

ಬೆಳ್ತಂಗಡಿ: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಲಯವು ಆರೋಪಿಗೆ ದಂಡ ಪಾವತಿಸಲು ಆದೇಶ ನೀಡಿರುವ ಘಟನೆ ನಡೆದಿದೆ.
ಪ್ರಕರಣ ವಿವರ: ಪ್ರವೀಣ್ ಭಂಡಾರಿ ಬಿನ್ ಭಂಡಾರಿ ಅವರು ಬೆಳ್ತಂಗಡಿಯ ರಾಜ್ಯ ಸರಕಾರಿ ಅಧಿಕಾರಿಗಳ ವಿವಿದ್ದೊದ್ದೇಶ ಸಹಕಾರ ಸಂಘದಲ್ಲಿ ಸಾಲ ಪಡೆದಿದ್ದು, ಅದನ್ನು ಮರುಪಾವತಿಸಲು ಚೆಕ್ಕು ನೀಡಿರುತ್ತಾರೆ. ಸದ್ರಿ ಚೆಕ್ಕನ್ನು ನಗದೀಕರಣ ಮಾಡಲು ಬ್ಯಾಂಕಿಗೆ ಹಾಜರು ಪಡಿಸಿದಾಗ ಖಾತೆಯಲ್ಲಿ ಹಣ ಇಲ್ಲವೆಂದು ಚೆಕ್ಕು ಅಮಾನ್ಯಗೊಂಡಿದೆ.
ಈ ಕಾರಣದಿಂದ ಸೊಸೈಟಿ ಬ್ಯಾಂಕಿನವರು ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಿ.ಸಿ.ನಂಬ್ರ 247/2024 ರಲ್ಲಿ ಚೆಕ್ಕು ಅಮಾನ್ಯ ಪ್ರಕರಣ ದಾಖಲು ಮಾಡಿದ್ದರು. ಆರೋಪಿ ಪ್ರವೀಣ್ ಭಂಡಾರಿಯವರ ಚೆಕ್ ಅಮಾನ್ಯ ಪ್ರಕರಣ ನ್ಯಾಯಾಲಯದಲ್ಲಿ ಇದೀಗ ಸಾಬೀತಾಗಿದ್ದು. ಫೆ. 2 ರಂದು ನ್ಯಾಯಾಧೀಶಕರು ಆದೇಶ ನೀಡಿರುವ ಪ್ರಕಾರ, ಆರೋಪಿ ಪ್ರವೀನ್ ಭಂಡಾರಿ ರೂ.3,71,961 ನ್ನು ದಂಡವಾಗಿ ಪಾವತಿಸಲು ಸೂಚಿಸಿದೆ.
ಇದರಲ್ಲಿ 3,70,961 ರೂ. ಅನ್ನು ಪ್ರಕರಣ ಫಿರ್ಯಾದಿ ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಂಘಕ್ಕೆ ವಾರ್ಷಿ ಶೇ.9 ರ ಬಡ್ಡಿಯೊಂದಿಗೆ ಪರಿಹಾರವಾಗಿ ಪಾವತಿಸಲು ಸೂಚಿಸಿದ್ದು, ರೂ. 2000 ನ್ನು ಪ್ರಕರಣ ಬಾಬ್ತು ಸರಕಾರಕ್ಕೆ ಪಾವತಿಸಲು ನ್ಯಾಯಾಲಯವು ಆದೇಶ ನೀಡಿದೆ.
ಒಂದು ವೇಳೆ ತಪ್ಪಿದ್ದಲ್ಲಿ ಆರೋಪಿ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ಅನುಭವಿಸುವಂತೆ ಆದೇಶ ನೀಡಿರುತ್ತಾರೆ. ಈ ಪ್ರಕರಣದಲ್ಲಿ ನ್ಯಾಯವಾದಿ ಶಿವಯ್ಯ ಎಸ್ ಎಲ್ ಪಿರ್ಯಾದಿ ಸೊಸೈಟಿ ಬ್ಯಾಂಕಿನ ಪರವಾಗಿ ವಾದ ಮಾಡಿದ್ದರು.













