ಪುತ್ತೂರು: ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಅಖಿಲ ಭಾರತೀಯ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯನ್ನು ಎದುರಿಸಿದ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಗೆ ಅರ್ಹತೆ ಪಡೆದಿದ್ದು ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಯ ನಿರೀಕ್ಷೆಯಲ್ಲಿದ್ದಾರೆ.

*ಬಾಲ್ಯದಲ್ಲೇ ಸೂಕ್ತ ತರಬೇತಿ, ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿರುವ ವಿದ್ಯಾಮಾತಾ*
ಒಂದೇ ವೇದಿಕೆಯಲ್ಲಿ ಹಲವು ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಪ್ರತೀ ವರ್ಷದಂತೆ ಈ ಸಲವೂ ಸೂಕ್ತ ಮಾರ್ಗದರ್ಶನದೊಂದಿಗೆ ತರಬೇತಿ ನೀಡಿ ಅಖಿಲ ಭಾರತೀಯ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ 4 ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವಲ್ಲಿ ವಿದ್ಯಾಮಾತಾ ಅಕಾಡೆಮಿ ಯಶಸ್ವಿಯಾಗಿದ್ದು ತರಬೇತಿ ಪಡೆದವರಲ್ಲಿ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಪೆರಾಲು ಸಾರಂಜ ಮನೆ ನಿವಾಸಿ ಹರೀಶ್ ಎಸ್. ರವರ ಪುತ್ರಿ ಶ್ರಾವ್ಯ ಎಸ್ ರವರು KVG ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯದ ವಿದ್ಯಾರ್ಥಿನಿ. ಸುಳ್ಯ ತಾಲೂಕು, ನೆಲ್ಲೂರು ಕೆಮ್ರಾಜೆ ಗ್ರಾಮದ ದೋಳ ಮನೆ ನಿವಾಸಿ ಕೃಷ್ಣ ಪ್ರಸಾದ್ ರವರ ಪುತ್ರ ಧವನ್ ಡಿ. ಕೆ. ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದ ವಿದ್ಯಾರ್ಥಿ, ಪುತ್ತೂರು ಕಸಬ ಇಲ್ಲಿಯ ರೋಟರಿಪುರ ನಿವಾಸಿ ಚಂದ್ರಶೇಖರರವರ ಪುತ್ರಿ ಕೃತಿಕಾ ಸಿ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿಯ ವಿದ್ಯಾರ್ಥಿನಿ, ಪುತ್ತೂರು ತಾಲೂಕು ಇರ್ದೆ ನಿವಾಸಿ ಶ್ಯಾಮಜೀತ್ ರೈರವರ ಪುತ್ರ ಹಾರುಷ್ ರೈ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿಯ ವಿದ್ಯಾರ್ಥಿಯಾಗಿದ್ದು ಇವರು ಉತ್ತೀರ್ಣರಾಗಿ ತಮ್ಮ ಹೆತ್ತವರ ಹಾಗೂ ತರಬೇತಿ ನೀಡಿದ ವಿದ್ಯಾಮಾತಾ ಅಕಾಡೆಮಿಯ ಕೀರ್ತಿಯನ್ನು ಇನ್ನಷ್ಟು ಉತ್ತುಂಗಕ್ಕೇರಿಸಿದ್ದು, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ತರಬೇತುದಾರರು, ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ. ಸೈನಿಕ, ನವೋದಯ ಮತ್ತು ಮೊರಾರ್ಜಿ ಶಾಲಾ ಪ್ರವೇಶ ಪರೀಕ್ಷೆಗಳಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ಈಗಾಗಲೇ ಆಯ್ಕೆ ಆಗಿದ್ದನ್ನು ಸ್ಮರಿಸಿಕೊಳ್ಳಬಹುದು.
ಬಾಲ್ಯದಲ್ಲೇ ತರಬೇತಿ ನೀಡಿ ಭವಿಷ್ಯದ ಅಧಿಕಾರಿಗಳನ್ನು ಸೃಷ್ಟಿಸುವ ನಮ್ಮ ಯೋಜನೆಗೆ ಈ ಫಲಿತಾಂಶ ಆದರ್ಶವಾಗಿದೆ: ಭಾಗ್ಯೇಶ್ ರೈ*
ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈರವರು ಹರ್ಷ ವ್ಯಕ್ತಪಡಿಸಿ “ಸರಕಾರಿ ಅಧಿಕಾರಿಗಳನ್ನು ಸೃಷ್ಟಿಸುವ ನಮ್ಮ ಕಾರ್ಯಕ್ಕೆ ಇಂತಹ ಫಲಿತಾಂಶವು ಇನ್ನಷ್ಟು ಉತ್ಸಾಹ ನೀಡಿದ್ದು ನಿರಂತರ ಮಾರ್ಗದರ್ಶನ,ಹಾಗೂ ತರಬೇತಿ ನೀಡಲು ವಿದ್ಯಾಮಾತಾ ಅಕಾಡೆಮಿ ಸದಾ ಸಿದ್ದವಿದೆ” ಎಂದು ಸಂತಸ ಹಂಚಿಕೊಂಡಿದ್ದಾರೆ.

