Home News Chikkamagaluru : ಒಕ್ಕಲಿಗರ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ, ಮಧ್ಯ ಪ್ರವೇಶಿಸಿದ ನಿರ್ಮಲಾನಂದನಾಥ ಸ್ವಾಮೀಜಿ- ...

Chikkamagaluru : ಒಕ್ಕಲಿಗರ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ, ಮಧ್ಯ ಪ್ರವೇಶಿಸಿದ ನಿರ್ಮಲಾನಂದನಾಥ ಸ್ವಾಮೀಜಿ- ಕ್ಷಮೆಯಾಚಿಸಿದ ಸಚಿವರು!!

Hindu neighbor gifts plot of land

Hindu neighbour gifts land to Muslim journalist

Chikkamagaluru : ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಕೆ.ಜೆ‌.ಜಾರ್ಜ್(K G George )ಅವರು ಮಾಡಿದ ಭಾಷಣಕ್ಕೆ ಕೆಲವರು ಅಡ್ಡಿಪಡಿಸಿ, ಅವರ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜಾರ್ಜ್ ಅವರು ಎಲ್ಲರ ಕ್ಷಮೆ ಕೇಳಿದ್ದಾರೆ. ಹಾಗಿದ್ರೆ ಜಾರ್ಜ್ ಮಾತನಾಡಿದ್ದೇನು? ಸಭಿಕರು ಆಕ್ಷೇಪ ಮಾಡಿದ್ದೇಕೆ?

ಯಸ್, ಚಿಕ್ಕಮಗಳೂರಿನಲ್ಲಿ(Chikkamagaluru) ಸೋಮವಾರ (ನ.25) ಜಿಲ್ಲಾ ಒಕ್ಕಲಿಗರ ಸಂಘದಿಂದ ಒಕ್ಕಲಿಗ ಸಮುದಾಯ ಭವನ 25 ವರ್ಷ ಪೂರೈಸಿದ ಹಿನ್ನೆಲೆ ಹಾಗೂ ನೂತನವಾಗಿ ನಿರ್ಮಿಸಿದ ಬೆಳ್ಳಿ ಭವನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಇದರಲ್ಲಿ ಸಚಿವ ಕೆ.ಜೆ.ಜಾರ್ಜ್‌ ಅವರು ಭಾವಹಿಸಿದ್ದರು. ಈ ವೇಳೆ ಅವರು ಭಾಷಣ ಮಾಡುವಾಗ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸಚಿವ ಕೆ.ಜೆ.ಜಾರ್ಜ್‌ ಅವರನ್ನು ಸಭಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವರು, ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಎಲ್ಲಾ ಸಮುದಾಯದ ಮಹಿಳೆಯರಿಗೂ ಐದು ಗ್ಯಾರೆಂಟಿಗಳನ್ನು ನೀಡಲಾಗಿದೆ ಎನ್ನುತ್ತಿದ್ದಂತೆ ಕಾರ್ಯಕ್ರಮದಲ್ಲಿ ಸಭಿಕರ ಸ್ಥಳದಲ್ಲಿ ಕುಳಿತ್ತಿದ್ದ ತುಡಕೂರು ಮಂಜು ಹಾಗೂ ಇತರರು ಇದು ರಾಜಕೀಯ ಅಥವಾ ಪಕ್ಷದ ಕಾರ್ಯಕ್ರಮವಲ್ಲವೆಂದು ಸಚಿವರ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದು ರಾಜಕೀಯ ವೇದಿಕೆಯಲ್ಲ, ರಾಜಕೀಯ ಮಾತನಾಡುವುದಾದರೆ ಕೆಳಗೆ ಇಳಿಯಿರಿ’ ಎಂದು ಆಕ್ರೋಶ ವ್ಯಕ್ತವಾಯಿತು.

ಈ ವೇಳೆ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ತಾವು ರಾಜಕೀಯ ಭಾಷಣ ಮಾಡುತ್ತಿಲ್ಲ. ತಪ್ಪಾಗಿ ಭಾವಿಸಬಾರದೆಂದು ಸಚಿವರು ಪದೇ ಪದೇ ಕೇಳಿಕೊಂಡ‌ ಬಳಿಕವೂ ಆಕ್ಷೇಪ ಜೋರಾಗುತ್ತಲೇ ಇತ್ತು.‌ ಈ ವೇಳೆ ಮುಜುಗರಕ್ಕೆ ಒಳಗಾದ ಸಚಿವರು, ‘ಭಾಷಣಕ್ಕೆ ಅಡ್ಡಿಪಡಿಸಿ ರಾಜಕೀಯ ಮಾಡಬೇಡಿ, ನನಗೂ ರಾಜಕೀಯ ಬರುತ್ತದೆ’ ಎಂದು ಸಿಟ್ಟಾದರು. ಅಲ್ಲದೆ ಮೈಕ್ ಬಿಟ್ಟು ಸಚಿವ ಜಾರ್ಜ್ ತಮ್ಮ ಸ್ಥಾನದಲ್ಲಿ ಕುಳಿತುಕೊಂಡರು.

ನಂತರ ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಮಧ್ಯ ಪ್ರವೇಶಿಸಿ ಸಚಿವರು ಬೇರೆ ಕಾರ್ಯಕ್ರಮಕ್ಕೆ ತೆರಳಬೇಕಿದೆ. ಯಾಕೆ ಕಾರ್ಯಕ್ರಮದ ಮಧ್ಯೆ ತೆರಳುತ್ತಿದ್ದೇನೆಂದು ಹೇಳುವುದಕ್ಕಾಗಿ ಹಾಗೇ ಮಾತನಾಡಿದ್ದಾರೆ. ಅವರು ರಾಜಕೀಯ ಮಾತನಾಡಿದ್ದಾರೆಂದು ತಪ್ಪು ಭಾವಿಸಬೇಡಿ. ಅಥಿತಿಗಳನ್ನು ಸಹನೆಯಿಂದ ನಡೆಸಿಕೊಳ್ಳಬೇಕು ಎಂದು ಮನವಿ ಮಾಡಿದರು. ವಾತಾವರಣ ತಿಳಿಯಾಗುತ್ತಿದ್ದಂತೆ ಸಚಿವ ಕೆ.ಜೆ.ಜಾರ್ಜ್ ಮಾತು ಮುಂದುವರೆಸಿ ಕಾರ್ಯಕ್ರಮದಲ್ಲಿ ತಪ್ಪಾಗಿ ಮಾತನಾಡಿದ್ದರೆ ಕ್ಷಮೆ ಕೇಳುತ್ತೇನೆಂದು ಸ್ವಾಮೀಜಿ ಮತ್ತು ಸಭಿಕರ ಬಳಿ ಕ್ಷಮೆಯಾಚಿಸಿದರು.