Home Breaking Entertainment News Kannada ಒಂದು ತಿಂಗಳೊಳಗೆ 52 ಲಕ್ಷ ರೂ. ಸಾಲ ಮರು ಪಾವತಿ ಮಾಡುವಂತೆ ದ್ವಾರಕೀಶ್ ಗೆ ಚಾಟಿ...

ಒಂದು ತಿಂಗಳೊಳಗೆ 52 ಲಕ್ಷ ರೂ. ಸಾಲ ಮರು ಪಾವತಿ ಮಾಡುವಂತೆ ದ್ವಾರಕೀಶ್ ಗೆ ಚಾಟಿ ಬೀಸಿದ ಕೋರ್ಟ್ | ಕೋರ್ಟ್ ನಲ್ಲಿ “ಕನ್ನಡದ ಕುಳ್ಳ” ನಿಗೆ ಭಾರಿ ಮುಖಭಂಗ

Hindu neighbor gifts plot of land

Hindu neighbour gifts land to Muslim journalist

ಸ್ಯಾಂಡಲ್​ವುಡ್ ನ ಹಿರಿಯ ನಟ “ಕನ್ನಡದ ಕುಳ್ಳ” ಎಂದೇ ಖ್ಯಾತರಾಗಿರುವ ದ್ವಾರಕೀಶ್​ ಅವರ ವಿರುದ್ಧ ಇದೀಗ ವಂಚನೆ ಆರೋಪ ಕೇಳಿಬಂದಿದ್ದು, 50 ಲಕ್ಷ ರೂ. ಸಾಲದ ಪಡೆದ ಹಣವನ್ನು ವಾಪಸ್ ಕೊಡದೆ ಸತಾಯಿಸುತ್ತಿರುವ ಆರೋಪ ಅವರ ಮೇಲಿದ್ದು, ಹಣ ಮರುಪಾವತಿಸುವಂತೆ ಕೋರ್ಟ್​ ತೀರ್ಪು ನೀಡಿದೆ.

ಈ ಮೊದಲು ಸಾಲ ಕೊಟ್ಟವರ ವಿರುದ್ಧವೇ ಕೊಲೆ ಯತ್ನ ಕೇಸ್ ಹಾಕಿ ದ್ವಾರಕೀಶ್​ ಸೋತಿದ್ದರು. ಇದೀಗ 52 ಲಕ್ಷ ರೂಪಾಯಿ ಸಾಲದ ಹಣ ವಾಪಸ್ ನೀಡುವಂತೆ ಕೋರ್ಟ್ ತೀರ್ಪು ನೀಡಿದೆ. 2013ರಲ್ಲಿ ಕೆಸಿಎನ್ ಚಂದ್ರಶೇಖರ್​ರಿಂದ ದ್ವಾರಕೀಶ್​ ಅವರು ಸಾಲ ಪಡೆದುಕೊಂಡಿದ್ದರು. ನಟಿ ಪ್ರಿಯಾಮಣಿ ಅಭಿನಯದ ಚಾರುಲತಾ ಸಿನಿಮಾ ಬಿಡುಗಡೆಗಾಗಿ ದ್ವಾರಕೀಶ್ ಸಾಲ ಪಡೆದಿದ್ದರು.

ದ್ವಾರಕೀಶ್ ಸಂಬಂಧಿ ಸಂಜೀವ್ ಎಂಬುವರು ಕೆಸಿಎನ್ ಚಂದ್ರಶೇಖರ್​ರಿಂದ ಹಣ ಕೊಡಿಸಿದ್ದರು. 50 ಲಕ್ಷ ರೂಪಾಯಿ ಸಾಲ ಪಡೆಯುವ ವೇಳೆಯಲ್ಲಿ ದ್ವಾರಕೀಶ್​ ಅವರು ಚೆಕ್ ನೀಡಿದ್ದರು. ಆದರೆ, ನಾನು ಚೆಕ್ ನೀಡಿಯೇ ಇಲ್ಲ ಮತ್ತು ಚೆಕ್​ನಲ್ಲಿರುವ ಸಹಿಯೂ ಕೂಡ ನನ್ನದಲ್ಲ ಎಂದು ಕೋರ್ಟಿನಲ್ಲಿ ದ್ವಾರಕೀಶ್​ ವಾದಿಸಿದ್ದರು. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಚೆಕ್​ ಮೇಲಿರುವ ಸಹಿ ದ್ವಾರಕೀಶ್ ಅವರದ್ದೇ ಎಂದು ಸಾಬೀತಾಗಿತ್ತು.

2019 ರಲ್ಲಿ ಕೋರ್ಟ್ 52 ಲಕ್ಷ ರೂ. ಹಣ ಹಿಂದಿರುಗಿಸುವಂತೆ ದ್ವಾರಕೀಶ್ ಅವರಿಗೆ ಆದೇಶಿಸಿತ್ತು. ಆದರೆ, ಹಣ ಹಿಂದಿರುಗಿಸದೇ ಸೆಷನ್ಸ್ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯದ ಆದೇಶವನ್ನು ಸೆಷನ್ಸ್ ಕೋರ್ಟ್ ಎತ್ತಿಹಿಡಿದಿದ್ದು, ಇದೀಗ ದ್ವಾರಕೀಶ್​ಗೆ ಮುಖಭಂಗವಾಗಿದೆ. ಕೇವಲ ಒಂದು ತಿಂಗಳಲ್ಲಿ 52 ಲಕ್ಷ ರೂಪಾಯಿ ಹಣ ಹಿಂದಿರುಗಿಸುವಂತೆ ಕೋರ್ಟ್ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾತನಾಡಿರುವ ದ್ವಾರಕೀಶ್ ಸಂಬಂಧಿ ಸಂಜೀವ್ ಕುಮಾರ್, ನಾನು ಮತ್ತು ಚಂದ್ರಶೇಖರ್ ಸ್ನೇಹಿತರು. ಚಾರುಲತಾ ಸಿನಿಮಾ ರಿಲೀಸ್ ವೇಳೆ ದ್ವಾರಕೀಶ್​ ಅವರಿಗೆ ಸಂಕಷ್ಟ ಎದುರಾಗಿತ್ತು. ಈ ವೇಳೆ 2013ರಲ್ಲಿ ನಾನೇ ಚಂದ್ರಶೇಖರ್ ಬಳಿ ಮಾತನಾಡಿ 50 ಲಕ್ಷ ರೂ. ಹಣ ಕೊಡಿಸಿದ್ದೆ. ನಂತರ ಸಾಕಷ್ಟು ಬಾರಿ ಹಣ ಕೊಡದೆ ಸತಾಯಿಸಿದ್ದರು. ಅಲ್ಲದೆ, ಚೆಕ್ ಕೊಟ್ಟು ನಂತರ ಸಹಿನೂ ನನ್ನದಲ್ಲ ಅಂತ ಕೋರ್ಟ್​ನಲ್ಲಿ ಹೇಳಿದ್ದರು. ನನ್ನ ಮೇಲೆ ಹಾಗೂ ಚಂದ್ರಶೇಖರ್ ಮೇಲೆ ಈ ಹಿಂದೆ ಎಚ್ಎಸ್ಆರ್ ಲೇಔಟ್​ನಲ್ಲಿ ಕೊಲೆ ಕೇಸ್ ಸಹ ದಾಖಲಿಸಿದ್ದರು. ನಂತರ ನಾವು ಬೇಲ್ ತೆಗೆದುಕೊಂಡಿದ್ದೆವು. ಕೆಳ ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬಂದಿತ್ತು. ಆದ್ರೆ, ದ್ವಾರಕೀಶ್ ಮತ್ತೆ 5 ಲಕ್ಷ ರೂ. ಕಟ್ಟಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ರು. ಇದೀಗ ಮತ್ತೆ ಕೇಸ್ ನಮ್ಮ ಪರವಾಗಿದೆ. ದ್ವಾರಕೀಶ್ ಈ ರೀತಿ ಮಾತನಾಡಬಾರದು. ನಮಗೆ ನ್ಯಾಯಕ್ಕೆ ಸಿಕ್ಕಿದೆ ಎಂದಿದ್ದಾರೆ.