Home » Guruprasad: ಗುರುಪ್ರಸಾದ್‌ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸುವಾಗ ಸಮಸ್ಯೆ! ದಾರಿಮಧ್ಯೆ ಕೆಟ್ಟು ನಿಂತ ಅಂಬ್ಯುಲೆನ್ಸ್‌

Guruprasad: ಗುರುಪ್ರಸಾದ್‌ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸುವಾಗ ಸಮಸ್ಯೆ! ದಾರಿಮಧ್ಯೆ ಕೆಟ್ಟು ನಿಂತ ಅಂಬ್ಯುಲೆನ್ಸ್‌

0 comments

Guruprasad: ಸ್ಯಾಂಡಲ್‌ವುಡ್‌ ನಿರ್ದೇಶಕ, ನಟ ಮಠ ಗುರುಪ್ರಸಾದ್‌ ಅವರು ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹವನ್ನುವಿಕ್ಟೋರಿಯಾ ಆಸ್ಪತ್ರೆಯತ್ತ ಮೃತದೇಹ ಸಾಗಿಸುವ ಸಂದರ್ಭದಲ್ಲಿ ಸಮಸ್ಯೆ ಉಂಟಾಗಿದೆ. ಎರಡು ಬಾರಿ ದಾರಿ ಮಧ್ಯೆ ಕೆಟ್ಟುನಿಂತಿದೆ ಅಂಬ್ಯುಲೆನ್ಸ್‌. ಗೇರ್‌ ಕಟ್‌ ಆಗಿ ಅರ್ಧ ದಾರಿಯಲ್ಲೇ ನಿಂತಿದೆ ಅಂಬ್ಯುಲೆನ್ಸ್‌.

ಅರ್ಧ ದಾರಿಯಲ್ಲೇ ಅಂಬ್ಯುಲೆನ್ಸ್‌ ನಿಂತಿದೆ.

ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದರೆ ಇಂದೇ ಅಂತ್ಯಕ್ರಿಯೆ ನಡೆಯಲಿದೆ. ಆದರೆ ದಾರಿ ಮಧ್ಯೆಯೇ ಅಂಬ್ಯುಲೆನ್ಸ್‌ ಕೆಟ್ಟು ನಿಂತಿರುವುದು, ಆಸ್ಪತ್ರೆ ತಲುಪು ಲೇಟಾಗಬಹುದು ಎನ್ನಲಾಗಿದೆ.

ಗುರುಪ್ರಸಾದ್‌ ಅವರ ಮೃತದೇಹ ನೋಡಲು ಡಾಲಿ ಧನಂಜಯರ್‌ ಮತ್ತು ದುನಿಯಾ ವಿಜಯ್‌ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

banner

You may also like

Leave a Comment