

ಕಾಶಿಪಟ್ಟ ಗ್ರಾಮದ ಶಿವಗಿರಿ ಎಂಬಲ್ಲಿ ಮನೆಯೊಂದಕ್ಕೆ ಭೇಟಿ ನೀಡಿದ ಕಳ್ಳನೋರ್ವ ಚಿನ್ನವನ್ನು ತೊಳೆದುಕೊಡುವುದಾಗಿ ಹೇಳಿ, ಚಿನ್ನ ತಗೊಂಡು ಮಹಿಳೆಯನ್ನು ಯಾಮಾರಿಸಿದ ಘಟನೆ ನಡೆದಿದೆ.
ಚಿನ್ನ ಪಾಲಿಶ್ ಮಾಡುವ ನೆಪ ಹೇಳಿ ವ್ಯಕ್ತಿ, ಆಗ ಮಹಿಳೆ ಸರವನ್ನು ಆತನ ಕೈಗೆ ನೀಡುತ್ತಿದ್ದಂತೆ ಅದನ್ನು ಹಿಡಿದುಕೊಂಡು ಆತ ಪರಾರಿಯಾಗಿದ್ದಾನೆ. ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅದೇ ಪರಿಸರ ಮತ್ತೊಂದು ಮನೆಗೆ ಭೇಟಿ ನೀಡುತ್ತಿರುವ ಖದೀಮನ ದೃಷ್ಯ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈತ ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.
ಪೊಲೀಸ್ ಠಾಣೆ – 7259707417













