯಕ್ರಮ, ಸೋಮವಾರದಂದು ಆನ್ಲೈನ್ ವೇದಿಕೆಯಲ್ಲಿ ನಡೆಯಿತು.

ಈ ವಾರದ ಸ್ಪರ್ಧೆಯನ್ನು ವಿಶೇಷವಾಗಿ ಯುವ ಸಮುದಾಯಕ್ಕಾಗಿ ಹಮ್ಮಿಕೊಳ್ಳಲಾಗಿತ್ತು. ಹೊಸಪೇಟೆ ಶಾಖೆಯಿಂದ ಮಧುಶ್ರೀ.ಎ, ಸಿಂಧನೂರು ಶಾಖೆಯಿಂದ ಕವಿತಾ ಹಿರೇಮಠ, ಹುಬ್ಬಳ್ಳಿ ಶಾಖೆಯಿಂದ ಅಮಿತ್ ಮಹಾಜನ ಹಾಗೂ ಗಂಗಾವತಿ ಶಾಖೆಯಿಂದ ಶ್ರೀಧರ.ಎಸ್ ಸೊಪ್ಪಿಮಠ ಅವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು. 8 ಸುತ್ತುಗಳ ಕಾರ್ಯಕ್ರಮದಲ್ಲಿ ಅಂತಿಮವಾಗಿ ಗಂಗಾವತಿಯ ಶ್ರೀಧರ.ಎಸ್ ಸೊಪ್ಪಿಮಠ 150 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ಉಳಿದಂತೆ ಹೊಸಪೇಟೆಯ ಮಧುಶ್ರೀ.ಎ 120 ಅಂಕಗಳನ್ನು, ಸಿಂಧನೂರಿನ ಕವಿತಾ ಹಿರೇಮಠ 110 ಅಂಕಗಳನ್ನು ಹಾಗೂ ಹುಬ್ಬಳ್ಳಿಯ ಅಮಿತ್ ಮಹಾಜನ 90 ಅಂಕಗಳನ್ನು ಗಳಿಸಿದರು.

ಈ ಕಾರ್ಯಕ್ರಮವು ಬಳ್ಳಾರಿ ಶಾಖೆಯ ಬಸಯ್ಯ.ಎಸ್.ಪಿ ಮತ್ತು ಅವರ ತಂಡದ ಮುಂದಾಳತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ನೇರ ಪ್ರಸಾರ ವಿಕಾಸ ಬ್ಯಾಂಕಿನ ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಹಾಗೂ ವಿವಿಡ್ಲಿಪಿಯ ಯೂಟ್ಯೂಬ್ ಮತ್ತು ಫೇಸ್ಬುಕ್ ಚಾನೆಲ್ ನಲ್ಲಿ ಪ್ರಸಾರಗೊಂಡಿತ್ತು.

You may also like

Leave a Comment