HomeNewsನೇತ್ರಾವತಿ ಸೇತುವೆ ಆವರಣ ಗೋಡೆಗೆ ಗುದ್ದಿದ ಮಿನಿ ಟೆಂಪೋ: ತಡೆಬೇಲಿಗೆ ಹಾನಿ

ನೇತ್ರಾವತಿ ಸೇತುವೆ ಆವರಣ ಗೋಡೆಗೆ ಗುದ್ದಿದ ಮಿನಿ ಟೆಂಪೋ: ತಡೆಬೇಲಿಗೆ ಹಾನಿ

Hindu neighbor gifts plot of land

Hindu neighbour gifts land to Muslim journalist

ಉಳ್ಳಾಲ: ಮಂಗಳೂರಿನ ನೇತ್ರಾವತಿ ಸೇತುವೆ ಆವರಣ ಗೋಡೆಗೆ ಮಿನಿ ಟೆಂಪೋವೊಂದು ಬುಧವಾರ ಮುಂಜಾನೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಘಟನೆ ನಡೆದಿದ್ದು, ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಅರುವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ತಡೆಬೇಲಿಗೆ ಹಾನಿಯಾಗಿರುವ ಘಟನೆ ನಡೆದಿದೆ.

ನೇತ್ರಾವತಿ ನದಿಗೆ ಜಿಗಿದು ಹಲವು ಆತ್ಮಹತ್ಯೆ ಮಾಡಿರುವ ಘಟನೆ ನಡೆದಿತ್ತು. ಎಸ್‌ ಎಂ ಕೃಷ್ಣ ಅವರ ಅಳಿಯ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಇದೇ ನೇತ್ರಾವತಿ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆಗೈದ ಘಟನೆ ಅಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ನೇತ್ರಾವತಿ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಮುಂದಾಗುವುದನ್ನು ತಡೆಯಲು ಮಂಗಳೂರು ನಗರಾಭಿವೃದ್ಧಿ ಇಲಾಖೆಯು 63 ಲಕ್ಷ ರೂ. ಅನುದಾನದಿಂದ ನೇತ್ರಾವತಿ ಸೇತುವೆಯುದ್ದಕ್ಕೂ ಫೆನ್ಸಿಂಗ್‌ ಮತ್ತು ಸಿಸಿಟಿವಿ ಅಳವಡಿಕೆ ಮಾಡಿತ್ತು.

ಈ ತಡೆಬೇಲಿಯಿಂದ ಆತ್ಮಹತ್ಯೆ ಸರಣಿ ಕಡಿಮೆಯಾಗಿತ್ತು ಎನ್ನಬಹುದು. ಆದರೆ ಇದೀಗ ಟೆಂಪೋ ಡಿಕ್ಕಿಯ ಪರಿಣಾಮದಿಂದ ಸೇತುವೆಗೆ ಅಳವಡಿಸಿದ್ದ ಫೆನ್ಸಿಂಗ್‌ ಅರೆಬರೆ ಕಿತ್ತುಹೋಗಿರುವುದು ಕಂಡು ಬಂದಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಫೆನ್ಸಿಂಗ್‌ ಬೇಲಿಯನ್ನು ದುರಸ್ತಿ ಮಾಡಲು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.

RELATED ARTICLES

Most Popular

Recent Comments