Home » Udupi: ಪ್ರೀತಿಸಿ ಮದುವೆಯಾದ ಒಂದೇ ತಿಂಗಳಿಗೆ ಉದ್ಯಮಿ ಆತ್ಮಹತ್ಯೆ – ಹನಿಮೂನ್ ಹೊತ್ತಲ್ಲಿ ಆಗಿದ್ದೇನು?

Udupi: ಪ್ರೀತಿಸಿ ಮದುವೆಯಾದ ಒಂದೇ ತಿಂಗಳಿಗೆ ಉದ್ಯಮಿ ಆತ್ಮಹತ್ಯೆ – ಹನಿಮೂನ್ ಹೊತ್ತಲ್ಲಿ ಆಗಿದ್ದೇನು?

0 comments

Udupi : ಪ್ರೀತಿಸಿ ಹೊಸದಾಗಿ ವಿವಾಹವಾಗಿದ್ದ ಉದ್ಯಮಿಯೊಬ್ಬರು ಕೇವಲ ಒಂದು ತಿಂಗಳ ಅಂತರದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉಡುಪಿಯಲ್ಲಿ ನಡೆದಿದೆ. ಇದೀಗ ಸಾವಿನ ಸುತ್ತ ಹತ್ತಾರು ಅನುಮಾನಗಳು ಸೃಷ್ಟಿಯಾಗಿವೆ.

ಸುದೀಪ್ ಶೆಟ್ಟಿ ಮೃತ ಉದ್ಯಮಿ. ಕಾರ್ಕಳ ತಾಲೂಕಿನ ಬಂಗ್ಲಗುಡ್ಡೆ ನಿವಾಸಿ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸಂದೀಪ್ ಶೆಟ್ಟಿ, ಮೇಕಪ್ ಆರ್ಟಿಸ್ಟ್ ಹಾಗೂ ನಾತಕ ತಂಡಗಳಲ್ಲಿ ಕಲಾವಿದೆಯಾಗಿದ್ದ ಸೌಮ್ಯ ಶೆಟ್ಟಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಕೇವಲ ಒಂದು ತಿಂಗಳಲ್ಲಿ ದಂಪತಿಗಳ ನಡುವೆ ಉಂಟಾದ ವಿರಸವೇ ಈ ಸಾವಿಗೆ ಕಾರಣ ಎನ್ನಲಾಗಿದೆ. ಅಲ್ಲದೆ ಪತ್ನಿ ಸೌಮ್ಯಾಳ ಸರಣಿ ವಿವಾಹ ಹಾಗೂ ಆಕೆ ನೀಡುತ್ತಿದ್ದ ಎನ್ನಲಾದ ಮಾನಸಿಕ ಕಿರುಕುಳವೇ ಸುದೀಪ್ ಸಾವಿಗೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸೌಮ್ಯಾಳ ಪರಿಚಯ ಸುದೀಪ್‌ಗೆ ಸಾಮಾಜಿಕ ಜಾಲತಾಣದ ಮೂಲಕವಾಗಿತ್ತು. ಪೋಷಕರ ವಿರೋಧದ ನಡುವೆಯೂ ಸುದೀಪ್ ಆತುರ ಬಿದ್ದು ಕಳೆದ ಫೆಬ್ರವರಿ 16 ರಂದು ದೇವಸ್ಥಾನದಲ್ಲಿ ಮದುವೆಯಾಗಿ, ಮರುದಿನವೇ ನೋಂದಾಯಿತ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಯ ಅಸಲಿ ಮುಖವಾಡ ಕಳಚಿತ್ತು ಎಂದು ಕುಟುಂಬಸ್ಥರು ದೂರಿದ್ದಾರೆ. ಮದುವೆಯಾದ ಒಂದು ತಿಂಗಳ ಬಳಿಕ ಪತ್ನಿಯ ಕಿರುಕುಳ ತಾಳಲಾರದೆ ಸುದೀಪ್ ನೆಲ್ಯಾಡಿಯ ಪೋಷಕರ ಮನೆಗೆ ಬಂದಿದ್ದರು. ಈ ವಿಷಯ ತಿಳಿದ ಸೌಮ್ಯಾ, ಸ್ಕೂಟರ್‌ನಲ್ಲೇ 100 ಕಿ.ಮೀ ಪ್ರಯಾಣ ಬೆಳೆಸಿ ನೆಲ್ಯಾಡಿಗೆ ಬಂದು ರಸ್ತೆಯಲ್ಲೇ ಗಲಾಟೆ ಮಾಡಿದ್ದಳು ಎನ್ನಲಾಗಿದೆ.

ಬಳಿಕ ಸಂದೀಪ್ ಕಾರ್ಕಳದಲ್ಲಿರುವ ಪತ್ನಿ ಮನೆಗೆ ಬಂದಿದ್ದರು. ಮರುದಿನ ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಸೌಮ್ಯ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದಾಗಲೇ ಗೊತ್ತಾಗಿದ್ದು, ಆತ ಅದಾಗಲೇ ವಿಷ ಸೇವಿಸಿದ್ದಾರೆ ಎಂಬುದು. ಬಳಿಕ ಸುದೀಪ್ ತಂದೆ ಮಗನನ್ನು ಮಂಗಳೂರಿನ ಯೇನಪೋಯ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಆಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

banner

ಉದ್ಯಮಿಯ ಸಾವಿನ ಹಿನ್ನೆಲೆಯಲ್ಲಿ ಅವರ ಕುಟುಂಬದವರು ಪತ್ನಿಯ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿಯ ಕಿರುಕುಳ ಅಥವಾ ಅವರ ನಡುವಿನ ಸಂಘರ್ಷವೇ ಈ ಆತ್ಮಹತ್ಯೆಗೆ ಪ್ರೇರಣೆಯಾಗಿರಬಹುದು ಎಂದು ದೂರಿನಲ್ಲಿ ಶಂಕಿಸಲಾಗಿದೆ. ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಉದ್ಯಮಿಯ ಸಾವಿಗೆ ನಿಖರ ಕಾರಣವೇನು? ದಂಪತಿಗಳ ನಡುವೆ ಅಂತಹದ್ದೇನು ಘರ್ಷಣೆ ನಡೆದಿತ್ತು? ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

You may also like