

Davangere : ಬೆಣ್ಣೆ ನಗರಿ ದಾವಣಗೆರೆಯಲ್ಲಿ ಒಂದು ಅಚ್ಚರಿಯ ಬೆಳವಣಿಗೆ ನಡೆದಿದ್ದು ದಾವಣಗೆರೆಯ ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆಂಚಲ್ ಕುಮಾರಿ ಇಂದು ತಮ್ಮ 26ನೇ ವಯಸ್ಸಿಗೆ ಜೈನ ಸನ್ಯಾಸಿ ದೀಕ್ಷೆ ಸ್ವೀಕರಿಸುತ್ತಿದ್ದಾರೆ.
ಹೌದು, ದಾವಣಗೆರೆ ಮೂಲದ 26 ವರ್ಷದ ಆಂಚಲ್ ಕುಮಾರಿ ತನ್ನ 26ನೇ ವಯಸ್ಸಿಗೆ ಜೈನ ಸನ್ಯಾಸದೀಕ್ಷೆಯನ್ನು ಪಡೆಯುತ್ತಿದ್ದಾರೆ. ದಾವಣಗೆರೆಯ BIET ಕಾಲೇಜ್ ನಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಟಾಪರ್ ಸ್ಟೂಡೆಂಟ್ ಆಗಿದ್ದ ಆಂಚಲ್ಕುಮಾರಿ, ಇತ್ತೀಚೆಗೆ ಆಧ್ಯಾತ್ಮದ ಕಡೆಗೆ ಒಲವು ಹೊಂದಿದ್ದರು. ಇದೀಗ ಇಂದು ಜೈನ ಸನ್ಯಾಸ ದೀಕ್ಷೆ ಪಡೆಯುತ್ತಿದ್ದಾರೆ.
ಆಂಚಲ್ ಕುಮಾರಿ ಇಂದು ಗುಜರಾತ್ನ ಸೂರತ್ನಲ್ಲಿ ಕುಲಚಂದ್ರ ಸುರೇಶ್ವರ್ಜಿ ಗುರುಗಳಿಂದ ದೀಕ್ಷೆ ಅವರಿಂದ ಸನ್ಯಾಸತ್ವ ದೀಕ್ಷೆ ಸ್ವೀಕರಿಸುತ್ತಿದ್ದಾರೆ. ಆಂಚಲ್ ದಾವಣಗೆರೆ ಚೌಕಿಪೇಟೆಯ ಚಿನ್ನದ ವ್ಯಾಪಾರಿ ಮುಕೇಶ್ ಹಾಗೂ ಸುನಿತಾ ಅವರ ಪುತ್ರಿಯಾಗಿದ್ದಾರೆ. ಮುಕೇಶ್ ಅವರಿಗೆ ಒಟ್ಟು ಮೂವರು ಪುತ್ರಿಯರಿದ್ದು, ಮೊದಲ ಇಬ್ಬರಿಗೆ ಮದುವೆಯಾಗಿದೆ.













