Home National Government scheme: ರೈತರಿಗೆ 10,000 ರೂಪಾಯಿ ನೀಡಲಿದೆ ಈ ಹೊಸ ಯೋಜನೆ, ತಕ್ಷಣ ಇದರ ಲಾಭ...

Government scheme: ರೈತರಿಗೆ 10,000 ರೂಪಾಯಿ ನೀಡಲಿದೆ ಈ ಹೊಸ ಯೋಜನೆ, ತಕ್ಷಣ ಇದರ ಲಾಭ ಪಡೆದುಕೊಳ್ಳಿ !

Raitha Siri scheme
Image source: zee news

Hindu neighbor gifts plot of land

Hindu neighbour gifts land to Muslim journalist

Raitha Siri scheme: ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆ ಹೆಚ್ಚಳವಾಗಲು, ರೈತರ ಭದ್ರತೆ, ಸುಸ್ಥಿರ ಕೃಷಿ ಮತ್ತು ಪರಿಸರದ ಸಂರಕ್ಷಣೆಗೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸುವುದು ಬಹಳ ಮುಖ್ಯವಾಗಿದೆ.

ಆದ್ದರಿಂದ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ಸರ್ಕಾರವು ‘ರೈತ ಸಿರಿ ಯೋಜನೆ’ (Raitha Siri scheme) ಜಾರಿ ಮಾಡಿದೆ. ಈ ಯೋಜನೆಯಡಿ ಸಿರಿಧಾನ್ಯ ಬೆಳೆಗಳ ವಿಸ್ತೀರ್ಣ ಹೆಚ್ಚಿಸಲು ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಅನುದಾನವನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ ಎಂಬ ಮಾಹಿತಿ ನೀಡಲಾಗಿದೆ.

ಈ ಯೋಜನೆಯ ಸದುಪಯೋಗ ಪಡೆಯಲು, ಅರ್ಜಿದಾರರು ಕರ್ನಾಟಕದ ಖಾಯಂ ಪ್ರಜೆಗಳಾಗಿರಬೇಕು. ವೃತ್ತಿಯಲ್ಲಿ ರೈತನಾಗಿರಬೇಕು. ರೈತನು ಮುಖ್ಯವಾಗಿ ರಾಗಿ ಬೆಳೆಗಾರನಾಗಿರಬೇಕು. ಮತ್ತು ಈ ಯೋಜನೆಗೆ ಅರ್ಹತೆ ಪಡೆಯಲು ಕನಿಷ್ಠ ಒಂದು ಹೆಕ್ಟೇರ್ ಕೃಷಿ ಆಸ್ತಿ ಅಗತ್ಯವಿದೆ.

ಕರ್ನಾಟಕ ರೈತ ಸಿರಿ ಯೋಜನೆಗೆ ಬೇಕಾಗಿರುವ ದಾಖಲೆಗಳು ಇಂತಿವೆ :
ಭೂ ದಾಖಲೆ ವಿವರಗಳು
ಪಾಸ್ ಪೋರ್ಟ್ ಗಾತ್ರದ ಫೋಟೋ ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿ.
ಅರ್ಜಿದಾರರ ಭೂಮಿ ಸಂಬಂಧಿತ ದಾಖಲೆಗಳು.
ಅರ್ಜಿದಾರರ ಶಾಶ್ವತ ನಿವಾಸಿ ಪ್ರಮಾಣಪತ್ರ.
ಅರ್ಜಿದಾರರ ವಿಳಾಸ ಪುರಾವೆ.
ಪಡಿತರ ಚೀಟಿ.
ಬ್ಯಾಂಕ್ ಖಾತೆ ವಿವರಗಳು.
ಮೊಬೈಲ್ ಸಂಖ್ಯೆ.

ಕರ್ನಾಟಕ ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಮೊದಲು ರೈತ ಕೃಷಿ (ಕೆಎಸ್ ಡಿಎ) ಅಧಿಕೃತ ವೆಬ್ ಸೈಟ್ https://raitamitra.karnataka.gov.in ಗೆ ಭೇಟಿ ನೀಡಬೇಕು.

ಮುಖ್ಯವಾಗಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪ್ರೋತ್ಸಾಹಧನವನ್ನು 2 ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು. ಊದಲು ನವಣೆ, ಹಾರಕ, ಸಾಮೆ ಮತ್ತು ಬರಗು ಸಿರಿಧಾನ್ಯಗಳಿಗೆ ಮಾತ್ರ ಒತ್ತು ನೀಡಲಾಗುವುದು.

ಮೊದಲ ಕಂತಿನ ಪ್ರತ್ಸಾಹಧನ 6000 ರೂಪಾಯಿಯನ್ನು ಸಿರಿಧಾಣ್ಯ ಬಿತ್ತನೆ ಮಾಡಿದ 30 ದಿನಗಳ ನಂತರ ಬೆಳೆಯನ್ನು ಜಿಪಿಎಸ್‌ ಆಧಾರಿತ ಫೋಟೋ ಪರಿಶೀಲಿಸಿ ರೈತರ ಖಾತಗೆ ಜಮೆ ಮಾಡಲಾಗುತ್ತದೆ. 2ನೇ ಕಂತಿನ ಪ್ರೋತ್ಸಾಹಧನ ₹4,000ವನ್ನು ನಂತರದಲ್ಲಿ ಜಮೆ ಮಾಡಲಾಗುವುದು.

ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ ನೀಡುವುದು.
ಈ ಯೋಜನೆಯನ್ನು ‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಇನ್ನಿತರೆ ಸಮಾನ ಯೋಜನೆಗಳೊಂದಿಗೆ ಸಂಯೋಜಿಸಿ ಅನುಷ್ಠಾನ ಮಾಡಲಾಗುತ್ತಿದೆ.

ಇದನ್ನೂ ಓದಿ: Love Failure: ಜಾತ್ರೆಯಲ್ಲಿ ಪರಿಚಯ, ಗೆಳೆತನ ಪ್ರೀತಿಗೆ ತಿರುಗಿಸಿಕೊಂಡು ಸೆಕ್ಸ್ ದಾಹ ತೀರಿಸಿಕೊಂಡ ಪ್ರಿಯಕರ ಎಸ್ಕೇಪ್ !