HomeNewsKarnataka Bandh: ಕಾವೇರಿ ಹೋರಾಟದ ಉಗ್ರ ಪ್ರತಿಭಟನೆಯಲ್ಲಿ ಭಾಗಿಯಾದ ಶ್ವಾನ ; ಸ್ಟಾಲಿನ್ ಪ್ರತಿಕೃತಿ ಕಚ್ಚಿ...

Karnataka Bandh: ಕಾವೇರಿ ಹೋರಾಟದ ಉಗ್ರ ಪ್ರತಿಭಟನೆಯಲ್ಲಿ ಭಾಗಿಯಾದ ಶ್ವಾನ ; ಸ್ಟಾಲಿನ್ ಪ್ರತಿಕೃತಿ ಕಚ್ಚಿ ಆಕ್ರೋಶ – ನಾಯಿಯ ರೋಷ ಕಂಡು ಹೌಹಾರಿದ ಜನ !

Hindu neighbor gifts plot of land

Hindu neighbour gifts land to Muslim journalist

Karnataka Bandh: ಕಾವೇರಿ ನದಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಅಂಗವಾಗಿ, ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ (Karnataka Bandh) ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಹೋರಾಟ ಭುಗಿಲೆದ್ದಿದೆ.

ಒಂದೆಡೆ ಟೈಯರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷ ಎಂದರೆ ಇದೇ ವೇಳೆ ಕಾವೇರಿ ಹೋರಾಟದಲ್ಲಿ ಶ್ವಾನವೊಂದು ಭಾಗಿಯಾಗಿದೆ.

ವಿಶೇಷ ಎಂದರೆ, ಕಾವೇರಿ ನೀರಿಗಾಗಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಶ್ವಾನವೊಂದು ಭಾಗಿಯಾಗಿ ಹೋರಾಟಕ್ಕೆ ಸಾಥ್ ನೀಡಿದ್ದು ಅಲ್ಲದೆ, ತಮಿಳುನಾಡು ಸಿಎಂ ಸ್ಟಾಲಿನ್ ಅವರ ಪ್ರತಿಕೃತಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಪ್ರತಿಭಟನೆಯಲ್ಲಿ ಸಾಗುವ ಮೂಲಕ ಎಲ್ಲರನ್ನು ಬೆರಗು ಗೊಳಿಸಿದೆ .

 

ಇದನ್ನು ಓದಿ: Rain In Karnataka: ಸುರಿಯಲಿದ್ದಾನೆ ಬಿರುಸಾಗಿ ವರುಣ!!! ಉಡುಪಿಗೆ ಆರೆಂಜ್‌, ದ.ಕ. ಜಿಲ್ಲೆಗೆ ಯೆಲ್ಲೊ ಅಲರ್ಟ್‌! ಮೀನುಗಾರರೇ ಸಮುದ್ರಕ್ಕಿಳಿಯುವ ಮೊದಲು ಎಚ್ಚರ!!!

RELATED ARTICLES

Most Popular

Recent Comments