Home Death ಮಂಗಳೂರು: ಮೆದುಳಿನ ರಕ್ತಸ್ರಾವ, ಸಿಎಆರ್‌ ಹೆಡ್‌ಕಾನ್ಸ್‌ಟೇಬಲ್‌ ಕುಸಿದು ಬಿದ್ದು ಸಾವು

ಮಂಗಳೂರು: ಮೆದುಳಿನ ರಕ್ತಸ್ರಾವ, ಸಿಎಆರ್‌ ಹೆಡ್‌ಕಾನ್ಸ್‌ಟೇಬಲ್‌ ಕುಸಿದು ಬಿದ್ದು ಸಾವು

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ನಗರ ಸಶಸ್ತ್ರ ದಳದಲ್ಲಿ ಹೆಡ್‌ಕಾನ್‌ಸ್ಟೇಬಲ್‌ ಆಗಿದ್ದ ಹಾವೇರಿ ಮೂಲದ ಮಾರುತಿ ಲಮಾಣಿ (36) ಅವರು ಮೆದುಳಿನ ರಕ್ತಸ್ರಾವಕ್ಕೀಡಾಗಿ ಸಾವಿಗೀಡಾಗಿದ್ದಾರೆ.

ಹೈವೆ ಪೆಟ್ರೋಲಿಂಗ್‌ ಮಾಡುವ ಕಾರಿನಲ್ಲಿ ಡ್ರೈವರ್‌ ಆಗಿ ಕರ್ತವ್ಯದಲ್ಲಿದ್ದ ಮಾರುತಿ ಲಮಾಣಿ ಭಾನುವಾರ ಬೆಳಗ್ಗೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದು, ಇವರ ಪತ್ನಿ ಕದ್ರಿ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿದ್ದು ಕರ್ತವ್ಯಕ್ಕೆ ತೆರಳಿದ್ದರು. ಮನೆಗೆ ಮರಳಿ ಮಲಗಿದ್ದ ಮಾರುತಿ ಅವರು ಅಸ್ವಸ್ಥರಾಗಿದ್ದು, ಕೂಡಲೇ ಸ್ಥಳೀಯರು ಸೇರಿ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಪರಿಶೀಲನೆ ಮಾಡಿ ಮೆದುಳಿನಲ್ಲಿ ರಕ್ತಸ್ರಾವ ಆಗಿದ್ದು, ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದಿದ್ದರು. ಎರಡು ದಿನ ಆಸ್ಪತ್ರೆಯಲ್ಲಿದ್ದ ಅವರು ಇಂದು ಬೆಳಗ್ಗೆ ಅಸುನೀಗಿರುವುದಾಗಿ ವರದಿಯಾಗಿದೆ.

ಮಾರತಿ ಸಿಎಆರ್‌ ಯುನಿಟ್‌ನಲ್ಲಿ ಒಂಭತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಹೆಡ್‌ಕಾನ್ಸ್‌ಟೇಬಲ್‌ ಆಗಿ ಭಡ್ತಿ ಪಡೆದಿದ್ದರು. ಪೊಲೀಸ್‌ ಇಲಾಖೆಯಲ್ಲಿ ಪ್ರತಿ ವರ್ಷ ಮೆಡಿಕಲ್‌ ಚೆಕಪ್‌ ನಡೆಯುತ್ತದೆ. ಇವರು ಬಿಪಿಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಡಿಸೆಂಬರ್‌ ಚೆಕಪ್‌ ವೇಳೆ ಬಿಪಿ ನಾರ್ಮಲ್‌ ಕಂಡು ಬಂದಿದ್ದರಿಂದ ಮಾತ್ರೆ ನಿಲ್ಲಿಸಿದ್ದರು ಎನ್ನಲಾಗಿದೆ. ಇವರಿಗೆ ಬೇರೆ ಯಾವುದೇ ತೊಂದರೆ ಇರಲಿಲ್ಲ ಎನ್ನಲಾಗಿದೆ.

ಮದುವೆಯಾಗಿ ಐದು ವರ್ಷವಾಗಿದ್ದು, ಇವರಿಗೆ ನಾಲ್ಕು ಮತ್ತು ಒಂದೂವರೆ ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.