Home News ವಿಧಾನಸಭೆ ಹೈ ಡ್ರಾಮ: ಬಿ ಕೆ ಹರಿಪ್ರಸಾದ್‌ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಇಲ್ಲಿದೆ

ವಿಧಾನಸಭೆ ಹೈ ಡ್ರಾಮ: ಬಿ ಕೆ ಹರಿಪ್ರಸಾದ್‌ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನ ಆರಂಭದಲ್ಲಿ ರಾಜ್ಯಪಾಲ ಥಾವರ್‌ ಚಂದರ್‌ ಅವರು ಒಂದೇ ವಾಕ್ಯದಲ್ಲಿ ಭಾಷಣ ಮುಗಿಸಿ ನಿರ್ಗಮಿಸುವಾಗ ಕಾಂಗ್ರೆಸ್‌ ನವರು ಹೈಡ್ರಾಮ ಮಾಡಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್‌ ಎಂಎಲ್ಸಿ ಬಿ.ಕೆ ಹರಿಪ್ರಸಾದ್‌ ಅವರ ಬಟ್ಟೆ ಹರಿದಿದೆ.

ಬಿಜೆಪಿಯವರೇ ಬಟ್ಟೆ ಎಳೆದು ಹರಿದಿದ್ದಾರೆ ಎಂದು ಹರಿಪ್ರಸಾದ್‌ ಆರೋಪ ಮಾಡಿದ್ದಾರೆ. ಆದರೆ ವೈರಲ್‌ ವಿಡಿಯೋದಲ್ಲಿ ಬಿಕೆ ಹರಿಪ್ರಸಾದ್‌ ಅವರನ್ನು ಮಾರ್ಷಲ್‌ಗಳ ಅಲುಗಾಡಲು ಸಾಧ್ಯವಾಗದಂತೆ ಪಕ್ಕಕ್ಕೆ ಎಳೆದೊಯ್ದು ಬಿಟ್ಟಿದ್ದು, ಈ ವೇಳೆ ಹರಿಪ್ರಸಾದ್‌ ಬಟ್ಟೆ ಹರಿದಿದೆ ಎನ್ನಲಾಗಿದೆ.

ಬಿ.ಕೆ.ಹರಿಪ್ರಸಾದ್‌, ಐವಾನ್‌ ಡಿಸೋಜಾ, ಶಾಸಕರಾದ ಶರತ್‌ ಬಚ್ಚೇಗೌಡ, ಪ್ರದೀಪ್‌ ಈಶ್ವರ್‌, ಹೆಚ್‌.ಸಿ.ಬಾಲಕೃಷ್ಣ ಅವರು ಘೋಷಣೆ ಕೂಗಿದ್ದಾರೆ. ಆಗ ಹರಿಪ್ರಸಾದ್‌ ಅವರನ್ನು ಮಾರ್ಷಲ್‌ಗಳು ಪಕ್ಕಕ್ಕೆ ಎಳೆದೊಯ್ದಿದ್ದು, ವಿಡಿಯೋದಲ್ಲಿ ಕಂಡು ಬಂದಿದೆ.