HomeNewsಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ಎಕ್ಸೆಲ್ ಗುರುವಾಯನಕೆರೆ ರಾಜ್ಯದಲ್ಲೇ ಅಮೋಘ ಸಾಧನೆ

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ಎಕ್ಸೆಲ್ ಗುರುವಾಯನಕೆರೆ ರಾಜ್ಯದಲ್ಲೇ ಅಮೋಘ ಸಾಧನೆ

Hindu neighbor gifts plot of land

Hindu neighbour gifts land to Muslim journalist

ರಾಷ್ಟ್ರ ಮಟ್ಟದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿ, ಎನ್ ಐಐಟಿ, ಐಐಐಟಿ ಪ್ರವೇಶಾತಿಗಾಗಿ ನಡೆಯುವ ಜೆಇಇ ಮೈನ್ಸ್ ಫೇಸ್ ಒನ್ ಫಲಿತಾಂಶದಲ್ಲೂ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ಶಿಕ್ಷಣ ಪ್ರೇಮಿಗಳು ಕಣ್ಣರಳಿಸಿ ನೋಡುವಂಥ ಫಲಿತಾಂಶ ಎಕ್ಸೆಲ್ ನದ್ದಾಗಿದೆ.

ಮೌರ್ಯ ವೈ ಡಿ – 99.6691 ಪರ್ಸೆಂಟೈಲ್ ಪಡೆದು ಜಿಲ್ಲೆಯಲ್ಲಿಯೇ ಅಗ್ರಸ್ಥಾನಿಯಾಗಿದ್ದಾರೆ.
ಸ್ವಸ್ತಿಕ್ ಎಂ ಜೈನ್ – 99.4965,
ಅಕ್ಷಯ್ ಎ – 99.3081, ಅಭಿನವ ಕೆ ಮಯ್ಯ – 98.6487,
ತೇಜಲ್ ವಿ ವಾಂಟಕರ್ – 98.5584,
ಸಮ್ಯಕ್ ವಿನಯ್ – 98.5468,
ಶಮಿತ್ ಗೌಡ ಎ ಎಸ್ 98.4138,
ಕೆ ಕೆ ಸಾರ್ವಿಕಾ – 98.3106, ಶಶಾಂಕ್ ಗೌಡ ಆರ್ – 98.1685,
ಯಶಸ್ ಗೌಡ ಎನ್ – 98.1685
ಯಶಸ್ ಜಿ ಎಸ್ – 98.1172 ಪರ್ಸಂಟೈಲ್ ಪಡೆದುಕೊಂಡಿದ್ದಾರೆ.

97 ಶೇಕಡಾಕ್ಕಿಂತ ಅಧಿಕ 24 ವಿದ್ಯಾರ್ಥಿಗಳು,
95 ಶೇಕಡಾಕ್ಕಿಂತ ಅಧಿಕ 37 ವಿದ್ಯಾರ್ಥಿಗಳು ಹಾಗೂ
90 ಶೇಕಡಾಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದ ವಿದ್ಯಾರ್ಥಿಗಳ ಸಂಖ್ಯೆ 83.

ರಾಷ್ಟ್ರಮಟ್ಟದಲ್ಲಿ ರಾಜಸ್ಥಾನದ ಕೋಟಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುವ ಕೇಂದ್ರವಾಗಿದೆ. ಅದೇ ಮಾದರಿಯಲ್ಲಿ ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರವಾಗಿ ತರಗತಿ,ಕೋಚಿಂಗ್ ,ಸ್ಟಡಿ ಅವರ್,ಟೆಸ್ಟ್,ಆನ್ ಲೈನ್ ಟೆಸ್ಟಗಳನ್ನು ನಡೆಸಿದ ಕಾರಣ ಅತ್ಯುತ್ತಮ ಫಲಿತಾಂಶ ಬಂದಿದೆ. ಹತ್ತನೆಯ ತರಗತಿಯಲ್ಲಿ ಸಾಮಾನ್ಯ ಅಂಕ ಪಡೆದುಕೊಂಡ ಕೆಲವು ವಿದ್ಯಾರ್ಥಿಗಳು ಕೂಡಾ ಎಕ್ಸೆಲ್ ನಲ್ಲಿ ಓದಿ, ಜೆಇಇಯಲ್ಲಿ ಅತ್ಯುತ್ತಮ ಅಂಕ ಪಡೆದುಕೊಂಡಿರುವುದು ವಿಶೇಷ. ಸಾಧಿಸುವ ಛಲ, ನಿರಂತರ ಅಭ್ಯಾಸ, ಪರಿಣಿತ ಉಪನ್ಯಾಸಕರ ಮಾರ್ಗದರ್ಶನ, ನಿಯಮಿತವಾಗಿ ಬರೆಯುವ ಅಣಕು ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಜಯಿಗಳನ್ನಾಗಿಸುತ್ತದೆ ಎನ್ನುವ ಬಲ್ಲವರ ಅಭಿಮತಕ್ಕೆ ಎಕ್ಸೆಲ್ ವಿದ್ಯಾರ್ಥಿಗಳು ತಾಜಾ ಉದಾಹರಣೆಯಾಗಿದ್ದಾರೆ.

99 ಶೇಕಡಾಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದ ಮೂವರು ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷದಂತೆ ಹಾಗೂ 90 ಶೇಕಡಾಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ವಿತರಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಸಾಮಾನ್ಯ ವ್ಯಕ್ತಿ ಕೂಡಾ ಅಸಾಧಾರಣವಾಗಿ ಬೆಳೆಯುವುದು ಶಿಕ್ಷಣದ ಮೂಲಕ. ವಿದ್ಯೆ ಒಂದಿದ್ದರೆ ಮತ್ತೆಲ್ಲವೂ ಬದುಕಿನಲ್ಲಿ ಲಭಿಸಬಹುದು. ಹಾಗಾಗಿ ವಿದ್ಯೆ ಯಾರೂ ಕದಿಯಲಾಗದ, ಹಂಚಿದಷ್ಟು ಹೆಚ್ಚಾಗುವ, ಯಾವತ್ತಿಗೂ ಕರಗದ ಸಂಪತ್ತು. ಗುಣಮಟ್ಟದ ಶಿಕ್ಷಣವೇ ರಾಷ್ಟ್ರ ನಿರ್ಮಾಣಕ್ಕೆ ಅಡಿಗಲ್ಲು ಎಂದು ಎಕ್ಸೆಲ್ ಭಾವಿಸುತ್ತದೆ. ಇಂಥ ಅಪೂರ್ವ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು, ಪ್ರಾಂಶುಪಾಲರು – ಪ್ರಾಧ್ಯಾಪಕರು, ನಿಲಯಪಾಲಕರು, ಹಾಗೂ ವಿದ್ಯಾರ್ಥಿಗಳ ಹೆತ್ತವರ ಸಹಕಾರವನ್ನು ಈ ಕ್ಷಣದಲ್ಲಿ ಸ್ಮರಿಸಿಕೊಂಡು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಸುಮಂತ್ ಕುಮಾರ್ ಜೈನ್
ಅಧ್ಯಕ್ಷರು
ಆಡಳಿತ ಮಂಡಳಿ
ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ

 

RELATED ARTICLES

Most Popular

Recent Comments