Home News Vegetarian City : ವಿಶ್ವದಲ್ಲೇ ಏಕೈಕ ಸಸ್ಯಾಹಾರ ನಗರ ಎಲ್ಲಿದೆ ಗೊತ್ತೇ?

Vegetarian City : ವಿಶ್ವದಲ್ಲೇ ಏಕೈಕ ಸಸ್ಯಾಹಾರ ನಗರ ಎಲ್ಲಿದೆ ಗೊತ್ತೇ?

Vegetarian City

Hindu neighbor gifts plot of land

Hindu neighbour gifts land to Muslim journalist

Vegetarian City : ಪ್ರಪಂಚದಲ್ಲಿ ಆಚಾರ-ವಿಚಾರ, ರೂಢಿ- ಸಂಪ್ರದಾಯ, ಉಡುಗೆ-ತೊಡುಗೆ, ಪ್ರತಿಯೊಂದರಲ್ಲೂ ವೈವಿಧ್ಯತೆ ಹೊಂದಿರುವ ಅನೇಕ ನಗರಗಳಿವೆ. ಹಾಗೆಯೇ ವಿಭಿನ್ನ ಆಹಾರ ಪದ್ಧತಿಗಳನ್ನು ಹೊಂದಿರುವ ನಗರವೂ ಇದೆ. ಅದರಲ್ಲೂ ಸಂಪೂರ್ಣ ಸಸ್ಯಾಹಾರಿ ಸೇವಿಸುವ ನಗರವೂ (Vegetarian City) ಇದೆ ಎಂದರೆ ನೀವು ಆಶ್ಚರ್ಯ ಪಡಬಹುದು. ಬನ್ನಿ ಸಂಪೂರ್ಣ ವಿವರ ತಿಳಿಯೋಣ.

ಮಾಹಿತಿ ಪ್ರಕಾರ, ಜಗತ್ತಿನ ಮೊದಲ ಸಸ್ಯಾಹಾರಿ ನಗರ ಹೊಂದಿರುವ ಹೆಗ್ಗಳಿಕೆ ಭಾರತದ್ದು. ವಿಶ್ವದ ಸಂಪೂರ್ಣ ಸಸ್ಯಾಹಾರಿ ನಗರ ಗುಜರಾತ್‌ನಲ್ಲಿದೆ. ಅದನ್ನು ಪಾಲಿಟಾನಾ ಎಂದು ಕರೆಯಲಾಗುತ್ತದೆ. ಇದು ಜೈನ ಧರ್ಮದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಜೈನರ ರಕ್ಷಕನಾದ ಆದಿನಾಥನು ಒಮ್ಮೆ ಅದರ ಬೆಟ್ಟಗಳ ಮೇಲೆ ನಡೆದಾಡಿದನು ಮತ್ತು ಅಂದಿನಿಂದ ಈ ಸ್ಥಳವು ಅನುಯಾಯಿಗಳಿಗೆ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ.

ಪಾಲಿಟಾನಾ ಜೈನ ಧರ್ಮದ ಅನುಯಾಯಿಗಳಿಗೆ ಅತ್ಯಂತ ಪೂಜ್ಯ ಮತ್ತು ಶುದ್ಧ ತಾಣವಾಗಿದೆ. ಇದು ಜೈನ ಧರ್ಮದ ಐದು ಪ್ರಮುಖ ತೀರ್ಥಯಾತ್ರೆ ಸ್ಥಳಗಳಲ್ಲಿ ಒಂದಾಗಿದೆ.

ಈ ನಗರವು ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿದ್ದು, ಜೈನ ಸಮುದಾಯದವರು ಇಲ್ಲಿ ವಾಸಿಸುತ್ತಾರೆ. ಈ ನಗರದಲ್ಲಿ ಪ್ರಾಣಿಗಳನ್ನು ಕೊಲ್ಲುವುದು ಕಾನೂನುಬಾಹಿರವಾಗಿದೆ ಮತ್ತು ಹಾಗೆ ಮಾಡಿದರೆ ಕಠಿಣ ಶಿಕ್ಷೆಯ ನಿಬಂಧನೆ ಇದೆ. ಇಲ್ಲಿನ ದೇವಾಲಯಗಳು ಜೈನ ಸಮುದಾಯದ ಯಾತ್ರಾ ಸ್ಥಳಗಳಾಗಿವೆ. ಚೌಮುಖ ದೇವಾಲಯವು ಇಲ್ಲಿರುವ ಅತಿ ದೊಡ್ಡ ದೇವಾಲಯವಾಗಿದೆ.

ಜೈನರ ನಂಬಿಕೆಯ ಪ್ರಕಾರ, ಈ ದೇವಾಲಯಗಳನ್ನು ಪರ್ವತಗಳ ಮೇಲೆ ದೇವರ ವಾಸಸ್ಥಾನವಾಗಿ ನಿರ್ಮಿಸಲಾಗಿದೆ. ಪ್ರತಿ ಜೈನ ಸಮುದಾಯದ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಲು ಬಯಸುತ್ತಾರೆ. ಆದರೆ ರಾತ್ರಿ ವೇಳೆ ಇಲ್ಲಿ ತಂಗಲು ಯಾರಿಗೂ ಅವಕಾಶವಿಲ್ಲ.

ವಿಶ್ವದ ಏಕೈಕ ಸಸ್ಯಾಹಾರಿ ನಗರದಲ್ಲಿ ಮೊಟ್ಟೆಅಥವಾ ಮಾಂಸ ಮಾರಾಟಕ್ಕೆ ನಿಷೇಧವಿದೆ. ಈ ನಗರದ ಮತ್ತೊಂದು ವಿಶೇಷತೆ ಏನೆಂದರೆ ಇಲ್ಲಿರುವ ಪರ್ವತದ ಮೇಲೆ 900ಕ್ಕೂ ಹೆಚ್ಚು ದೇವಾಲಯಗಳಿವೆ. ಇದು ಜೈನ ಧರ್ಮದ ಮೊದಲ ತೀರ್ಥಂಕರ ರಿಷಭದೇವನ ದೇವಾಲಯವನ್ನು ಸಹ ಹೊಂದಿದೆ.

ಈ 900 ದೇವಾಲಯಗಳು ಶತ್ರುಂಜಯ ಬೆಟ್ಟದ ಮೇಲೆ ನೆಲೆಗೊಂಡಿದ್ದು, ಭಕ್ತರು ಇಲ್ಲಿಗೆ ತಲುಪಲು 3950 ಮೆಟ್ಟಿಲುಗಳನ್ನು ಹತ್ತಬೇಕು. ಬಿಳಿ ಅಮೃತಶಿಲೆಯಿಂದ ಮಾಡಲ್ಪಟ್ಟ ಈ ದೇವಾಲಯಗಳು 3.5 ಕಿಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿವೆ. ಇಲ್ಲಿರುವ ಅತ್ಯಂತ ಹಳೆಯ ದೇವಾಲಯವನ್ನು 11 ಅಥವಾ 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯಗಳನ್ನು 16 ಬಾರಿ ಪುನರ್ ನಿರ್ಮಿಸಲಾಗಿದೆ.

ಸುಮಾರು 200 ಜೈನ ಸನ್ಯಾಸಿಗಳು 250 ಕಸಾಯಿ ಖಾನೆಗಳನ್ನು ವಿರೋಧಿಸಿ ಮುಷ್ಕರ ನಡೆಸಿದರು. ಇದಾದ ನಂತರ ಸರ್ಕಾರ ತಲೆ ಬಾಗಬೇಕಾಯಿತು. ಈ ನಗರವನ್ನು ಮಾಂಸ ಮುಕ್ತ ವಲಯ ಎಂದು ಘೋಷಿಸಲಾಯಿತು. ಇದಕ್ಕಾಗಿ 2014ರಲ್ಲಿ ಇಲ್ಲಿ ಕಾನೂನುರೂಪಿಸಲಾಗಿದೆ.

ಇದಲ್ಲದೆ ಶತ್ರುಂಜಯ ಬೆಟ್ಟದ ಮೇಲೆ ಕುಮಾರಪಾಲ, ವಿಮಲಶ, ಸಂಪ್ರತಿರಾಜ ಮೊದಲಾದವರ ದೇವಾಲಯಗಳಿವೆ. ಅದರ ಕೆತ್ತನೆಗಳು ಮತ್ತು ಶಿಲ್ಪಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ.