Home » ಕುಣಿಗಲ್‌: ಸಾಕಿ ಸಲಹಿದ ಸಂಬಂಧಿ ಜೊತೆ ಪತ್ನಿ ಪರಾರಿ; ನೊಂದ ಅರ್ಚಕ ಮಕ್ಕಳಿಬ್ಬರನ್ನು ಕೊಂದು ಆತ್ಮಹತ್ಯೆ

ಕುಣಿಗಲ್‌: ಸಾಕಿ ಸಲಹಿದ ಸಂಬಂಧಿ ಜೊತೆ ಪತ್ನಿ ಪರಾರಿ; ನೊಂದ ಅರ್ಚಕ ಮಕ್ಕಳಿಬ್ಬರನ್ನು ಕೊಂದು ಆತ್ಮಹತ್ಯೆ

0 comments

ಪತ್ನಿಯು ಸಂಬಂಧಿ ಜೊತೆ ಪರಾರಿಯಾದ ಹಿನ್ನೆಲೆಯಲ್ಲಿ ಮನನೊಂದ ಅರ್ಚಕನೊಬ್ಬ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೊಲೆ ಮಾಡಿ, ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ.

ಅಲ್ಕೆರೆ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಾಲಯದ ಅರ್ಚಕ ಶಿವಣ್ಣ (40), ಪುತ್ರರಾದ ಜೀವನ್‌ (10), ಪ್ರಾಣೇಶ್‌ (5) ಮೃತಪಟ್ಟವರು.

ಮೃತ ಶಿವಣ್ಣ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶಿವಣ್ಣ ಅವರು ತಮ್ಮ ಅಕ್ಕನ ಮಗ ಹೇಮಂತ್‌ ಎಂಬಾತನನ್ನು ಸಾಕಿ ಸಲಹಲು ಮನೆಯಲ್ಲೇ ಇರಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ ಇತ್ತೀಚೆಗೆ ಶಿವಣ್ಣನ ಪತ್ನಿ ಅದೇ ಹೆಮಂತ್‌ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದರು ಎನ್ನಲಾಗಿದೆ.

ಸಾಕಿ ಬೆಳೆಸಿದಾತನ ಜೊತೆಯೇ ಪತ್ನಿ ಪಲಾಯನ ಮಾಡಿರುವುದು ತೀವ್ರವಾಗಿ ನೊಂದಿದ್ದ ಶಿವಣ್ಣ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು. ಈ ಕಾರಣಕ್ಕಾಗಿ ಕಳೆದ ರಾತ್ರಿ ಮನೆಯಲ್ಲಿ ಮಕ್ಕಳಾದ ಜೀವನ್‌ ಮತ್ತು ಪ್ರಾಣೇಶ್‌ನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ತಾವೂ ಕೂಡಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.

banner

ಘಟನಾ ಸ್ಥಳಕ್ಕೆ ಕುಣಿಗಲ್‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲು ಮಾಡಲಾಗಿದೆ.

You may also like