ಮಡಿಕೇರಿ: ಕುಟುಂಬದ ಕಲಹ ಮತ್ತು ಕುಡಿತದ ನಶೆಯಿಂದ ಸಹೋದರನೋರ್ವ ತನ್ನ ಅಣ್ಣ ಮತ್ತು ತಂಗಿಯನ್ನು ಕೊಚ್ಚಿ ಕೊಂದಿರುವ ಘಟನೆ ಕೊಡಗಿನ ಭಾಗಮಂಡಲ ವ್ಯಾಪ್ತಿಯಲ್ಲಿ ನಡೆದಿದೆ.

ಮಾ.11 ರಂದು ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ಸಹೋದರನೊಬ್ಬ ತನ್ನ ಅಣ್ಣ ಮತ್ತು ತಂಗಿಯನ್ನು ಕಡಿದು ಕೊಲೆ ಮಾಡಿದ್ದಾನೆ.
ಮೃತರನ್ನು ಅಡಿಯರ ಯಶೋಧ (45) ಮತ್ತು ಕುಂಜಿರಾಮ (47) ಎಂದು ಗುರುತಿಸಲಾಗಿದೆ. ಆರೋಪಿ ಚಂದು (65) ಎನ್ನುವಾತ ಕೃತ್ಯ ಎಸಗಿದ್ದಾನೆ.
ಆರೊಪಿ ಚಂದು ಕುಡಿದ ಮತ್ತಿನಲ್ಲಿ ತನ್ನ ಒಡಹುಟ್ಟಿದನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಕೊಲೆಗೆ ಕೌಟುಂಬಿಕ ಕಲಹ ಕಾರಣ ಎಂದು ಶಂಕೆ ವ್ಯಕ್ತವಾಗಿದೆ
ಕೊಲೆ ನಡೆದ ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾನೆ. ಆರೋಪಿ ಚಂದುನನ್ನು ಪೊಲೀಸರು ಬಂಧನ ಮಾಡಿದ್ದಾರೆ.

