ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜೂರ್ ಸಂಘದ ವಿನಂತಿಯ ಮೇರೆಗೆ ರಬ್ಬರ್ ಕಾರ್ಮಿಕರಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸುವಂತೆ ಹಾಗೂ ಕಾರ್ಮಿಕರಿಗೆ ಇನ್ನಿತರ ಸಹಾಯದ ಯೋಜನೆಗಳನ್ನು ತರುವಂತೆ ರಬ್ಬರ್ ಮಂಡಳಿಯ ಪ್ರಧಾನ ಕಾರ್ಯ ನಿರ್ವಹಣಾಧಿಕಾರಿ ಡಾ.ವಸಂತ ಗೇಸನ್ ಅವರಿಗೆ ಪತ್ರ ಬರೆದು ಕೋರಿರುತ್ತಾರೆ.

ಈ ಸಂದರ್ಭ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಯಲ್ಲಿರುವ ರಬ್ಬರ್ ಕಾರ್ಮಿಕರ ಜೀವನಭದ್ರತೆಗಾಗಿ ಇನ್ನೂರೆನ್ಸ್ ಯೋಜನೆಗಳು, ಮನೆ ನಿರ್ಮಾಣಕ್ಕೆ ಸಹಾಯಧನಗಳು ಹಾಗೂ ನಿವೇಶನ ರಹಿತ ಕಾರ್ಮಿಕರಿಗೆ ನಿವೇಶನೆ ನೀಡುವಂತೆ ಹಾಗೂ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಗಳು ವೈದ್ಯಕೀಯ ಚಿಕಿತ್ಸೆಗಳು, ಕಾರ್ಮಿಕರ ವೈವಾಹಿಕ ಸಹಾಯಧನಗಳು ಸೇರಿದಂತೆ ಈ ಎಲ್ಲಾ ಯೋಜನೆಗಳ ಅಲ್ಪ ಮೊತ್ತವನ್ನು ಪರಿಷ್ಕರಿಸಿ ದ್ವಿಗುಣಗೊಳಿಸುವಂತೆ ಈ ಬಗ್ಗೆ ಸೂಕ್ತ ಕ್ರಮವನ್ನು ವಹಿಸುವಂತೆ ಈ ಮನವಿಯಲ್ಲಿ ಕೋರಿರುತ್ತಾರೆ.
