Home News Agra News: ಸೋದರಳಿಯನೊಂದಿಗೆ ಹೋದ ಪತ್ನಿ, ಹುಡುಕಾಡಲು ಹೋದ ಪತಿ ಸಾವು, ಮರಣೋತ್ತರ ಪರೀಕ್ಷೆ ವರದಿಯಲ್ಲಿ...

Agra News: ಸೋದರಳಿಯನೊಂದಿಗೆ ಹೋದ ಪತ್ನಿ, ಹುಡುಕಾಡಲು ಹೋದ ಪತಿ ಸಾವು, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಘಾತಕಾರಿ ಸಂಗತಿ ಬಯಲು

Heart Attack

Hindu neighbor gifts plot of land

Hindu neighbour gifts land to Muslim journalist

U.P: ಉತ್ತರ ಪ್ರದೇಶದ ಆಗ್ರಾದಲ್ಲಿ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ, ವ್ಯಕ್ತಿಯೊಬ್ಬನ ಪತ್ನಿ ತನ್ನ ಸೋದರಳಿಯನೊಂದಿಗೆ ಓಡಿಹೋಗಿದ್ದಾಳೆ. ಪೊಲೀಸರ ಸಹಾಯದಿಂದ ಪತಿ ತನ್ನ ಪತ್ನಿಯೊಂದಿಗೆ ಹಿಂತಿರುಗುತ್ತಿದ್ದಾಗ, ಹೃದಯಾಘಾತದಿಂದ ಸಾವಿಗೀಡಾಗಿರುವ  ಘಟನೆ ನಡೆದಿದೆ.

ಥಾಣಾ ಬರ್ಹನ್ ಪೊಲೀಸರಿಗೆ ಬಂದ ದೂರಿನ ಪ್ರಕಾರ, ಉದಯಪುರ ಗ್ರಾಮದಲ್ಲಿ ವಾಸಿಸುವ ವ್ಯಕ್ತಿಯ ಪತ್ನಿ ತನ್ನ ಸೋದರಳಿಯನೊಂದಿಗೆ ಓಡಿ ಹೋಗಿರುವುದಾಗ ದೂರನ್ನು ದಾಖಲು ಮಾಡಿದ್ದರು. ನಂತರ ಪೊಲೀಸರು ಆಕೆಯ ಮೊಬೈಲ್ ಸ್ಥಳದ ಆಧಾರದ ಮೇಲೆ ಹರಿದ್ವಾರದಲ್ಲಿ ಮಹಿಳೆಯನ್ನು ಪತ್ತೆಹಚ್ಚಿದ್ದಾರೆ.

ಇದಾದ ನಂತರ, ಪೊಲೀಸ್ ತಂಡವು ಪತಿಯೊಂದಿಗೆ ಹರಿದ್ವಾರಕ್ಕೆ ಹೋಗಿ ಮಹಿಳೆಯನ್ನು ಕರೆತಂದಿದ್ದಾರೆ. ಹೆಂಡತಿಯನ್ನು ಹುಡುಕಿ ಹರಿದ್ವಾರದಿಂದ ಆಗ್ರಾಕ್ಕೆ ಹಿಂತಿರುಗುತ್ತಿದ್ದಾಗ, ಪತಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಪೊಲೀಸರು ಶವದ ಮರಣೋತ್ತರ ಪರೀಕ್ಷೆ ನಡೆಸಿದರು, ಇದರಲ್ಲಿ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಮತ್ತು ಅಂತಿಮ ವಿಧಿವಿಧಾನಗಳನ್ನು ನಡೆಸಲಾಗಿದೆ.

ಮೃತನ ಸಹೋದರನ ಹೇಳಿಕೆ ಪ್ರಕಾರ, ತನ್ನ ಸಹೋದರನ ಪತ್ನಿ ತನ್ನ ಸೋದರಸಂಬಂಧಿಯ ಸೋದರಳಿಯನೊಂದಿಗೆ ಓಡಿಹೋಗಿದ್ದಳು, ನಂತರ ಅವನು ಪೊಲೀಸರೊಂದಿಗೆ ಹರಿದ್ವಾರಕ್ಕೆ ಹೋಗಿದ್ದನು. ಹಿಂದಿರುಗುವ ಪ್ರಯಾಣದಲ್ಲಿ ಸಂಭವಿಸಿದ ಈ ದುರಂತ ಘಟನೆಯು ಕುಟುಂಬವನ್ನು ಛಿದ್ರಗೊಳಿಸಿದೆ. ಮೃತ ವ್ಯಕ್ತಿಯ ಮೂವರು ಅಪ್ರಾಪ್ತ ಮಕ್ಕಳ ಭವಿಷ್ಯದ ಬಗ್ಗೆ ಕುಟುಂಬ ಕಳವಳ ವ್ಯಕ್ತಪಡಿಸಿ, ಮಕ್ಕಳಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲ, ಮೃತದೇಹವನ್ನು ಗ್ರಾಮದಲ್ಲಿ ಇರಿಸಿ, ಪೊಲೀಸರ ನಿರ್ಲಕ್ಷ್ಯದ ಆರೋಪ ಹೊರಿಸಿಲಾಗಿತ್ತು.

ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಿದ ಎಸಿಪಿ ಎತ್ಮದ್‌ಪುರ ದೇವೇಶ್ ಸಿಂಗ್, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೃತರ ಸಾವಿಗೆ ಹೃದಯಾಘಾತ ಕಾರಣ ಎಂದು ತಿಳಿದು ಬಂದಿದೆ ಎಂದು ಹೇಳಿದರು. ಬರ್ಹಾನ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ನಿರ್ಲಕ್ಷ್ಯದ ಆರೋಪಗಳನ್ನು ನಿರಾಕರಿಸಿದ ಅವರು, ಪೊಲೀಸರು ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪೂರೈಸಿದ್ದಾರೆ ಎಂದು ಹೇಳಿದರು.