Home News ಎಸ್.ಡಿ.ಎಂ. ಕಲಾ ಕೇಂದ್ರಕ್ಕೆ ಅಮೇರಿಕಾ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ದಂಪತಿ ಭೇಟಿ, ಒಂದು...

ಎಸ್.ಡಿ.ಎಂ. ಕಲಾ ಕೇಂದ್ರಕ್ಕೆ ಅಮೇರಿಕಾ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ದಂಪತಿ ಭೇಟಿ, ಒಂದು ಲಕ್ಷ ರೂ. ದೇಣಿಗೆ

Hindu neighbor gifts plot of land

Hindu neighbour gifts land to Muslim journalist

ಉಜಿರೆ: ಅಮೇರಿಕಾದ ಖ್ಯಾತ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ಮತ್ತು ನರ್ಸಿಂಗ್ ಕಾಲೇಜು ಪ್ರಾಧ್ಯಾಪಕಿ ಡಾ. ಕಾನಿ ಗೌಡ ಶುಕ್ರವಾರ ಉಜಿರೆಯಲ್ಲಿರುವ ಎಸ್.ಡಿ.ಎಂ. ಕಲಾಕೇಂದ್ರಕ್ಕೆ ಭೇಟಿ ನೀಡಿ ಸಂಗೀತ, ಯಕ್ಷಗಾನ, ನೃತ್ಯ ಹಾಗೂ ರಂಗ ತರಬೇತಿ ಬಗ್ಯೆ ಸವಿವರ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದರು. ಕಲಾಕೇoದ್ರದ ಆಡಳಿತ ಮಂಡಳಿಗೆ ಅವರು ಒಂದು ಲಕ್ಷ ರೂ. ದೇಣಿಗೆ ನೀಡಿದರು.

ಎಸ್.ಡಿ.ಎಂ. ಕಲಾಕೇಂದ್ರದ ವಿಭಾಗದ ಸಂಯೋಜಕ ತೃಪ್ತಕುಮಾರ್ ಜೈನ್, ವಸತಿ ನಿಲಯಗಳ ವಿದ್ಯಾರ್ಥಿಗಳ ಕ್ಷೇಮಪಾಲನಾಧಿಕಾರಿ ಯುವರಾಜ ಪೂವಣಿ, ತರಬೇತುದಾರರಾದ ಯಶವಂತ, ಬೆಳ್ತಂಗಡಿ, ಚೈತ್ರ ಧರ್ಮಸ್ಥಳ ಮತ್ತು ಅರುಣ್ ಹಾಗೂ ಕಲಾಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.
ಡಾ. ರಾಮಯ್ಯ ಗೌಡ ಮೂಲತಃ ಬೆಳ್ತಂಗಡಿ ತಾಲ್ಲೂಕಿನ ಕಡಿರುದ್ಯಾವರ ಗ್ರಾಮದ ವಳಂಬ್ರ ನಿವಾಸಿಯಾಗಿದ್ದು, ಉಜಿರೆಯ ಎಸ್.ಡಿ.ಎಂ. ಸೆಕೆಂಡರಿ ಶಾಲೆಯ (ಅಂದಿನ ಡಿ.ಕೆ.ವಿ. ಹೈಸ್ಕೂಲ್) ಹಿರಿಯ ವಿದ್ಯಾರ್ಥಿಯಾಗಿದ್ದರು.