Home News Dry leaves: ಪ್ರಕೃತಿಗೆ ಚೆನ್ನಾಗಿ ಗೊತ್ತು: ತರಗೆಲೆಗಳು ನೆಲಕ್ಕೆ ಬಿದ್ದಾಗ, ಒಳ್ಳೆಯದು ಸಂಭವಿಸುತ್ತದೆ ಎಂದು!

Dry leaves: ಪ್ರಕೃತಿಗೆ ಚೆನ್ನಾಗಿ ಗೊತ್ತು: ತರಗೆಲೆಗಳು ನೆಲಕ್ಕೆ ಬಿದ್ದಾಗ, ಒಳ್ಳೆಯದು ಸಂಭವಿಸುತ್ತದೆ ಎಂದು!

Hindu neighbor gifts plot of land

Hindu neighbour gifts land to Muslim journalist

Dry leaves: ಎಲೆಗಳು ಹೆಚ್ಚಾಗಿ ಕಸವಾಗಿ(Waste) ಕಾಣುತ್ತವೆ. ಅನೇಕರು ಇದನ್ನು ಗೊಂದಲಮಯವಾಗಿ ಕಾಣುತ್ತಾರೆ. ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಕೆಲವು ರೈತರು(Farmer) ಎಲೆಗಳನ್ನು ಸುಡುತ್ತಾರೆ(Burn leaves). ಇನ್ನು ಕೆಲವರು ಗಿಡಗಳ ಬುಡಕ್ಕೆ ಹಾಕಿ ಗೊಬ್ಬರವಾಗಿ(Manure) ಉಪಯೋಗಿಸುತ್ತಾರೆ. ಆದರೆ ಪ್ರಕೃತಿಗೆ(Nature) ಚೆನ್ನಾಗಿ ತಿಳಿದಿದೆ. ಎಲೆಗಳನ್ನು ನೆಲದ ಮೇಲೆ ಹಾಗೆ ಬಿಟ್ಟಾಗ, ಒಳ್ಳೆಯದು ಸಂಭವಿಸುತ್ತದೆ ಎಂದು ಕೃಷಿ ತಜ್ಞ ಹ್ಯಾರಿ ಕ್ಯಾಂಪ್ಬೆಲ್ ಹೇಳುತ್ತಾರೆ.

ಬಿದ್ದ ಎಲೆಗಳು ಸಾವಯವ ಹೊದಿಕೆಯನ್ನು ರೂಪಿಸುತ್ತವೆ, ಹಾಗೆ ಶೀತ ಹವಾಮಾನದಿಂದ ಬೇರುಗಳು ಮತ್ತು ಮಣ್ಣಿನ ಸೂಕ್ಷ್ಮ ಜೀವಿಗಳನ್ನು ರಕ್ಷಿಸುತ್ತದೆ. ಕಾಲಾನಂತರದಲ್ಲಿ, ಸಸ್ಯದ ಬೇರುಗಳು ಎಲೆಗಳನ್ನು ನೈಸರ್ಗಿಕ ಗೊಬ್ಬರವಾಗಿ ಬಳಸಿಕೊಳ್ಳುತ್ತದೆ. ಇದು ಸೂಕ್ಷ್ಮಜೀವಿಗಳ ಸಮೃದ್ಧಿಯಿಂದ ಮಿಶ್ರಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತದೆ. ಹಾಗೆ ಕಂಬಳಿ, ಪರಾಗಸ್ಪರ್ಶಕ ಕೀಟಗಳು ಆಹಾರದ ಮೂಲವಾಗಿ ಬಳಸಿಕೊಳ್ಳುತ್ತವೆ.

ಈ ಸಾವಯವ ಪದಾರ್ಥವು ಭಾರಿ ಮಳೆ ಸುರಿದಾಗ ನೆಲವನ್ನು ನೆನಸಿ ಹದ ಮಾಡಲು ಅನುವು ಮಾಡಿಕೊಡುತ್ತದೆ. ಜೋರು ಮಳೆಗೆ ನೀರು ಪೋಲಾಗಿ ಹರಿದು ಹೋಗದಂತೆ ತಡೆದು ಅಂತರ್ಜಲವನ್ನು ಸೇರುವಂತೆ ಮಾಡುತ್ತವೆ ಈ ತರಗೆಲೆಗಳು. ಹುಲ್ಲುಹಾಸಿನ ಪ್ರದೇಶಗಳಿಗಿಂತ ದಟ್ಟ ಕಾಡಿನ ತರಗೆಲೆ ಪದರಗಳು 10 ರಿಂದ 15 ಪಟ್ಟು ಹೆಚ್ಚು ಮಳೆ ನೀರನ್ನು ಒಳನುಸುಳುವಂತೆ ಮಾಡುತ್ತವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಮಳೆ ನೀರು ನೆಲಕ್ಕೆ ಬಿದ್ದು ಹರಿಯುವಾಗ ಮಳೆ ನೀರಿನಲ್ಲಿರುವ ಮಾಲಿನ್ಯಕಾರಕಗಳನ್ನು ಮಣ್ಣಿನಿಂದ ಫಿಲ್ಟರ್ ಮಾಡಬಹುದು ಮತ್ತು ಅದನ್ನು ಸೂಕ್ಷ್ಮಜೀವಿಗಳು ವಿಭಜಿಸುವ ಕೆಲವನ್ನು ಸುಲಭವಾಗಿ ಮಾಡುತ್ತವೆ. ಈ ಬಾವಿಗಳು ಅಂತರ್ಜಲ ಸಂಗ್ರಹಣೆಗೆ ಮತ್ತು ಕುಡಿಯುವ ನೀರಿನ ಮೂಲವಾಗಿದೆ. ಬೇಸಿಗೆಯ ತಿಂಗಳುಗಳಲ್ಲಿ ತಂಪಾದ, ಶುದ್ಧ ನೀರನ್ನು ಹೊಂದಿರುವ ತೊರೆಗಳನ್ನು ಪೂರೈಸುತ್ತದೆ. ಜಲಾನಯನ ಪ್ರದೇಶಗಳಲ್ಲಿ ನದಿಗಳು ಮತ್ತು ತೊರೆಗಳಲ್ಲಿ ವೈವಿಧ್ಯಮಯ ಮತ್ತು ಸಮೃದ್ಧ ಜೀವನವನ್ನು ಬೆಂಬಲಿಸುವಲ್ಲಿ ಎಲೆಗಳು ಪ್ರಮುಖ ಪಾತ್ರವಹಿಸುತ್ತವೆ.