ಉಡುಪಿ (ಮಾ.15): ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಅದರಂತೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಗಿತ್ತು.

ಈ ತಿಂಗಳಲ್ಲಿ 32 ಗಾಲಿಕುರ್ಚಿಗಳನ್ನು ವಿತರಿಸುವುದಾಗಿ ನಿರ್ಧರಿಸಿದ್ದು ಮುಂಡ್ಕೂರಿನ ಶ್ರೀ ಶಶಿಧರ್, ಚಾರದ ಶ್ರೀ ಸಂತೋಷ್ ನಾಯ್ಕ್, ನಂದಿಕೂರಿನ ಶ್ರೀ ವಿದ್ಯಾನಾಥ್ ಶೆಟ್ಟಿ, ಹಜಮಾಡಿಯ ಶ್ರೀ ಜಗದೀಶ್ ರವರಿಗೆ ಉಡುಪಿ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರರು ಶ್ರೀ ಕೆ ವಿಜಯರಾಘವ ರಾವ್, ಭಾರತ್ ವಿಕಾಸ ಪರಿಷತ್ ನ ದಕ್ಷಿಣ ಪ್ರಾಂತ ಸಂಯೋಜಕರಾದ ಶ್ರೀ ಹರಿರಾಮ್ ಶೆಣೈ, ಭಾರತ್ ವಿಕಾಸ ಪರಿಷತ್ ಭಾರ್ಗವ ಶಾಖೆಯ ಕಾರ್ಯದರ್ಶಿ ಶ್ರೀ ಸುಬ್ರಾಯ ಶೆಣೈ, ಸೇವಾಭಾರತಿಯ ಕಾರ್ಯದರ್ಶಿ ಶ್ರೀ ವಿಷ್ಣುಪ್ರಸಾದ್ ತೆಂಕಿಲ್ಲಾಯ ಹಾಗೂ ಉಡುಪಿ URW ಶ್ರೀ ಸರ್ವೋತ್ತಮ್ ಅಮೀನ್ ರವರು ಗಾಲಿಕುರ್ಚಿಯನ್ನು ಹಸ್ತಾಂತರಿಸಿ ಶುಭಹಾರೈಸಿದರು.
