Home » ಕೊನೆಗೂ ಗ್ರಾಹಕನ 66 ಪೈಸೆ ಪಾವತಿಸಿದ ಬ್ಯಾಂಕ್‌: ಹೇಗೆ?

ಕೊನೆಗೂ ಗ್ರಾಹಕನ 66 ಪೈಸೆ ಪಾವತಿಸಿದ ಬ್ಯಾಂಕ್‌: ಹೇಗೆ?

0 comments

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ರೈತನಿಗೆ ಕೆನರಾಬ್ಯಾಂಕ್‌ ನೀಡಬೇಕಿದ್ದ 66 ಪೈಸೆ ಯನ್ನು ಕೊನೆಗೂ ಮರುಪಾವತಿಸಿದೆ. ಕೆಲವು ದಿನಗಳ ಹಿಂದೆ 9.34 ಪೈಸೆ ಸಾಲ ಬಾಕಿ ಇದೆ ಈ ಕೂಡಲೇ ಮರುಪಾವತಿಸುವಂತೆ ನೋಟಿಸ್‌ ನೀಡಿದ್ದ ಬ್ಯಾಂಕ್‌, ಅಲ್ಲದೇ ಪದೇ ಪದೇ ಕರೆ ಮಾಡುತ್ತಿದ್ದರು. ಇದರಿಂದ ಬೇಸತ್ತಿದ್ದ ರೈತ ಬ್ಯಾಂಕಿಗೆ ತೆರಳಿ 10 ರೂ. ನೀಡಿ ಸಾಲಕ್ಕೆ ಜಮಾ ಮಾಡಿ ಉಳಿದ 66 ಪೈಸೆ ವಾಪಸ್‌ ನೀಡುವಂತೆ ಬ್ಯಾಂಕ್‌ ಕ್ಯಾಷಿಯರ್‌ಗೆ ಒತ್ತಾಯ ಮಾಡಿದ್ದರು.

ಪೈಸೆ ಪೈಸೆಗೆ ಲೆಕ್ಕ ಹಾಕಿ ನಿಮ್ಮ ಹಣ ಕೇಳುತ್ತೀರಾ? ನಮಗೂ ಹಣ ವಾಪಸ್‌ ಕೊಡಿ ಎಂದು ರೈತ ಚೊಕ್ಕಣ್ಣಗೌಡ ಬ್ಯಾಂಕ್‌ ಸಿಬ್ಬಂದಿಗೆ ಹೇಳಿ ಒತ್ತಾಯ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಬ್ಯಾಂಕ್‌ ಚೊಕ್ಕಣ್ಣಗೌಡ ಖಾತೆಗೆ 66 ಪೈಸೆ ಹಣವನ್ನು ಅಕೌಂಟ್‌ಗೆ ಹಾಕಿದೆ.

66 ಪೈಸೆ ಚಿಲ್ಲರೆ ಇಲ್ಲ ಎನ್ನುವ ಸಬೂಬು ಹೇಳಿದ್ದರಿಂದ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಬ್ಯಾಂಕ್‌ ವ್ಯವಸ್ಥಾಪಕರು ರೈತನ ಕ್ಷಮೆ ಕೇಳುವ ಮೂಲಕ ಪ್ರಕರಣಕ್ಕೆ ಇತ್ಯರ್ಥ ಹಾಡಿದ್ದರು. ಈ ವಿಚಾರ ಬ್ಯಾಂಕ್‌ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ನಂತರ 66 ಪೈಸೆಯನ್ನು ರೈತನ ಅಕೌಂಟ್‌ಗೆ ಹಾಕಿ ಎಸ್‌ಎಂಎಸ್‌ ಕಳುಹಿಸಿದೆ.

ಈ ಮೂಲಕ ಪೈಸೆ ಬಾಕಿಯ ಪ್ರಕರಣ ಸುಖಾಂತ್ಯವಾಗಿದೆ.

banner

You may also like