Home Breaking Entertainment News Kannada Allu Arjun: ಸಿಎಂ ರೇವಂತ್‌ ರೆಡ್ಡಿ ಕೈಯಿಂದ ಪ್ರಶಸ್ತಿ ಸ್ವೀಕರಿಸಿದ ನಟ ಅಲ್ಲು ಅರ್ಜುನ್;‌ ಡೈಲಾಗ್‌...

Allu Arjun: ಸಿಎಂ ರೇವಂತ್‌ ರೆಡ್ಡಿ ಕೈಯಿಂದ ಪ್ರಶಸ್ತಿ ಸ್ವೀಕರಿಸಿದ ನಟ ಅಲ್ಲು ಅರ್ಜುನ್;‌ ಡೈಲಾಗ್‌ ಅಬ್ಬರ

Hindu neighbor gifts plot of land

Hindu neighbour gifts land to Muslim journalist

Allu Arjun: ಪುಷ್ಪ-2 ಚಿತ್ರದ ಅಭಿನಯಕ್ಕೆ ಅಲ್ಲು ಅರ್ಜುನ್‌ ಅವರಿಗೆ ತೆಲಂಗಾಣ ಸರಕಾರ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಿದೆ. ಈ ಪ್ರಶಸ್ತಿಯನ್ನು ಅಲ್ಲು ಅರ್ಜುನ್‌ ಅವರಿಗೆ ಸಿಎಂ ರೇವಂತ್‌ ರೆಡ್ಡಿಯವರು ನೀಡಿದ್ದಾರೆ.

ಪುಷ್ಪ-2 ರಿಲೀಸ್‌ ಸಂದರ್ಭದಲ್ಲಿ ಅಲ್ಲು ಅರ್ಜುನ್‌ ಜೈಲಿಗೆ ಕೂಡಾ ಹೋಗಿ ಬಂದಿದ್ದರು. ತೆಲಂಗಾಣದ ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್‌ ಭೇಟಿ ಕೊಟ್ಟ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ, ಸಾವಾಗಿತ್ತು. ಈ ಸಂದರ್ಭದಲ್ಲಿ ತೆಲಂಗಾಣ ಸರಕಾರ ಅಲ್ಲು ಅರ್ಜುನ್‌ ಅವರನ್ನ ಬಂಧಿಸಿ ಚಂಚಲಗುಡ್ಡ ಜೈಲಿನಲ್ಲಿ ಇಡಲಾಗಿತ್ತು.

ಇದೀಗ ನಟ ಅಲ್ಲು ಅರ್ಜುನ್‌ಗೆ ಉತ್ತಮ ನಟ ಪ್ರಶಸ್ತಿಯನ್ನು ತೆಲಂಗಾಣ ಸರಕಾರ ನೀಡಿ ಗೌರವಿಸಿದೆ. 2024 – 25ನೇ ಸಾಲಿನ ಗದ್ದರ್ ಅವಾರ್ಡ್‌ಗಳನ್ನು ತೆಲಂಗಾಣ ಸರ್ಕಾರ ಪ್ರಕಟ ಮಾಡಿದ್ದು, ಉತ್ತಮ ನಟ ಪ್ರಶಸ್ತಿ ಅಲ್ಲು ಅರ್ಜುನ್ ಪಾಲಾಗಿದೆ. ಪುಷ್ಪ 2 ಚಿತ್ರದ ನಟನೆಗಾಗಿ ಉತ್ತಮ ನಟ ಪ್ರಶಸ್ತಿ ಲಭಿಸಿದೆ.

ಇದೀಗ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ. ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವರೇ ಅಲ್ಲು ಅರ್ಜುನ್‌ಗೆ ಪ್ರಶಸ್ತಿ ನೀಡಿದ್ದನ್ನು ಅಭಿಮಾನಿಗಳು ಟ್ರೋಲ್‌ ಮಾಡುತ್ತಿದ್ದಾರೆ. ಪುಷ್ಪ 2 ಚಿತ್ರದ ಆಡಿಯೋ ಸಂದರ್ಭ ರೇವಂತ್‌ ರೆಡ್ಡಿ ಹೆಸರು ಹೇಳಿಲ್ಲ ಎನ್ನುವ ಕಾರಣಕ್ಕೆ ಅರೆಸ್ಟ್‌ ಮಾಡಲಾಗಿತ್ತು. ಇದೀಗ ಅದೇ ರೇವಂತ್‌ ರೆಡ್ಡಿ ಇಂದು ಉತ್ತಮ ಪ್ರಶಸ್ತಿಯನ್ನು ಅಲ್ಲು ಅರ್ಜುನ್‌ ಗೆ ನೀಡಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಟ್ರೋಲ್‌ ಆಗುತ್ತಿದೆ.