Homelatestಮಂಗಳೂರು: ಸುಖಾಂತ್ಯ ಕಂಡ ಬೆಳ್ಳಾರೆ ಮೂಲದ ಮಹಿಳೆ ನಾಪತ್ತೆ ಪ್ರಕರಣ!! ಬ್ಯಾಂಕ್ ಗೆಂದು ತೆರಳಿ ನಾಪತ್ತೆಯಾಗಿದ್ದ...

ಮಂಗಳೂರು: ಸುಖಾಂತ್ಯ ಕಂಡ ಬೆಳ್ಳಾರೆ ಮೂಲದ ಮಹಿಳೆ ನಾಪತ್ತೆ ಪ್ರಕರಣ!! ಬ್ಯಾಂಕ್ ಗೆಂದು ತೆರಳಿ ನಾಪತ್ತೆಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚಿದ್ದೆಲ್ಲಿ!??

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಬೆಳ್ಳಾರೆ ಮೂಲದ ಮಹಿಳೆಯೊಬ್ಬರು ತನ್ನ ಮಂಗಳೂರಿಗೆ ಬಂದಿದ್ದು ಉರ್ವ ಸ್ಟೋರ್ ಬಳಿಯ ಬ್ಯಾಂಕ್ ಒಂದಕ್ಕೆ ತೆರಳುತ್ತೇನೆ ಎಂದು ಹೇಳಿ ಆ ಬಳಿಕ ನಾಪತ್ತೆಯಾದ ಪ್ರಕರಣವು ಇಂದು ಮಹಿಳೆ ಪತ್ತೆಯಾಗುವ ಮೂಲಕ ಸುಖಾಂತ್ಯ ಕಂಡಿದೆ. ಮಹಿಳೆಯನ್ನು ಉರ್ವ ಠಾಣೆಯ ಪೊಲೀಸರು ಮೈಸೂರಿನಲ್ಲಿ ಪತ್ತೆ ಹಚ್ಚಿ ಮಂಗಳೂರಿಗೆ ಕರೆತಂದು ಪೋಷಕರ ಜೊತೆ ಕಳುಹಿಸಿಕೊಡಲಾಗಿದೆ.

ಘಟನೆ ವಿವರ: ಬೆಳ್ಳಾರೆ ಕಲ್ಮಡ್ಕದ ನಿವಾಸಿ ದಿವ್ಯ ಎನ್ನುವ ಮಹಿಳೆಯೊಬ್ಬರು ತನ್ನ ಸಹೋದರಿಯೊಂದಿಗೆ ಮಂಗಳೂರಿಗೆ ಬಂದಿದ್ದು ಉರ್ವ ಸ್ಟೋರ್ ಬಳಿ ಬ್ಯಾಂಕ್ ಗೆ ತೆರಳುತ್ತೇನೆ ಎಂದು ಹೇಳಿ ಹೋದವರು ನಾಪತ್ತೆಯಾಗಿದ್ದರು.ಕೂಡಲೇ ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಯಬಿಟ್ಟು ಪತ್ತೆ ಹಚ್ಚುವಂತೆ ಸಹಾಯ ಕೇಳಿದ್ದರು.

ಈ ಬಗ್ಗೆ ಮಹಿಳೆಯ ಸಹೋದರಿ ನೀಡಿದ ದೂರಿನಂತೆ ಉರ್ವ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಅದರಂತೆ ಮಹಿಳೆಯನ್ನು ಮೈಸೂರಿನಲ್ಲಿ ಪತ್ತೆ ಹಚ್ಚಲಾಗಿದ್ದು,ಮಂಗಳೂರು ಪೊಲೀಸರು ಕರೆತಂದು ಪೋಷಕರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ.

ನಿನ್ನೆ ಘಟನೆ ನಡೆದಾಗಿನಿಂದಲೂ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಹೆಚ್ಚಿನ ಜನ ಆತಂಕಗೊಂಡಿದ್ದರು.ಸದ್ಯ ಮಹಿಳೆಯು ಸುರಕ್ಷಿತವಾಗಿ ಪತ್ತೆಯಾಗುವ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

RELATED ARTICLES

Most Popular

Recent Comments