ವೇಣೂರು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಷನ್ ವೇಣೂರು ವಲಯದ ವಾರ್ಷಿಕ ಮಹಾಸಭೆಯು ಕ್ಷೇತ್ರ ಸಮಿತಿಯ ಸಹಕಾರದೊಂದಿಗೆ ಫೆಬ್ರವರಿ 28, ಶನಿವಾರದಂದು ಗಾರ್ಡನ್ ವ್ಯೂ ಕಾಂಪ್ಲೆಕ್ಸ್ ವೇಣೂರಿನಲ್ಲಿ ವಲಯದ ಅಧ್ಯಕ್ಷ ಉಮೇಶ್ ಟೈಲರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಹಾಗೂ ಕಾರ್ಮಿಕ ಕಾರ್ಡ್ ವಿತರಣೆ ಮತ್ತು ಡಿಜಿಟಲ್ ಐಡಿ ಕಾರ್ಡ್ ವಿತರಣೆ ನಡೆಯಿತು.

ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ರಾಜು ಪೂಜಾರಿಯವರ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇವರು ಸಭೆಯ ಉದ್ಘಾಟನೆಯನ್ನು ಮಾಡಿ ಸಂಘಟನೆ ಮತ್ತು ಕಾರ್ಮಿಕ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು ಅತೀ ಹೆಚ್ಚು ಸದಸ್ಯರ ರಿನಿವಲ್ ಆಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು
ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಲಾನ್ಸಿ ಡಿಸೋಜ ರವರು ಕಾರ್ಯಕ್ರಮದ ಮತ್ತು ಸಂಘಟನೆ ಬಗ್ಗೆ ವಿವರಿಸಿದರು
ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ವೇದಾವತಿ ಜನಾರ್ದನ್ ರವರು ನಮ್ಮ ವಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
ಜಿಲ್ಲಾ ಸಮಿತಿ ಸದಸ್ಯರಾದ
ರವೀಂದ್ರರವರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ
ಕಾರ್ಮಿಕ ಕಾರ್ಡ್ ಡಿಜಿಟಲ್ ಐಡಿ ಕಾರ್ಡ್ ವಿತರಿಸಲಾಯಿತು ಹೊಸ ಮೆಂಬರ್ ಶಿಪ್ ಮತ್ತು ಸದಸ್ಯರ ರಿನಿವಲ್ ಮಾಡಲಾಯಿತು ವಲಯದ ನಿರ್ಗಮನ ಅಧ್ಯಕ್ಷರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು .
ಈ ಸಭೆಯಲ್ಲಿ ಹೊಸ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು.
ಅಧ್ಯಕ್ಷ ರಾಗಿ ಪ್ರಮೀಳಾ ಹೊಸಂಗಡಿ. ಕಾರ್ಯದರ್ಶಿ ಸುಪ್ರೀತಾ .ಕೋಶಾಧಿಕಾರಿ ಜಯಶ್ರೀ. ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ ಮತ್ತು ನ್ಯಾನ್ಸಿ.
ಜತೆ ಕಾರ್ಯದರ್ಶ ಯಾಗಿ ನಮಿತಾ. ಜಯಪ್ರಭಾ. ಅವರನ್ನು ಆಯ್ಕೆ ಮಾಡಲಾಯಿತು..
ಕ್ಷೇತ್ರ ಸಮಿತಿಗೆ ಆಯ್ಕೆ ಆದವರು
ರತ್ನಾಕರ್ ಹೆಗ್ಡೆ
ಉಮೇಶ್ ಟೈಲರ್
ಆನಂದ್ ಟೈಲರ್
ಸಹನಾ ಶಾಸ್ತ್ರಿ
ವಸಂತ್ ವಿ.ಕೆ ಟೈಲರ್. ರವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿ ಯಾಗಿ
ಕರಿಮಣೇಲು ಅಂಜಲಿ . ಮೂಡುಕೋಡಿ ಅಶ್ವಿತ ..ಕುಕ್ಕೇಡಿ ಆನಂದ ಟೈಲರ್ .. ವೇಣೂರು ಸಹನಾ ಶಾಸ್ತ್ರಿ..ಬಡಕೋಡಿ, ಹೊಸಂಗಡಿ.. ಪ್ರಮೀಳಾ.. ಬಜಿರೆ ಸವಿತಾ.. ಪಡಂಗಡಿ ಪ್ರೇಮಾ.. ಗರ್ಡಾಡಿ ಸುನೀತಾ..ಅಂಡಿಂಜೆ ಜಯಂತಿ. ಗುಂಡೂರಿ ಶಶಿಕಲಾ.. ಕೊಕ್ರಾಡಿ ವಿಶಾಲ ಹೆಗ್ಡೆ..
ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು..200 ಕ್ಕೂ ಹೆಚ್ಚು ಮಂದಿ ಟೈಲರ್ ವೃತ್ತಿ ಬಾಂದವರು ಭಾಗವಹಿಸಿದರು.
ಪ್ರಮೀಳಾ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು.ಕೊಕ್ರಾಡಿ ವಿಶಾಲ ಹೆಗ್ಡೆ ರವರು ಪ್ರಾರ್ಥನೆ ಯನ್ನು ಮಾಡಿದರು.ಸಹನಾ ರವರು ವರದಿಯನ್ನು ವಾಚಿಸಿದರು.ಸುಪ್ರೀತಾ ರವರು ಲೆಕ್ಕಪತ್ರ ಮಂಡಿಸಿದರು.. ಆನಂದ ಟೈಲರ್ ರವರು ಬಂದ ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದವಿತ್ತರು…




