HomeCrimeBengaluru: ಕಂಠಪೂರ್ತಿ ಮದ್ಯ ಕುಡಿಸಿ ಚಿನ್ನಾಭರಣ ದೋಚಿದ ಕುಚಿಕು ಗೆಳೆಯರು!

Bengaluru: ಕಂಠಪೂರ್ತಿ ಮದ್ಯ ಕುಡಿಸಿ ಚಿನ್ನಾಭರಣ ದೋಚಿದ ಕುಚಿಕು ಗೆಳೆಯರು!

Hindu neighbor gifts plot of land

Hindu neighbour gifts land to Muslim journalist

Bengaluru: ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತನಿಗೆ ಕಂಠಪೂರ್ತಿ ಮದ್ಯ ಕುಡಿಸಿದ ಸ್ನೇಹಿತರೇ ಗ್ಯಾಂಗ್‌ವೊಂದಕ್ಕೆ ಸುಪಾರಿ ನೀಡಿ ಆತನ ಚಿನ್ನಾಭರಣ ದರೋಡೆ ಮಾಡಿಸಿರುವ ಘಟನೆ ನಡೆದಿದೆ.

ದರೋಡೆಗೊಳಗಾದವರು ಉದ್ಯಮಿ ಚಂದನ್ ಎಂದು ತಿಳಿದು ಬಂದಿದೆ. ಈ ಸಂಬಂಧ ಚಂದನ್ ನೀಡಿದ ದೂರಿನ ಮೇರೆಗೆ ಆತನ ಸ್ನೇಹಿತರಾದ ಚಂದನ್, ಪವನ್, ಅಚಲ್, ಪ್ರೇಮ್ ಶೆಟ್ಟಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ ಲಕ್ಷಾಂತರ ರೂ.ಮೌಲ್ಯದ 40 ಗ್ರಾಂ ಚಿನ್ನದ ಸರ, 20 ಗ್ರಾಂ ಕೈ ಕಡಗವನ್ನು ಹಾಗೂ 9 ಗ್ರಾಂ ಉಂಗುರ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಎ.30 ರಂದು ಮೂವರು ಚಿಕ್ಕಜಾಲದ ನೆಕ್ಟ್ ಚಾಪ್ಟರ್ ಪಬ್‌ ಗೆ ಹೋಗಿದ್ದರು. ಈ ಸಂದರ್ಭ ಚಂದನ್‌ಗೆ ಪವನ್ ಮತ್ತು ಅಚಲ್ ಕಂಠಪೂರ್ತಿ ಕುಡಿಸಿದ್ದರು. ಬಳಿಕ ಪವನ್ ಹಾಗೂ ಅಚಲ್‌, ಚಂದನ್‌ನನ್ನು ಕಾರಿನತ್ತ ಕರೆದೊಯ್ದಿದ್ದಾರೆ. ಈ ವೇಳೆ ಅಚಲ್ ಜೆ.ಪಿ ನಗರದ ಪ್ರೇಮ್ ಶೆಟ್ಟಿ ಹಾಗೂ ಆತನ ಗ್ಯಾಂಗ್‌ಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಅದರಂತೆ ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು ಚಂದನ್‌ಗೆ ಹಿಗ್ಗಾಮುಗ್ಗಾ ಥಳಿಸಿ ಆತನ ಬಳಿಯಿದ್ದ ಚಿನ್ನಾಭರಣ ದೋಚಿದ್ದಾರೆ.

RELATED ARTICLES

Most Popular

Recent Comments