Home News Mangaluru: ತಾಯಿಯನ್ನು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲು ಬಂದಿದ್ದ ಯುವತಿ ಇದ್ದಕ್ಕಿದ್ದಂತೆ ನಾಪತ್ತೆ!! ರೇಣುಕಾ ಹೋದದಾದ್ರು ಏಲ್ಲಿಗೆ...

Mangaluru: ತಾಯಿಯನ್ನು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲು ಬಂದಿದ್ದ ಯುವತಿ ಇದ್ದಕ್ಕಿದ್ದಂತೆ ನಾಪತ್ತೆ!! ರೇಣುಕಾ ಹೋದದಾದ್ರು ಏಲ್ಲಿಗೆ !!?

Hindu neighbor gifts plot of land

Hindu neighbour gifts land to Muslim journalist

Mangaluru: ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ವೆನ್ಲಾಕಿಗೆ ತನ್ನ ತಾಯಿಯನ್ನು ಸೇರಿಸಲು ಬಂದಂತಹ ಯುವತಿ ಒಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾದಂತಹ ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ಮಂಗಳೂರು(Mangaluru ) ಹೊರವಲಯದ ವಾಮಂಜೂರು ಪಡ್ಡಾಯಿಬೆಟ್ಟು ಕೆಲರೈ ಕೋಡಿ ನಿವಾಸಿ ರೇಣುಕಾ ದೇವಿಂದ್ರಪ್ಪ ಏರಿಮನಿ (29) ಅವರು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ತನ್ನ ತಾಯಿಯನ್ನು ಸೇರಿಸಲು ಬಂದಿದ್ದರು. ಆಸ್ಪತ್ರೆಯಿಂದಲೇ ಕಾಣೆಯಾಗಿದ್ದಾಳೆ.

ರೇಣುಕಾ ಎಲ್‌ಎಲ್‌ಬಿ ಮುಗಿಸಿದ್ದು, ಮಂಗಳೂರು ನ್ಯಾಯಾಲಯದಲ್ಲಿ ಕೆಲಸ ಮಾಡಿಕೊಂಡಿದ್ದರು. ಅ. 28ರಂದು ಬೆಳಗ್ಗೆ 9.30ಕ್ಕೆ ತಾಯಿ ನೀಲವ್ವ ದೇವಿಂದ್ರಪ್ಪ ಏರಿಮನಿ ಅವರನ್ನು ವೆನ್ಲಾಕ್‌ಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. 10 ಗಂಟೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಚೀಟಿ ಮಾಡಿಸುವ ವೇಳೆ ರೇಣುಕಾ ಅವರು ವಾಶ್‌ ರೂಂಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ವಾಪಾಸು ಬಂದಿಲ್ಲ. ಎನ್ನಲಾಗಿದೆ.