ಬೆಂಗಳೂರು: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಹೈಕಮಾಂಡ್ ಪಕ್ಷಕ್ಕೆ ಇದರಿಂದ ಯಾವುದಾದರೂ ಒಂದು ರೀತಿಯಲ್ಲಿ ಹೊಡೆತ ಬೀಳಬಹುದು ಎನ್ನುವ ಆತಂಕವಿದೆ. ಹೀಗಾಗಿ ಭಾರೀ ಲೆಕ್ಕಾಚಾರ ಮಾಡಿರುವ ವರಿಷ್ಠರು ಒಬಿಸಿಗಳಿಗೆ ಬಂಪರ್ ಆಫರನ್ನು ನೀಡಿದ್ದಾರೆ.


ಒಬಿಸಿಗೆ ಸೇರಿರುವ ಸಿದ್ದರಾಮಯ್ಯ ಅವರ ಪದತ್ಯಾಗ ಬೆನ್ನಲ್ಲೇ ರಾಜ್ಯದಲ್ಲಿ ನಡೆಯಲಿರುವ ಪರಿಷತ್ ಚುನಾವಣೆ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಅವರೆಲ್ಲರೂ ಒಬಿಸಿಗೆ ಸೇರಿದವರೇ ಎನ್ನುವುದು ಇನ್ನೂ ವಿಶೇಷ.
ಹರಿಪ್ರಸಾದ್- ಈಡಿಗ ಬಿಲ್ಲವ
ಪಿವಿ ಮೋಹನ್ – ಬಿಲ್ಲವ
ಶಿವಣ್ಣ ಮಳವಳ್ಳಿ – ಕುರುಬ
ತಿಪ್ಪಣ್ಣಪ್ಪ ಕಮಕನೂರು – ಕೋಲಿ (ಕಬ್ಬಲಿಗ/ಗಂಗಾಮತ)
ಅಲ್ಲದೆ ನಿನ್ನೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 13 ಮಂದಿಯ ಪೈಕಿ ಯತೀಂದ್ರ ಸಿದ್ದರಾಮಯ್ಯ ಮತ್ತು ಬೈರತಿ ಸುರೇಶ್ ಕೂಡಾ ಇದೇ ಒಬಿಸಿಗೆ ಸೇರಿದ್ದಾರೆ.

