ಗೆಳತಿಯಿಂದಲೇ ಕೈಯಿಂದಲೇ ಗ್ರಾಮದ ಮಾಜಿ ಮುಖ್ಯಸ್ಥರೊಬ್ಬರು ಭೀಕರವಾಗಿ ಹತ್ಯೆಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರತಾಫ್ಗಢದಲ್ಲಿ ನಡೆದಿದೆ. ಮೃತ ವ್ಯಕ್ತಿಗೆ 18 ಮಂದಿ ಮಕ್ಕಳಿದ್ದರು. ಚೀಲದಲ್ಲಿ ತುಂಬಿಸಿ ಕಾಲುವೆಗೆ ಎಸೆಯಲಾಗಿತ್ತು. ಮೃತ ವ್ಯಕ್ತಿಯು ಮಾರ್ಚ್ 18 ರಿಂದ ನಾಪತ್ತೆಯಾಗಿದ್ದರು.

ಮೃತ ವ್ಯಕ್ತಿಯ ಗೆಳತಿ ಸುಮನ್ ಮತ್ತು ಆಕೆಯ ಸಹಚರರು ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಲ್ಶನ್ಗೆ ತಲೆಗೆ ರಾಡ್ನಿಂದ ಹಲ್ಲೆ ಮಾಡಲಾಗಿದ್ದು, ಇದು ಆ ವ್ಯಕ್ತಿಯ ಸಾವಿಗೆ ಕಾರಣ ಎನ್ನಲಾಗಿದೆ. ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸುಮನ್ನನ್ನು ಬಂಧನ ಮಾಡಲಾಗಿದೆ.
ಮಿಶ್ರಪುರ್ ಮುಸ್ತಾಕ್ ಗ್ರಾಮದ ಮಾಜಿ ಪ್ರಧಾನ ಗುಲ್ಶನ್ಗೆ ಇಬ್ಬರು ಪತ್ನಿಯರು ಮತ್ತು 18 ಮಕ್ಕಳನ್ನು ಅಗಲಿದ್ದಾರೆ. ಪೊಲೀಸರ ಪ್ರಕಾರ, ಈತ ಎರಡು ಬಾರಿ ಮದುವೆಯಾಗಿದ್ದು, ಮೊದಲ ಪತ್ನಿ ಕಿಸ್ಮತುಲ್ ನಿಶಾ ಅವರಿಗೆ ಒಂಭತ್ತು ಮಕ್ಕಳಿದ್ದಾರೆ. ಎರಡನೇ ಪತ್ನಿ ಅಂಬಿಯಾ ಬಾನೋಗೆ ಕೂಡಾ ಒಂಭತ್ತು ಮಕ್ಕಳಿದ್ದಾರೆ. ಎರಡೂ ಕುಟುಂಬಗಳು ಒಟ್ಟಿಗೆ ವಾಸಿಸುತ್ತಿದ್ದವು. ಪೊಲೀಸರು ಕೊಲೆಯ ತನಿಖೆಯನ್ನು ಮುಂದುವರಿಸುತ್ತಿದ್ದಂತೆ, ಕುಟುಂಬದ ಸದಸ್ಯರು ಸ್ಥಳದಲ್ಲಿ ಜಮಾಯಿಸಿದ್ದರು.

