Home News ಸುಬ್ರಹ್ಮಣ್ಯ:ಡಿಸೆಂಬರ್ 09 ರಂದು ಕುಕ್ಕೆ ಪುರದೊಡೆಯನ ಷಷ್ಠಿ ಬ್ರಹ್ಮರಥೋತ್ಸವ!! ಸಹಾಯಕ ಆಯುಕ್ತರ ನೇತೃತ್ವದ ಪೂರ್ವಭಾವಿ ಸಭೆಯಲ್ಲಿ...

ಸುಬ್ರಹ್ಮಣ್ಯ:ಡಿಸೆಂಬರ್ 09 ರಂದು ಕುಕ್ಕೆ ಪುರದೊಡೆಯನ ಷಷ್ಠಿ ಬ್ರಹ್ಮರಥೋತ್ಸವ!! ಸಹಾಯಕ ಆಯುಕ್ತರ ನೇತೃತ್ವದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ

Hindu neighbor gifts plot of land

Hindu neighbour gifts land to Muslim journalist

ಮಹಾತೋಭಾರ ಕುಕ್ಕೆ ಸುಬ್ರಹ್ಮಣ್ಯನ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯು ಪುತ್ತೂರು ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್ ಅಧ್ಯಕ್ಷತೆಯಲ್ಲಿ ನಡೆಯಿತು.

ನವೆಂಬರ್ 30 ರಂದು ಮೂಲ ಮೃತ್ತಿಕೆ ತೆಗೆಯುವ ಕಾರ್ಯಕ್ರಮದಿಂದ ಡಿಸೆಂಬರ್ 01 ರಂದು ಕೊಪ್ಪರಿಗೆ ಏರಿ ಮಹೋತ್ಸವ ಪ್ರಾರಂಭವಾಗಲಿದೆ.ಡಿಸೆಂಬರ್ 03 ರಂದು ಲಕ್ಷದೀಪೋತ್ಸವ 07 ಹಾಗೂ 08 ಕ್ಕೆ ಚೌತಿ, ಪಂಚಮಿ ರಥೋತ್ಸವ ನಡೆದು 09 ರಂದು ಬ್ರಹ್ಮರಥೋತ್ಸವ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ, ಧಾರ್ಮಿಕ ಪರಿಷತ್ ಸದಸ್ಯರು,ಆಡಳಿತ ಮಂಡಳಿ ಸದಸ್ಯರು, ಮಾಸ್ಟರ್ ಪ್ಲಾನ್ ಪ್ರಮುಖರು,ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು,ಸ್ಥಳೀಯ ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.