Home » ಡಾ.ರಾಜ್‌ ಅಪಹರಣ ಪ್ರಕರಣ: 25 ವರ್ಷಗಳ ಬಳಿಕ 9 ಆರೋಪಿಗಳನ್ನು ಖುಲಾಸೆ ಮಾಡಿದ ಕೋರ್ಟ್‌

ಡಾ.ರಾಜ್‌ ಅಪಹರಣ ಪ್ರಕರಣ: 25 ವರ್ಷಗಳ ಬಳಿಕ 9 ಆರೋಪಿಗಳನ್ನು ಖುಲಾಸೆ ಮಾಡಿದ ಕೋರ್ಟ್‌

0 comments

Hindu neighbor gifts plot of land

Hindu neighbour gifts land to Muslim journalist

ಡಾ.ರಾಜ್‌ಕುಮಾರ್‌ರನ್ನು ಕಾಡುಗಳ್ಳ ವೀರಪ್ಪನ್‌ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮದ್ರಾಸ್‌ ಹೈಕೋರ್ಟ್‌ 9 ಮಂದಿಯನ್ನು ಆರೋಪ ಮುಕ್ತಗೊಳಿಸಿದೆ. ಬರೋಬ್ಬರಿ 25 ವರ್ಷಗಳ ಬಳಿಕ ಈಗ ಪ್ರಕರಣದಲ್ಲಿ ಸಿಲುಕಿರುವ ಆರೋಪಿಗಳು ಮುಕ್ತರಾಗಿದ್ದಾರೆ. ಬುಧವಾರ ಮದ್ರಾಸ್‌ ಹೈಕೋರ್ಟ್‌ ತೀರ್ಪು ನೀಡಿದೆ.

ಸೆಪ್ಟೆಂಬರ್‌ 25,20218 ರಂದು ಈ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ವೀರಪ್ಪನ್‌ ಸಹಚರರಾದ ಎಲ್ಲ 9 ಮಂದಿಯನ್ನು ಸೆಷನ್ಸ್‌ ನ್ಯಾಯಾಲಯ ಖುಲಾಸೆ ಮಾಡಿತ್ತು.

ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ಖುಲಾಸೆಗೊಂಡಿದ್ದರು. ಆರೋಪಿಗಳು ಮತ್ತು ವೀರಪ್ಪನ್ ನಡುವಿನ ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸಲು ಪೊಲೀಸ್ ಇಲಾಖೆ ಅಗತ್ಯ ಪುರಾವೆಗಳನ್ನು ನೀಡಿಲ್ಲ. ರಾಜ್‌ಕುಮಾರ್ ಮತ್ತು ಅವರ ಪತ್ನಿ ಪಾರ್ವತಮ್ಮ ಅವರನ್ನು ವಿಚಾರಣೆ ನಡೆಸಿಲ್ಲ. ಮಧ್ಯಸ್ಥಿಕೆದಾರರಾಗಿ ಕಾಡಿಗೆ ಹೋದವರನ್ನು ಪೊಲೀಸರು ಪ್ರಶ್ನಿಸಿಲ್ಲ. ಆದ್ದರಿಂದ ಸೂಕ್ತ ಸಾಕ್ಷಿ ಪ್ರಸ್ತುತಪಡಿಸದ ಕಾರಣ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲ 9 ಜನರನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಈ ತೀರ್ಪುನ್ನು ಪೊಲೀಸರು ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು. ಇಂದು ಪ್ರಕರಣದ ಆರೋಪಿಗಳನ್ನು ಮತ್ತೆ ಖುಲಾಸೆಗೊಳಿಸಲಾಗಿದ್ದು, ಪೊಲೀಸರಿಗೆ ಹಿನ್ನೆಡೆಯಾಗಿದೆ.

ಜುಲೈ 30,2000 ರ ಕರ್ನಾಟಕದ ಗಡಿ ಭಾಗ ಈರೋಡ್‌ ಜಿಲ್ಲೆಯ ತಲವಾಡಿ ಬಳಿಯ ದೊಡ್ಡ ಗಾಜನೂರು ತೋಟದ ಮನೆಯಲ್ಲಿ ನಟ ರಾಜ್‌ಕುಮಾರ್‌ ತಂಗಿದ್ದರು. ಅಲ್ಲಿಗೆ ಬಂದ ದಂತಚೋರ ವೀರಪ್ಪನ್‌, ಆತನ ಸಹಚರರು ರಾಜ್‌ ಕುಮಾರ್‌ ಅವರನ್ನು ಅಪಹರಣ ಮಾಡಿದ್ದರು. ರಾಜ್‌ ಕುಮಾರ್‌ ಜೊತೆ ಅವರ ಸಂಬಂಧಿಕರಾದ ಎಸ್‌ ಎ ಗೋವಿಂದರಾಜ್‌, ನಾಗೇಶ್‌ ಮತ್ತು ಸಹಾಯಕ ನಿರ್ದೇಶಕ ನಾಗಪ್ಪರನ್ನೂ ಕಿಡ್ನಾಪ್‌ ಮಾಡಲಾಗಿತ್ತು.

banner

ಸೆ.28 ರಂದು ನಾಗಪ್ಪರನ್ನು ಬಿಡಲಾಗಿತ್ತು. ಉಳಿದವರು 108 ದಿನಗಳ ಕಾಲ ವೀರಪ್ಪನ್‌ ತನ್ನ ಬಳಿ ಇರಿಸಿ ಬಿಡುಗಡೆ ಮಾಡಿದ್ದ. ರಾಜ್‌ ಬಿಡುಗಡೆಗೆ ಕೋಟ್ಯಂತರ ಹಣವನ್ನು ವೀರಪ್ಪನ್‌ಗೆ ನೀಡಲಾಗಿದೆ ಎನ್ನುವ ಆರೋಪವಿದ್ದು, ಈ ಕುರಿತು ವೀರಪ್ಪನ್‌, ಮುತ್ತುಲಕ್ಷ್ಮಿ ಹಾಗೂ ಅವರ 25 ಬಂಧುಗಳ ವಿರುದ್ಧ 2001 ರ .ಸೆ.11 ರಲ್ಲಿ ಪೊಲೀಸರು ಕೇಸನ್ನು ದಾಖಲು ಮಾಡಿದ್ದರು.

ಈರೋಡ್‌ ಜಿಲ್ಲೆಯ ತಲವಾಡಿ ಪೊಲೀಸರು ವೀರಪ್ಪನ್‌ ಮತ್ತು ಸಹಚರರಾದ ಸೇತುಕುಳಿ ಗೋವಿಂದನ್‌, ಚಂದ್ರಗೌಡ, ಮಲ್ಲು, ರಮೇಶ್‌, ಗೋವಿಂದರಾಜ್‌, ಆಂಡ್ರಿಲ್‌, ಪಸುವಣ್ಣ, ಪುಟ್ಟುಸ್ವಾಮಿ, ಕಲ್ಮಂಡಿರಾಮನ್‌, ಮಾರನ್‌, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್‌ ಎನ್ನುವವರ ವಿರುದ್ಧ ಈ ಪ್ರಕರಣಕ್ಕೆ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿದ್ದರು. ನಂತರ ಇವರನ್ನು ಜೈಲಿಗೆ ಕಳುಹಿಸಲಾಗಿತ್ತು. ಅನಂತರ ಈ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಅಕ್ಟೋಬರ್‌ 18, 2004 ರಲ್ಲಿ ತಮಿಳುನಾಡಿನ ವಿಶೇಷ ಕಾರ್ಯಪಡೆ ʼಆಪರೇಷನ್‌ ಕಕೂನ್‌ʼ ಎನ್ನುವ ಹೆಸರಿನಲ್ಲಿ ಎನ್‌ಕೌಂಟರ್‌ನಲ್ಲಿ ಆರೋಪಪಟ್ಟಿ ಸಲ್ಲಿಕೆಗೂ ಮುನ್ನವೇ ವೀರಪ್ಪನ್‌ ಮತ್ತು ಆತನ ಇಬ್ಬರು ಸಹಚರರಾದ ಸೇತುಕುಳಿ ಗೋವಿಂದನ್‌, ಚಂದ್ರಗೌಡನನ್ನು ವಿಶೇಷ ಪೊಲೀಸ್‌ ಪಡೆ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿತು. ಮಲ್ಲು ಎನ್ನುವ ಆರೋಪಿ ತನಿಖೆ ಸಮಯದಲ್ಲಿ ಸಾವಿಗೀಡಾಗಿದ್ದ. ರಮೇಶ್‌ ಎನ್ನುವಾತ ತಲೆಮರೆಸಿಕೊಂಡಿದ್ದ. ಉಳಿದ 9 ಆರೋಪಿಗಳು ಕಳೆದ 18 ವರ್ಷಗಳಿಂದ ಗೋಪಿಚೆಟ್ಟಿಪಾಳ್ಯಂ ನ್ಯಾಯಾಲಯದಲ್ಲಿ ಹಾಜರಾಗಿ ವಿಚಾರಣೆ ಎದುರಿಸಿದ್ದರು.

 

You may also like