Home » ಶಿಕ್ಷಕರಿಗೆ ಸಿಹಿ ಸುದ್ದಿ: ಹೆಚ್‌ಎಂ ಸ್ಥಾನ ನೇಮಕಾತಿಯಲ್ಲಿ ಬದಲಾವಣೆ

ಶಿಕ್ಷಕರಿಗೆ ಸಿಹಿ ಸುದ್ದಿ: ಹೆಚ್‌ಎಂ ಸ್ಥಾನ ನೇಮಕಾತಿಯಲ್ಲಿ ಬದಲಾವಣೆ

0 comments

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ರಾಜ್ಯ ಸರಕಾರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರ ನೇಮಕಾತಿಗೆ ಕುರಿತಂತೆ ಸಿಹಿ ಸುದ್ದಿಯನ್ನು ನೀಡಿದೆ. ಈ ಮೂಲಕ ಶೀಘ್ರವೇ ಶಿಕ್ಷಕರಿಗೆ ಬಡ್ತಿ ದೊರಕಲಿದೆ. ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ಅಧಿಕೃತವಾಗಿ ಪ್ರಕಟ ಮಾಡಿದೆ.

ಬಡ್ತಿ ಪ್ರಕ್ರಿಯೆಯಲ್ಲಿನ ಪ್ರಮುಖ ಬದಲಾವಣೆಗಳು ಹೀಗಿವೆ:

* 2:1 ಅನುಪಾತದಲ್ಲಿ ಬಡ್ತಿ: ಇನ್ಮುಂದೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳನ್ನು 1 ರಿಂದ 5ನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರಿಂದ 2:1 ಅನುಪಾತದಲ್ಲಿ ಮುಂಬಡ್ತಿ ಮೂಲಕ ಭರ್ತಿ ಮಾಡಲಾಗುವುದು.

* ಪ್ರತಿ 3ನೇ ಹುದ್ದೆ ಪದವೀಧರ ಶಿಕ್ಷಕರಿಗೆ: ಪ್ರತಿ ಮೂರನೇ ಖಾಲಿ ಇರುವ ಸ್ಥಾನವನ್ನು ಪದವೀಧರ ಪ್ರಾಥಮಿಕ ಶಿಕ್ಷಕರಿಂದ (GPT) ತುಂಬಲು ನಿರ್ಧರಿಸಲಾಗಿದೆ.

banner

* ಸೇವಾ ಅವಧಿ: ಬಡ್ತಿ ಪಡೆಯಲು ಶಿಕ್ಷಕರು ಆಯಾ ವೃಂದದಲ್ಲಿ ಕನಿಷ್ಠ 12 ವರ್ಷಗಳ ಸೇವೆಯನ್ನು ಪೂರೈಸಿರುವುದು ಕಡ್ಡಾಯವಾಗಿದೆ.

* ಹಿಂತೆಗೆದುಕೊಳ್ಳಲಾಗದ ಆಯ್ಕೆ (Irrevocable Option): ಮುಖ್ಯೋಪಾಧ್ಯಾಯರಾಗಿ ಅಥವಾ ಪ್ರೌಢಶಾಲಾ ಸಹಶಿಕ್ಷಕರಾಗಿ (ಗ್ರೇಡ್-2) ಬಡ್ತಿ ಹೊಂದಲು ಅವಕಾಶವಿರುವುದರಿಂದ, ಬಡ್ತಿ ನೀಡುವ ಮೊದಲು ಶಿಕ್ಷಕರಿಂದ ಬದಲಾಯಿಸಲಾಗದ ಲಿಖಿತ ಅಭಿಮತವನ್ನು ಪಡೆಯಲಾಗುವುದು.

ವಿಶೇಷ ಸೂಚನೆಗಳು:
* 6 ಮತ್ತು 7ನೇ ತರಗತಿಗೆ ಬೋಧನೆ: NCTE ಮಾರ್ಗಸೂಚಿಗಳಂತೆ ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿರುವ 1 ರಿಂದ 5ನೇ ತರಗತಿಯ ಶಿಕ್ಷಕರು, 6 ಮತ್ತು 7ನೇ ತರಗತಿಗಳಿಗೂ ಬೋಧಿಸಲು ಅರ್ಹರಾಗುತ್ತಾರೆ.

* ಹಿರಿತನದ ಆಧಾರದಲ್ಲಿ ಹೊಂದಾಣಿಕೆ: ಒಂದು ವೇಳೆ ನಿಗದಿತ ಅನುಪಾತದಂತೆ ಅರ್ಹ ಶಿಕ್ಷಕರು ಲಭ್ಯವಿಲ್ಲದಿದ್ದರೆ ಅಥವಾ ಬಡ್ತಿ ನಿರಾಕರಿಸಿದರೆ, ಆಡಳಿತಾತ್ಮಕ ಹಿತದೃಷ್ಟಿಯಿಂದ ಲಭ್ಯವಿರುವ ಅರ್ಹ ಶಿಕ್ಷಕರನ್ನು ಪರಿಗಣಿಸಲಾಗುವುದು. ಆದರೆ, ಆ ಸಂದರ್ಭದಲ್ಲಿ ನಷ್ಟವಾದ ಬಡ್ತಿ ಅವಕಾಶಗಳನ್ನು ಮುಂದಿನ ಹಂತದಲ್ಲಿ ಸರಿಪಡಿಸಲಾಗುವುದು.

ಈ ಹೊಸ ನಿಯಮಗಳು ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದಲೇ ಜಾರಿಗೆ ಬರಲಿವೆ.

You may also like