

Hampi : ಹಂಪಿ ಉತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಗುರುತಿಸದೇ ನೀವು ಯಾರು ಎಂದು ಕೇಳಿದ ಪ್ರಸಂಗ ನಡೆದಿದೆ.
ಹೌದು, ಹಂಪಿ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಅವರನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರೆತೇ ಬಿಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಶಿವರಾಜ್ಕುಮಾರ್, ಅಶ್ವಿನಿ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ಮುಖ್ಯಮಂತ್ರಿಗಳು ಆಗಮಿಸಿದ ಬಳಿಕ, ಸಹಜವಾಗಿ ಅಶ್ವಿನಿ ಅವರು ಸಿದ್ದರಾಮಯ್ಯ ಅವರಿಗೆ ನಮಸ್ಕರಿಸಿದರು. ಆಗ ಅವರು ಯಾರು ಎಂದು ಮರೆತ ಸಿದ್ದರಾಮಯ್ಯ ಪಕ್ಕಕ್ಕೆ ನೋಡಿ ಇವರು…. ಎಂದು ಪ್ರಶ್ನಿಸಿದರು. ಬಳಿಕ ಪಕ್ಕದಲ್ಲಿ ಇದ್ದವರು ಇವರು ಪುನೀತ್ ರಾಜ್ಕುಮಾರ್ ಅವರ ಪತ್ನಿ ಎಂದು ಹೇಳಿದಾಗ, ಅಶ್ವಿನಿ ಅವರೇ ಇರಲಿ ಬಿಡಿ, ನೋಡಿ ತುಂಬಾ ದಿನವಾಯ್ತಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಈ ನಡೆಯನ್ನು ಅಪ್ಪು ಅಭಿಮಾನಿಗಳು ವಿರೋಧಿಸಿದ್ದಾರೆ. ಅಶ್ವಿನಿ ಮೇಡಂ ಅವರನ್ನೇ ಹೇಗೆ ಸಿದ್ದರಾಮಯ್ಯನವರು ಮರೆಯಲು ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ. ಪುನೀತ್ ರಾಜ್ ಅವರು ಈ ರಾಜ್ಯದ ಜನತೆಗೆ ಮಾಡಿರುವ ಸೇವೆ ಅಪಾರವಾದದ್ದು. ಅಷ್ಟೇ ಅಲ್ಲದೇ ಅಶ್ವಿನಿ ಅವರು ಕೂಡ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಲೇ ಇದ್ದಾರೆ. ಅವರನ್ನೇ ನೀವ್ಯಾರು ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿರೋದು ಅಸಹಜವಾದದ್ದು ಎಂದು ಅಪ್ಪು ಫ್ಯಾನ್ಸ್ ಕಮೆಂಟ್ಗಳಲ್ಲಿ ತಿಳಿಸುತ್ತಿದ್ದಾರೆ













