Home » ದೇವಸ್ಥಾನ ಧ್ವಂಸ ಪ್ರಕರಣ | ರಾಜಿನಾಮೆಗೆ ಮುಂದಾದ ಆರ್ಯಾಪು ಗ್ರಾ.ಪಂ.ನ 5 ಸದಸ್ಯರು

ದೇವಸ್ಥಾನ ಧ್ವಂಸ ಪ್ರಕರಣ | ರಾಜಿನಾಮೆಗೆ ಮುಂದಾದ ಆರ್ಯಾಪು ಗ್ರಾ.ಪಂ.ನ 5 ಸದಸ್ಯರು

0 comments

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ರಾಜ್ಯದಲ್ಲಿ ದೇವಸ್ಥಾನ ತೆರವು ವಿಚಾರ ರಾಜ್ಯ ಬಿಜೆಪಿ ಸರಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದ್ದಾರೆ.ಜತೆಗೆ ಕೆಲ ಗ್ರಾ.ಪಂ.ಸದಸ್ಯರೂ ರಾಜಿನಾಮೆಗೆ ಮುಂದಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾ.ಪಂ.ನ ಐದು ಮಂದಿ ಸದಸ್ಯರು ರಾಜಿನಾಮೆ ನೀಡಲು ಮುಂದಾಗಿದ್ದಾರೆ.

ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ಪವಿತ್ರ ರೈ ಬಾಳಿಲ,ಚೇತನ್ ಕುಮಾರ್,ಹರೀಶ್ ನಾಯಕ್ ವಾಗ್ಲೆ,ಗಿರೀಶ್ ಗೌಡ ಮರಿಕೆ,ಅಶೋಕ್ ಕುರಿಯ ಎಂಬವರು ರಾಜಿನಾಮೆ ನೀಡಲು ಮುಂದಾಗಿದ್ದಾರೆ.

ಇವರು ಬಿಜೆಪಿ ಬೆಂಬಲಿತರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.ಇದೀಗ ತಮ್ಮ ರಾಜಿನಾಮೆ ಇಂಗಿತವನ್ನು ಬಿಜೆಪಿ ಮಂಡಲ ಅಧ್ಯಕ್ಷರಿಗೆ ನೀಡಿದ್ದಾರೆ ಎನ್ನಲಾಗಿದೆ.

banner

You may also like

Leave a Comment