HomeJobsJob Recruitment: ಬ್ಯಾಂಕ್ ಪ್ರೆಸ್ ನಲ್ಲಿ ನೂರಾರು ವಿವಿಧ ಹುದ್ದೆಗಳು, ಲಕ್ಷ ತನಕ ಸಂಬಳ, ತ್ವರೆ...

Job Recruitment: ಬ್ಯಾಂಕ್ ಪ್ರೆಸ್ ನಲ್ಲಿ ನೂರಾರು ವಿವಿಧ ಹುದ್ದೆಗಳು, ಲಕ್ಷ ತನಕ ಸಂಬಳ, ತ್ವರೆ ಮಾಡಿ

Hindu neighbor gifts plot of land

Hindu neighbour gifts land to Muslim journalist

Job Recruitment: ಉದ್ಯೋಗ ಹುಡುಕ್ಕುತ್ತಿರುವವರಿಗೆ ಸುವರ್ಣ ಅವಕಾಶ ಇಲ್ಲಿದೆ. ಸದ್ಯ ಡಿಪ್ಲೊಮ, ಐಟಿಐ, ಬಿಇ, ಬಿ.ಟೆಕ್, ಇತರೆ ಪದವಿ ಪಾಸ್‌ ಮಾಡಿದ್ದವರಿಗೆ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ (Job Recruitment) ನೀಡಲಾಗಿದೆ.

ಹೌದು, ಕೇಂದ್ರ ಸರ್ಕಾರಿ ಸೆಕ್ಯೂರಿಟಿ ಪ್ರಿಂಟಿಂಗ್ ಮತ್ತು ಮೈನಿಂಗ್ ಕಾರ್ಪೋರೇಷನ್‌ ಇಂಡಿಯಾ ಲಿಮಿಟೆಡ್‌ನ ಒಂದು ಘಟಕವಾದ ಬ್ಯಾಂಕ್‌ ನೋಟ್‌ ಪ್ರೆಸ್‌, ದೆವಾಸ್’ನಲ್ಲಿನ 111 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಹುದ್ದೆಗಳ ಕುರಿತು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ:
ಸೂಪರ್‌ವೈಸರ್ (ಪ್ರಿಂಟಿಂಗ್): 08
ಸೂಪರ್‌ವೈಸರ್ (ಕಂಟ್ರೋಲ್) : 03
ಸೂಪರ್‌ವೈಸರ್ (ಇನ್ಫಾರ್ಮೇಶನ್ ಟೆಕ್ನಾಲಜಿ) : 01
ಜೂನಿಯರ್ ಆಫೀಸ್ ಅಸಿಸ್ಟಂಟ್ : 31
ಜೂನಿಯರ್ ಟೆಕ್ನೀಷಿಯನ್ (ಕಂಟ್ರೋಲ್): 45
ಜೂನಿಯರ್ ಟೆಕ್ನೀಷಿಯನ್ (ಇಂಕ್ ಫ್ಯಾಕ್ಟರಿ ಅಟೆಂಡಂಟ್ ಆಪರೇಟರ್ ಅಂಡ್ ಇತರೆ) : 15
ಜೂನಿಯರ್ ಟೆಕ್ನೀಷಿಯನ್ (ಮೆಕ್ಯಾನಿಕಲ್ / ಏರ್‌ ಕಂಡೀಷನಿಂಗ್) : 03
ಜೂನಿಯರ್ ಟೆಕ್ನೀಷಿಯನ್ (ಇಲೆಕ್ಟ್ರಿಕಲ್/ ಇನ್ಫಾರ್ಮೇಷನ್ ಟೆಕ್ನಾಲಜಿ) : 04
ಜೂನಿಯರ್ ಟೆಕ್ನೀಷಿಯನ್ (ಸಿವಿಲ್/ಎನ್ವಿರಾನ್ಮೆಂಟ್): 01

ವಿದ್ಯಾರ್ಹತೆ : ಡಿಪ್ಲೊಮ / ಬಿ.ಟೆಕ್ / ಬಿಇ / ಐಟಿಐ / ಇತರೆ ಪದವಿ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು, ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-07-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 21-08-2023
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 21-08-2023
ಆನ್‌ಲೈನ್‌ ಪರೀಕ್ಷೆಯ ಸಂಭಾವ್ಯ ದಿನಾಂಕ: ಸೆಪ್ಟೆಂಬರ್ / ಅಕ್ಟೋಬರ್ 2023

ಅರ್ಜಿ ಶುಲ್ಕ :
ಜೆನೆರಲ್ ಕೆಟಗರಿ / ಒಬಿಸಿ / ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ರೂ.600.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.200.

ಶುಲ್ಕ ಪಾವತಿ ವಿಧಾನ : ಆನ್‌ಲೈನ್‌ ಮೂಲಕ (ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಇಂಟರ್‌ನೆಟ್‌ ಬ್ಯಾಂಕಿಂಗ್), ಕ್ಯಾಶ್‌ ಕಾರ್ಡ್‌, ಮೊಬೈಲ್‌ ವ್ಯಾಲೆಟ್, ಇತರೆ)

ವೇತನ ಶ್ರೇಣಿ : Rs.18,000 – 95,910.

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://bnpdewas.spmcil.com/

ಅರ್ಜಿಯನ್ನು ಆನ್‌ಲೈನ್‌ ಮೂಲಕ ಮಾತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿ ಸ್ವೀಕಾರ ಮಾಡಲಾಗುವುದಿಲ್ಲ. ಮತ್ತು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಮಾಡಲಾಗುವುದು. ಷರತ್ತುಗಳು ಅನ್ವಯ.

 

ಇದನ್ನು ಓದಿ: ದಕ್ಷಿಣ ಕನ್ನಡ: ಸೌದೆ ಹೊರಲು ಹೋಗಿದ್ದ ವ್ಯಕ್ತಿ ಬೆನ್ನಟ್ಟಿದ ಕಣಜದ ಹುಳು, ವ್ಯಕ್ತಿ ಸಾವು 

RELATED ARTICLES

Most Popular

Recent Comments