Udupi : ಉಡುಪಿ: ಹಿಟ್ ಅಂಡ್ ರನ್ ಕೇಸ್; ಅರೆಸ್ಟ್ ಆಗಿದ್ದ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್‌ ಶೆಟ್ಟಿ ಪುತ್ರ ಬಿಡುಗಡೆ

Share the Article

Udupi: ಕಾಪು ತಾಲೂಕಿನ ಬೆಳಪುವಿನ (Udupi) ಮಿಲಿಟರಿ ಕಾಲನಿಯಲ್ಲಿ ನವೆಂಬರ್ 11 ರಂದು ಬೆಳಗ್ಗೆ 5 ಗಂಟೆಗೆ ಪ್ರಜ್ವಲ್ ಚಲಾಯಿಸುತ್ತಿದ್ದ ಥಾರ್ ಜೀಪ್ ಬೈಕ್ ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಬೈಕ್ ಸವಾರ ಮೊಹಮ್ಮದ್ ಹುಸೈನ್ (39) ಎಂಬಾತ ಮೃತಪಟ್ಟಿದ್ದರು. ಆದ್ರೆ ಪ್ರಜ್ವಲ್ ತಲೆಮರೆಸಿಕೊಂಡಿದ್ದ.

ಇದೀಗ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್‌ ಶೆಟ್ಟಿ ಪುತ್ರ ಪ್ರಜ್ವಲ್ ಶೆಟ್ಟಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಅಂದರೆ ನಿನ್ನೆ ಬಂಧಿಸಲ್ಪಟ್ಟಿದ್ದ ಆರೋಪಿ ಪ್ರಜ್ವಲ್ ಶೆಟ್ಟಿ ನಿದ್ದೆ ಮಂಪರಿನಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದು, ಮತ್ತೆ ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಸೂಚಿಸಿರುವ ಶಿರ್ವ ಪೊಲೀಸರು ಬೇಲ್ ಮೇಲೆ ಬಿಡುಗಡೆಗೊಳಿಸಿದ್ದಾರೆ ಎನ್ನಲಾಗಿದೆ.

ಮಾಹಿತಿ ಪ್ರಕಾರ ಮೃತನ ಕುಟುಂಬಸ್ಥರಿಂದ ಹಿಟ್ ಆಂಡ್ ರನ್ ಎಂದು ಪೊಲೀಸ್‌ ದೂರು ದಾಖಲಾಗಿದ್ದು, ಆರೋಪಿ ಪ್ರಜ್ವಲ್ ಶೆಟ್ಟಿ ಚಲಾಯಿಸುತ್ತಿದ್ದ ಥಾರ್ ಜೀಪ್ ಈಗಾಗಲೇ ಶಿರ್ವ ಪೊಲೀಸರ ವಶದಲ್ಲಿದೆ.

Leave A Reply

Your email address will not be published.