

Indian Railway : ಭಾರತೀಯ ರೈಲ್ವೆ ಇಲಾಖೆ ರೈಲ್ವೆ ಪ್ರಯಾಣಿಕರಿಗೆ ಹೊಸದಾದ ಕಠಿಣ ನಿಯಮವನ್ನು ಜಾರಿಗೊಳಿಸಿದ್ದು ಇನ್ಮುಂದೆ ಪ್ರಯಾಣಿಕರು ಬುಕ್ ಮಾಡಿದ ಸ್ಥಳದಲ್ಲಿ ರೈಲು ಹತ್ತದಿದ್ದರೆ ಆ ಟಿಕೆಟ್ ಅನ್ನು ತಕ್ಷಣ ಕ್ಯಾನ್ಸಲ್ ಮಾಡುವುದಾಗಿ ತಿಳಿಸಲಾಗಿದೆ.
ಇದುವರೆಗೂ ನಿಗದಿತ ನಿಲ್ದಾಣಗಳಲ್ಲಿ ಕಾಯ್ದಿರಿಸಿದ ಪ್ರಯಾಣಿಕರು ರೈಲು ಹತ್ತದಿದ್ದರೆ ಸೀಟನ್ನು ಮುಂದಿನ ಎರಡು ನಿಲ್ದಾಣಗಳವರೆಗೆ ಖಾಲಿ ಬಿಡುತ್ತಿದ್ದರು. ಆದರೆ ಈಗ ಕಾಯ್ದಿರಿಸುವ ಟಿಕೆಟ್ ವಿಧಾನದಲ್ಲಿ ಭಾರತೀಯ ರೈಲ್ವೆ ಕಠಿಣ ನಿಯಮ ಪರಿಚಯಿಸಿದ್ದು, ಈ ನಿಯಮದನ್ವಯ ಒಂದು ವೇಳೆ ಕಾಯ್ದಿರಿಸಿದ ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ರೈಲು ಹತ್ತದಿದ್ದರೆ ಅದು ತಕ್ಷಣ HHT ಟ್ಯಾಬ್ಲೆಟ್ ಗಳಲ್ಲಿ ದಾಖಲಾಗುತ್ತದೆ.
ನಂತರ ಕಾಯುವಿಕೆ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ದಾಖಲಾದ ಸೀಟು ನೀಡಲಾಗುವುದು. ಸೀಟು ಬೇರೊಬ್ಬರಿಗೆ ನೀಡಿದ ಬಗ್ಗೆ ಮೂಲ ಪ್ರಯಾಣಿಕರಿಗೆ ಸಂದೇಶ ರವಾನೆ ಆಗುತ್ತದೆ. ಈ ಬಗ್ಗೆ ರೈಲ್ವೆ ಇಲಾಖೆಗೆ ಮಹತ್ವದ ಆದೇಶವನ್ನು ಹೊರಡಿಸಿದೆ.