HomeNewsSukanya samriddhi Yojana: ಅಂಚೆ ಕಚೇರಿ ಯೋಜನೆಯಲ್ಲಿ ಹೊಸ ನೀತಿ ! ಅಕ್ಟೋಬರ್ 1 ರಿಂದ...

Sukanya samriddhi Yojana: ಅಂಚೆ ಕಚೇರಿ ಯೋಜನೆಯಲ್ಲಿ ಹೊಸ ನೀತಿ ! ಅಕ್ಟೋಬರ್ 1 ರಿಂದ ಈ ನಿಯಮ ಜಾರಿ !

Hindu neighbor gifts plot of land

Hindu neighbour gifts land to Muslim journalist

Sukanya samriddhi yojana : ‘ಬೇಟಿ ಪಡಾವೋ-ಬೇಟಿ ಬಚಾವೋ’ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆಯನ್ನು (Sukanya samriddhi yojana ) ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ  ಖಾತೆಯನ್ನು ತೆರೆಯಬಹುದು.

ಈ ಯೋಜನೆಯು ಹೆಚ್ಚಿನ ಬಡ್ಡಿದರ ಮತ್ತು ಹಲವಾರು ತೆರಿಗೆ ಪ್ರಯೋಜನಗಳನ್ನು  ನೀಡುತ್ತದೆ.   ಈ ಯೋಜನೆಯಲ್ಲಿ ಪೋಷಕರು ಹೆಣ್ಣು ಮಗುವಿನ ಹೆಸರಿನಲ್ಲಿ ಕನಿಷ್ಠ 250 ರೂ ಮತ್ತು ಗರಿಷ್ಠ 1,50,000 ವರೆಗೆ  ಠೇವಣಿ  ಮಾಡಬಹುದು.

ಇದೀಗ ಅಕ್ಟೋಬರ್ 1,2024 ರಿಂದ ಕೆಲವು ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳ ಮಾರ್ಗಸೂಚಿಗಳನ್ನು ಅಂಚೆ ಕಚೇರಿ ಮೂಲಕ ಬಿಡುಗಡೆ ಮಾಡಲಾಗಿದ್ದು, ಈ ಹೊಸ ಮಾರ್ಗ ಸೂಚಿಗಳು ಸುಕನ್ಯಾ ಸಮೃದ್ಧಿ ಖಾತೆಯನ್ನು ಹೊಂದಿರುವ ಗ್ರಾಹಕರ ಮೇಲೆ ಪರಿಣಾಮ ಬೀಳಲಿದೆ.

ಹೌದು, ಇನ್ಮೇಲೆ ಒಂದು ಮಗುವಿನ ಹೆಸರಿನಲ್ಲಿ ಒಂದೇ ಖಾತೆಗೆ ಅವಕಾಶ. ಅದು ಕೂಡಾ ಪೋಷಕರು ಅಥವಾ ಕಾನೂನು ಪಾಲರು ತೆರೆಯಬೇಕು. ಅದು ಬಿಟ್ಟು ಅಜ್ಜಿಯರು ತೆರೆಯುವಂತಿಲ್ಲ. ಯೋಜನೆಯ ನಿಯಮಗಳನ್ನು ಮುರಿದರೆ ಖಾತೆಯನ್ನು ಮುಚ್ಚಲಾಗುತ್ತದೆ.

ಒಂದುವೇಳೆ ಮಗುವಿನ ಹೆಸರಿನಲ್ಲಿ ತೆರೆಯಲಾದ ತಪ್ಪು ಖಾತೆಗಳನ್ನು ಸರಿಪಡಿಸಿದರೆ ಮಾತ್ರ ಹೂಡಿಕೆ ಮೇಲೆ ಬಡ್ಡಿ ನೀಡಲಾಗುತ್ತದೆ. ಇಲ್ಲವಾದರೆ ಬಡ್ಡಿ ಶೂನ್ಯವಾಗುವುದು. ಈ ನಿಟ್ಟಿನಲ್ಲಿ  ಖಾತೆದಾರರು ಅಥವಾ ಪೋಷಕರಿಂದ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲು ಎಲ್ಲಾ ಅಂಚೆ ಕಚೇರಿಗಳಿಗೆ ತಿಳಿಸಲಾಗಿದೆ.

RELATED ARTICLES

Most Popular

Recent Comments