Home Crime ಪುತ್ತೂರು: ಗ್ಯಾರೇಜ್‌ನಲ್ಲಿ ಮಾತಿನ ಚಕಮಕಿ, ಹಲ್ಲೆ: ಪ್ರಕರಣ ದಾಖಲು

ಪುತ್ತೂರು: ಗ್ಯಾರೇಜ್‌ನಲ್ಲಿ ಮಾತಿನ ಚಕಮಕಿ, ಹಲ್ಲೆ: ಪ್ರಕರಣ ದಾಖಲು

Crime

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಪರ್ಲಡ್ಕ ಬೈಪಾಸ್‌ ರಸ್ತೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ಆರ್‌ ಆರ್‌ ಮೋಟಾರ್‌ ವರ್ಕ್ಸ್‌ ಎಂಬ ಗ್ಯಾರೇಜ್‌ ಬಳಿ ಗ್ಯಾರೇಜ್‌ ಮಾಲಕ ಮತ್ತು ವ್ಯಕ್ರಿಯೊಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಹಲ್ಲೆ ನಡೆದ ಕುರಿತು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಪರ್ಲಡ್ಕ ಬೈಪಾಸ್‌ ರಸ್ತೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ಆರ್.ಆರ್.ಮೋಟಾರ್‌ ವರ್ಕ್ಸ್‌ನ ಮಾಲಕ ಬಲ್ನಾಡು ನಿವಾಸಿ ರಮೇಶ್‌ ಆಚಾರ್ಯ ಅವರು ಈ ಕುರಿತು ದೂರು ನೀಡಿರುವುದಾಗಿ ವರದಿಯಾಗಿದೆ.

ಜ.27ರಂದು ನಾನು ಗ್ಯಾರೇಜ್‌ ತೆರೆಯುತ್ತಿದ್ದ ಸಂದರ್ಭದಲ್ಲಿ ಇನ್ನೋವ ಕಾರಿನಲ್ಲಿ ಬಂದ ರಮೇಶ್‌ ನಾಯ್ಕ ಎನ್ನುವವರು ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ. ಇನ್ನೋವ ಕಾರಿನ ಕ್ಯಾರಿಯರ್‌ ಮಾರಾಟ ಮಾಡಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿರುವುದಾಗಿ ದೂರಿನಲ್ಲಿ ಅವರು ತಿಳಿಸಿದ್ದಾರೆ.