Home Crime Atul Subhash Suicide Case: ಸತ್ತ ವ್ಯಕ್ತಿಯ ಮೇಲೆ ಆಪಾದನೆ ಮಾಡಿದರೆ ನ್ಯಾಯ ದೊರಕುತ್ತದೆಯೇ? ಕಾನೂನು...

Atul Subhash Suicide Case: ಸತ್ತ ವ್ಯಕ್ತಿಯ ಮೇಲೆ ಆಪಾದನೆ ಮಾಡಿದರೆ ನ್ಯಾಯ ದೊರಕುತ್ತದೆಯೇ? ಕಾನೂನು ಏನು ಹೇಳುತ್ತದೆ?

ಅತುಲ್‌ ಸುಭಾಷ್‌ ಕೇಸ್‌ಗೆ ಸಂಬಂಧಪಟ್ಟಂತೆ ನಿಕಿತಾ ಸಿಂಘಾನಿಯಾ ಸತ್ತ ವ್ಯಕ್ತಿಯ ಮೇಲೆ ಮಾಡಿದ ಆರೋಪ ಹೇಳಿಕೆಗಳು ಪ್ರಕರಣವನ್ನು ಬಲಪಡಿಸುತ್ತದೆಯೇ? ಈ ವಿಷಯದಲ್ಲಿ ಕಾನೂನು ಏನು ಹೇಳುತ್ತದೆ? ಸತ್ತ ವ್ಯಕ್ತಿಯನ್ನು ಆರೋಪಿಸಿ ರಕ್ಷಿಸಬಹುದೇ?

Hindu neighbor gifts plot of land

Hindu neighbour gifts land to Muslim journalist

Atul Subhash Suicide Case: ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಡಿಸೆಂಬರ್ 9, 2024 ರಂದು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆಗೂ ಮುನ್ನ ಅತುಲ್ ಸುಭಾಷ್ ತನ್ನ ಪತ್ನಿ ಮತ್ತು ಅತ್ತೆಯ ಮೇಲೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋ ಬಿಡುಗಡೆ ಮಾಡಿದ್ದರು. ಇದರ ನಂತರ, ಅತುಲ್‌ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಅತ್ತೆಯನ್ನು ಪೊಲೀಸರು ಬಂಧಿಸಿದರು.

ಇದೀಗ ಪ್ರಕರಣದಲ್ಲಿ ಆರೋಪಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಮತ್ತು ಸಹೋದರ ಅನುರಾಗ್ ಜಾಮೀನು ಪಡೆದಿದ್ದಾರೆ. ಜಾಮೀನು ಪಡೆಯುವ ಮುನ್ನ ನಿಕಿತಾ ಸಿಂಘಾನಿಯಾ ಅವರು ಅತುಲ್ ಸುಭಾಷ್‌ ತನಗೆ ಕೊಟ್ಟ ಹಿಂಸೆಗಳ ಕುರಿತು ಬಹಿರಂಗಪಡಿಸಿದ್ದರು ಮತ್ತು ಅನೇಕ ಸಂವೇದನಾಶೀಲ ಆರೋಪಗಳನ್ನು ಮಾಡಿದ್ದರು. ನನ್ನ ತಾಯಿಯ ಎದುರೇ ಅತುಲ್ ಥಳಿಸಿದ್ದಾನೆ ಎಂದೂ ನಿಕಿತಾ ಹೇಳಿದ್ದಾಳೆ. ಈಗ ಪ್ರಶ್ನೆಯೆಂದರೆ ನಿಕಿತಾ ಸಿಂಘಾನಿಯಾ ಮಾಡಿದ ಹೇಳಿಕೆಗಳು ಪ್ರಕರಣವನ್ನು ಬಲಪಡಿಸುತ್ತದೆಯೇ? ಈ ವಿಷಯದಲ್ಲಿ ಕಾನೂನು ಏನು ಹೇಳುತ್ತದೆ? ಸತ್ತ ವ್ಯಕ್ತಿಯನ್ನು ಆರೋಪಿಸಿ ರಕ್ಷಿಸಬಹುದೇ?

ನಿಕಿತಾ ಸಿಂಘಾನಿಯಾ ತಮ್ಮ ಪತಿ ಅತುಲ್ ಸುಭಾಷ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಪೊಲೀಸ್ ವಿಚಾರಣೆ ವೇಳೆ ನಿಕಿತಾ ಅತುಲ್ ಸುಭಾಷ್ ಚಾರಿತ್ರ್ಯಹೀನ ಎಂದು ಆರೋಪ ಮಾಡಿದ್ದಾರೆ. ಅತುಲ್ ಸುಭಾಷ್ ತನಗೆ ಥಳಿಸಿ ಅಗತ್ಯ ವಸ್ತುಗಳನ್ನು ದೋಚಿದ್ದಾರೆ ಎಂದು ನಿಕಿತಾ ಆರೋಪಿಸಿರುವ ದಾಖಲೆ ಕೂಡ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ.

ಸತ್ತ ವ್ಯಕ್ತಿಯ ವಿರುದ್ಧ ಆರೋಪ ಮಾಡಬಹುದೇ?
ಸತ್ತ ವ್ಯಕ್ತಿಯನ್ನು ಆಪಾದಿಸುವುದು ಪ್ರಕರಣವನ್ನು ದುರ್ಬಲಗೊಳಿಸುವುದಿಲ್ಲ, ಪ್ರತಿವಾದಿಯ ಮರಣದ ನಂತರವೂ ಪ್ರಕರಣವನ್ನು ಪ್ರಾರಂಭಿಸಬಹುದು ಅಥವಾ ಮುಂದುವರಿಸಬಹುದು. ಆದರೆ, ಭಾರತೀಯ ಕಾನೂನಿನ ವಿಶೇಷತೆ ಎಂದರೆ ಅದು ತನ್ನ ನಿರ್ಧಾರಗಳನ್ನು ಸಾಕ್ಷ್ಯಾಧಾರಗಳ ಆಧಾರದ ಮೇಲೆ ನೀಡುವುದು. ಯಾವುದೇ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯು ಸತ್ತ ವ್ಯಕ್ತಿಯ ವಿರುದ್ಧ ಯಾವುದೇ ಆರೋಪವನ್ನು ಮಾಡುತ್ತಿದ್ದರೆ, ನ್ಯಾಯಾಲಯವು ಅದನ್ನು ಗಂಭೀರವಾಗಿ ಆಲಿಸುತ್ತದೆ ಮತ್ತು ಅವರ ಆರೋಪಗಳನ್ನು ಸಾಬೀತುಪಡಿಸಲು ಸಂಬಂಧಿಸಿದ ವ್ಯಕ್ತಿಗೆ ಅವಕಾಶ ನೀಡುತ್ತದೆ.

ಕಾನೂನಿನ ಪ್ರಕಾರ, ನಿಕಿತಾ ಸಿಂಘಾನಿಯಾಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ಆದರೆ, ಅವರು ತಮ್ಮ ಆರೋಪಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕು, ಅದರ ನಂತರವೇ ನ್ಯಾಯಾಲಯವು ದಾಖಲೆಗಳು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ತೀರ್ಪು ನೀಡುತ್ತದೆ.