Home » ದೇವರಿದ್ದಾನೆ ಹುಷಾರು, ನಿಮ್ಮ ಸಂಸಾರವನ್ನು ಖಂಡಿತ ನಾಶ ಮಾಡ್ತಾನೆ- ದಿಲೀಪ್ ರಾಜ್ ಪತ್ನಿ ಪೋಸ್ಟ್, ಯಾರಿಗೆ ಈ ಕೌಂಟರ್

ದೇವರಿದ್ದಾನೆ ಹುಷಾರು, ನಿಮ್ಮ ಸಂಸಾರವನ್ನು ಖಂಡಿತ ನಾಶ ಮಾಡ್ತಾನೆ- ದಿಲೀಪ್ ರಾಜ್ ಪತ್ನಿ ಪೋಸ್ಟ್, ಯಾರಿಗೆ ಈ ಕೌಂಟರ್

0 comments

ಹುಷಾರಾಗಿರಿ. ಯಾರ ಮನೆ ಚೆನ್ನಾಗಿದೆ, ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೆ, ಯಾರು ತುಂಬಾ ಖುಷಿಯಿಂದ ಬದುಕುತ್ತಿರ್ತಾರೋ ಅಂಥವರ ಮನೆಯ ಮೇಲೆ ಅವನಿಗೆ ಯಾವಾಗಲೂ ಕಣ್ಣು ಇರುತ್ತದೆ. ದೇವರಿದ್ದಾನೆ, ಹುಷಾರಾಗಿರಿ” ಎಂದು ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ. ಯಾಕೆ ಹೀಗೆ ಮಾಡಿದ್ದಾರೆ ಗೊತ್ತಾ?

ಬಹಳ ಚಿಕ್ಕ ವಯಸ್ಸಿನಲ್ಲೇ ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ಪ್ರೀತಿಸಿ ಮದುವೆ ಆಗಿದ್ದರು. ಪೋಷಕರು ವಿರೋಧದ ನಡುವೆಯೂ ಒಂದಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವುದರ ಜೊತೆಗೆ ತಮ್ಮದೇ ಸಂಸ್ಥೆ ಮೂಲಕ ಧಾರಾವಾಹಿಗಳನ್ನು ದಿಲೀಪ್ ರಾಜ್ ನಿರ್ಮಿಸುತ್ತಿದ್ದರು. ಅದಕ್ಕೆ ಪತ್ನಿ ಬೆಂಬಲವಾಗಿ ನಿಂತಿದ್ದರು. ಇತ್ತೀಚೆಗೆ ಬುಲೆಟ್ ಮೈಕ್ರೋ ಡ್ರಾಮಾ ಸೀರಿಸ್ ಕಟ್ಟಿಕೊಡುತ್ತಿದ್ದರು ದಿಲೀಪ್ ರಾಜ್. ಆದರೆ ವಿಧಿ ಆಟ ಬೇರೆಯಾಗಿ ಅವರನ್ನು ದೇವರು ಬೇಗ ಕರೆದುಕೊಂಡು ಬಿಟ್ಟ. ಇದೀಗ ದೇವರ ಕುರಿತು ಅವರು ವ್ಯಂಗ್ಯವಾಗಿ ಪೋಸ್ಟ್ ಹಾಕಿದ್ದಾರೆ.

ಯಸ್, ದೇವರನ್ನು ಶಪಿಸಿ ಅವರು ನೋವು ತೋಡಿಕೊಂಡಿದ್ದು, “ನನಗೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಏನನ್ನಿಸುತ್ತಿದೆಯೆಂದರೆ – ಒಂದು ಸಂಸಾರ ಹೇಗಿರಬೇಕು ಅಂದ್ರೆ, ಒಬ್ಬ ಗಂಡ ಹೆಂಡತಿಯನ್ನುಯಾವಾಗಲೂ ಹೊಡೀತಾ ಇರಬೇಕು, ಕುಡಿದು ಬಂದು ಗಲಾಟೆಮಾಡ್ತಾ ಇರಬೇಕು. ಒಬ್ಬ ಹೆಂಡತಿ ಯಾವಾಗಲೂ ಗಂಡನನ್ನೇ ದೂಷಿಸುತ್ತಾ ಇರಬೇಕು. ಮಕ್ಕಳು ತಂದೆ-ತಾಯಿಯನ್ನು ಗೌರವಿಸಬಾರದು. ತಂದೆ-ತಾಯಿಯೂ ಅಷ್ಟೇ, ಮಕ್ಕಳನ್ನು ಯಾವಾಗಲೂ ದೂಷಿಸುತ್ತಾ ಇರಬೇಕು.ಒಂದು ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರಬಾರದು. ಒಬ್ಬರು ಒಬ್ಬರು ಕಿತ್ತಾಡ್ಕೊಂಡೇ ಇರಬೇಕು. ಯಾಕೆಂದರೆ ದೇವರಿದ್ದಾನೆ, ಹುಷಾರಾಗಿರಿ. ಯಾರ ಮನೆ ಚೆನ್ನಾಗಿದೆ, ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೆ, ಯಾರು ತುಂಬಾ ಖುಷಿಯಿಂದ ಬದುಕುತ್ತಿರ್ತಾರೋ ಅಂಥವರ ಮನೆಯ ಮೇಲೆ ಅವನಿಗೆ ಯಾವಾಗಲೂ ಕಣ್ಣು ಇರುತ್ತದೆ. ದೇವರಿದ್ದಾನೆ, ಹುಷಾರಾಗಿರಿ” ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೆ ದೇವರು ಸುಖ- ಶಾಂತಿ ಸಂತೋಷ ತುಂಬಿದ ಸಂಸಾರವನ್ನೇ ದೇವರು ಗುರಿಯಾಗಿಸಿ ಶಿಕ್ಷಿಸುತ್ತಾನೆ ಎನ್ನುವ ಅರ್ಥದಲ್ಲಿ ಶ್ರೀವಿದ್ಯಾ ಪೋಸ್ಟ್ ಮಾಡಿದ್ದಾರೆ. “ನಿಮ್ಮ ಸಂಸಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ. ಖಂಡಿತ ನಾಶ ಮಾಡದೆ ಬಿಡುವುದಿಲ್ಲ. ದೇವರಿದ್ದಾನೆ, ಹುಷಾರಾಗಿರಿ” ಎಂದು ಬೇಸರ, ನೋವು, ಆಕ್ರೋಶ ಹೊರ ಹಾಕಿದ್ದಾರೆ. ಏನೇನೊ ಸಮಸ್ಯೆಗಳಿರುವ ಸಂಸಾರಗಳು ಚೆನ್ನಾಗಿಯೇ ಇದೆ. ಆದರೆ ನೆಮ್ಮದಿ ನಗು ತುಂಬಿದ್ದ ನಮ್ಮ ಸಂಸಾರದ ಮೇಲೆ ದೇವರ ಕಣ್ಣು ಬಿತ್ತು, ಅದು ಹೀಗಾಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

banner

You may also like