Home » ಪೂಂಜಾಲಕಟ್ಟೆ: ಕಾರು-ಸ್ಕೂಟರ್‌ ಡಿಕ್ಕಿ, ಸವಾರ ಸಾವು

ಪೂಂಜಾಲಕಟ್ಟೆ: ಕಾರು-ಸ್ಕೂಟರ್‌ ಡಿಕ್ಕಿ, ಸವಾರ ಸಾವು

0 comments

ಪೂಂಜಾಲಕಟ್ಟೆ: ಕಾರು ಡಿಕ್ಕಿಯಾಗಿ ಸ್ಕೂಟರ್‌ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಜ.24 ರಂದು ಮಡಂತ್ಯಾರಿನಲ್ಲಿ ನಡೆದಿದೆ.

ಕಾವಳಮೂಡೂರು ಕಾರಿಂಜ ಪಡಿ ನಿವಾಸಿ ಪದ್ಮನಾಭ ದೇವಾಡಿಗ (45) ಮೃತಪಟ್ಟ ವ್ಯಕ್ತಿ.

ಉಪ್ಪಿನಂಗಡಿಯ ಹೋಟೆಲ್‌ವೊಂದರಲ್ಲಿ ಸಪ್ಲೈಯರ್‌ ಕೆಲಸ ಮಾಡುತ್ತಿದ್ದ ಇವರು ಮೂರು ದಿನಕ್ಕೊಮ್ಮೆ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಜ.23 ರಂದು ಕೂಡಾ ರಾತ್ರಿ ಎಂದಿನಂತೆ ರಾತ್ರಿ ಹೋಟೆಲ್‌ನಲ್ಲಿ ಕೆಲಸ ಮುಗಿಸಿ ಸುಮಾರು 11.30 ರ ವೇಳೆಗೆ ಬರುತ್ತಿದ್ದಾಗ ಪೂಂಜಾಲಕಟ್ಟೆ ಹಾಗೂ ಮಡಂತ್ಯಾರು ಮಧ್ಯ ಭಾಗದಲ್ಲಿ ಮಂಗಳೂರು ಏರ್‌ಪೋರ್ಟ್‌ನಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿರುವ ಕುರಿತು ಪೊಲೀಸರು ಹೇಳಿದ್ದಾರೆ.

ಮೃತರು ಪತ್ನಿ ಒಂದು ಗಂಡು ಮತ್ತು ಹೆಣ್ಣು ಮಗಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

banner

You may also like