Home » ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ, ವಿಜಯ್‌ ಅವರಿಂದ ದೇಶಾದ್ಯಂತ ಅನ್ನದಾನ, ಸಿಹಿ ಹಂಚುವಿಕೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ, ವಿಜಯ್‌ ಅವರಿಂದ ದೇಶಾದ್ಯಂತ ಅನ್ನದಾನ, ಸಿಹಿ ಹಂಚುವಿಕೆ

ಎಲ್ಲಿ ಯಾವ ದೇವಸ್ಥಾನದಲ್ಲಿ? ಲಿಸ್ಟ್‌ ಇಲ್ಲಿದೆ!

0 comments

Hindu neighbor gifts plot of land

Hindu neighbour gifts land to Muslim journalist

ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆ ಇತ್ತೀಚೆಗೆ ಭಾರೀ ಅದ್ದೂರಿಯಾಗಿ ನಡೆದಿದ್ದು, ಅಭಿಮಾನಿಗಳನ್ನು ಆಹ್ವಾನಿಸಲು ಸಾಧ್ಯವಾಗಿಲ್ಲ. ಹೀಗಿದ್ದರೂ ಕೂಡಾ ತಮ್ಮ ಮದುವೆಯಾ ಖುಷಿಯನ್ನು ಫ್ಯಾನ್ಸ್‌ ಜೊತೆ ಹಂಚಿಕೊಳ್ಳಲು ಈ ಜೋಡಿ ನಿರ್ಧಾರ ಮಾಡಿದ್ದು, ಇದಕ್ಕಾಗಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

‘ಈ ದೇಶದ ಸುಂದರವಾದ ಜನರೇ.. ನಮ್ಮ ಈ ಪ್ರೀತಿ ಮತ್ತು ಪಯಣದಲ್ಲಿ ನೀವು ಯಾವಾಗಲೂ ಜೊತೆಯಾಗಿದ್ದೀರಿ. ನಿಮ್ಮೆಲ್ಲರ ಜೊತೆ ನಮ್ಮ ಮದುವೆಯನ್ನು ಸಂಭ್ರಮಿಸುವುದು ನಮಗೆ ಖುಷಿ ನೀಡುತ್ತದೆ. ಸಿಹಿ ಮತ್ತು ಆಹಾರದ ಜೊತೆ ಭಾರತ ಎಲ್ಲವನ್ನೂ ಸಂಭ್ರಮಿಸುತ್ತದೆ. ಹಾಗಾಗಿ ಮಾರ್ಚ್ 1ರಂದು ನಾವು ಮಿಠಾಯಿ ತುಂಬಿದ ಟ್ರಕ್​ಗಳನ್ನು ದೇಶಾದ್ಯಂತ ಕಳಿಸುತ್ತಿದ್ದೇನೆ’ ಎಂದು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಬೆಂಗಳೂರಿನ ಶಿವೋಹಂ ದೇವಸ್ಥಾನ, ಕೊಡಗಿನ ಪಾದಿ ಇಗ್ಗುತ್ತಪ್ಪ ದೇವಸ್ಥಾನ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಬೆಂಗಳೂರಿನ ರಾಧಾಕೃಷ್ಣ ದೇವಸ್ಥಾನದಲ್ಲಿ ಅನ್ನದಾನ ಮಾಡಲಾಗುವುದು.

ಕರ್ನಾಟಕದ ಮೈಸೂರು, ಕೊಡಗು ಮತ್ತು ಬೆಂಗಳೂರಿನಲ್ಲಿ ಸಿಹಿ ವಿತರಣೆ ಮಾಡಲಾಗುವುದು. ಅದೇ ರೀತಿ ಬೇರೆ ಬೇರೆ ರಾಜ್ಯಗಳ ಕೆಲವು ದೇವಸ್ಥಾನಗಳಲ್ಲಿ ಅನ್ನದಾನ ಮತ್ತು ಪ್ರಮುಖ ನಗರಗಳಲ್ಲಿ ಸಿಹಿ ಹಂಚಲಾಗುವುದು ಎಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಮಾಹಿತಿ ನೀಡಿದ್ದಾರೆ.

banner

You may also like