Vinod Raj Secret Marriage : ವಿನೋದ್‌ ರಾಜ್‌ ಸೀಕ್ರೇಟ್‌ ಮದುವೆ ಬಗ್ಗೆ ತಾಯಿ ಲೀಲಾವತಿ ನೀಡಿದ್ರು ಶಾಕಿಂಗ್‌ ಮಾಹಿತಿ! ಏನಂದ್ರು ಗೊತ್ತಾ?

Vinod Raj Secret Marriage : ನಟಿ ಲೀಲಾವತಿ(Actress Leelavathi) ಅವರ ಮಗನಾದ ವಿನೋದ್ ರಾಜ್(Vinod Raj) ಈ ಮೊದಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಚಿತ್ರರಂಗದಲ್ಲಿ ಹೆಸರು ಮಾಡಿ ಈಗ ಕೃಷಿಯತ್ತ ಗಮನ ಹರಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ನಡುವೆ ವಿನೋದ್ ಅವರ ದಾಂಪತ್ಯ ಜೀವನದ ಕುರಿತ ಸುದ್ದಿಯೊಂದು ಜೋರಾಗಿ ಸದ್ದು ಮಾಡುತ್ತಿದೆ. ವಿನೋದ್ ಅವರಿಗೆ ಈಗಾಗಲೇ ಮದುವೆಯಾಗಿದೆಯೇ (Vinod Raj Secret Marriage)ಎಂಬ ಪ್ರಶ್ನೆ ಮೂಡುವಂತಹ ಸುದ್ದಿಯೊಂದು ಇತ್ತೀಚೆಗೆ ಎಲ್ಲೆಡೆ ಸಂಚಲನ ಮೂಡಿಸಿತ್ತು. ಸದ್ಯ, ಈ ಕುರಿತು ನಟಿ ಲೀಲಾವತಿಯವರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ವಿನೋದ್ ರಾಜ್‌ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, “ಅಮ್ಮ ಕರ್ನಾಟಕದ ಆಸ್ತಿ, ಸದ್ಯ ಅವರು ನೆಮ್ಮದಿಯಾಗಿದ್ದಾರೆ. ಅವರು ನೆಮ್ಮದಿಯಾಗಿ ಇರಲು ಬಿಡಿ ಎಂದು ಕೇಳಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ (Social Media) ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ತಮ್ಮ ಫೇಸ್‌ಬುಕ್‌ನಲ್ಲಿ (Facebook) ವಿನೋದ್ ರಾಜ್ ಅವರಿಗೆ ಈಗಾಗಲೇ ಮದುವೆಯಾಗಿದ್ದು,(Marriage)ಅಷ್ಟೆ ಅಲ್ಲದೇ, ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗ ಕೂಡ ಇದ್ದಾನೆ ಎಂದು ಪೋಸ್ಟ್( The post Vinod Raj)ಮೂಲಕ ಮಾಹಿತಿ ಹಂಚಿಕೊಂಡಿದ್ದರು. ನಿರ್ದೇಶಕ ಮತ್ತು ಡಾ. ರಾಜ್‌ ಕುಟುಂಬಕ್ಕೆ ಒಂದು ಕಾಲದಲ್ಲಿ ಅತೀ ಆಪ್ತರಾಗಿದ್ದ ಪ್ರಕಾಶ್ ರಾಜ್ ಮೇಹು ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್ ಎಲ್ಲೆಡೆ ಹರಿದಾಡಿ ವಿನೋದ್ ಅಭಿಮಾನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ನಟಿ ಲೀಲಾವತಿಯವರು ಪ್ರತಿಕ್ರಿಯೆ ನೀಡಿದ್ದಾರೆ.

ಸಿನಿ ವರ್ಲ್ಡ್ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಲೀಲಾವತಿಯವರು ಈ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ನಿಮ್ಮ ಮಗನ ಮದುವೆ ಬಗ್ಗೆ ಫೋಟೊ ಹೊರಬಂದಿದ್ದು, ಇದ್ದರ ಬಗ್ಗೆ ಏನು ಹೇಳುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದಾಗ, “ನೀಟ್‌ ಇದೆ ಅಲ್ವಾ? ಎಂದು ಪ್ರಶ್ನಿಸಿರುವ ನಟಿ ಲೀಲಾವತಿ ಅವರು ಸೊಟ್ಟಪಟ್ಟ ಇಲ್ದೆ ಅಂಕು ಡೊಂಕು ಇಲ್ದೆ ಕಳ್ಳರ ಹಾಗೆ ಸುಳ್ಳರ ಹಾಗೆ ಇಲ್ಲದೆ ನೆಮ್ಮದಿಯಾಗಿ ನೀಟಾಗಿ ಇದೆ” ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಮಗನಿಗೆ ಮದುವೆ ಮಾಡಿದ್ದೀನಿ. ಯಾಕೆ ಹೇಳಿಲ್ಲ ಎಂದರೆ, ಎಂಥೆಂಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್‌ಗಳಲ್ಲಿ ಮಾಡಿದ್ದಾರೆ. ನನಗೆ ಅಷ್ಟು ಚೈತನ್ಯ ಇರಲಿಲ್ಲ. ಹಾಗಾಗಿ ಅದನ್ನು ರಹಸ್ಯವಾಗಿ ಇಡುವುದೇ ಒಳ್ಳೆಯದು ಎಂದು ನನಗಸಿತು.

“ಅವನೇನು ಹೆಣ್ಣು ಹುಡುಗಿ ಅಲ್ಲ, ಕದ್ದು ಬಸುರಾಗಿದ್ದಕ್ಕೆ ಮದ್ವೆ ಮಾಡಿಸಿದೆ ಎಂದು ನಾನು ಹೇಳುವುದಿಲ್ಲ. ಅವನು ಪವಿತ್ರವಾಗಿ ಜೊತೆಗೆ ನನಗೆ ಒಳ್ಳೆ ಮಗನಾಗಿದ್ದಾನೆ. ನಾನೇ ಇಷ್ಟಪಟ್ಟು ಮದುವೆ ಮಾಡಿಸಿದ್ದು, ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದೆ. ತಿರುಪತಿ ಬೆಟ್ಟ ಶ್ರೇಷ್ಠ ಜಾಗ ಎಂದು ಅನಿಸಿ ಅಲ್ಲಿಯೇ ಮದುವೆ ಮಾಡಿಸಿದೆ. ಎಲ್ಲರಿಗೂ ಗೊತ್ತಾಗಿ ಕೊಂಕು ಮಾತು, ಡೊಂಕು ಮಾತು ಕೇಳುವ ಬದಲು ಮಾತನಾಡುವುದಕ್ಕಿಂತ ಪರಿಶುದ್ದವಾದ ಜಾಗದಲ್ಲಿ ಮದುವೆ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯದಿಂದ ಹಾಗೆ ಮಾಡಿದೆ. ವೆಂಕಟರಮಣ ಸನ್ನಿಧಿಯಲ್ಲಿ ಮದುವೆ ನಡೆದಿದ್ದು,7 ಜನ ಕನ್ನಡಿಗರು ಈ ಸಂದರ್ಭ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು.

“ಮದುವೆ ಮನೆಯಲ್ಲಿಯೇ ಏನ್ ಲೀಲಾವತಿಯವರೇ, ನಿಮ್ಮ ಮಗನ ಮದುವೆಗೆ 7 ಜನ ಮಾತ್ರವೇ ಬಂದಿದ್ದಾರೆ. ಜನ ಸಿಗಲಿಲ್ವಾ ಎಂದು ಕೊಂಕು ಮಾತನಾಡುವವರು ಕೂಡ ಇದ್ದರು. ಆದರೆ ನಾನು ಇದಾವುದನ್ನೂ ತಲೆಗೆ ಹಾಕಿಕೊಳ್ಳಲಿಲ್ಲ. ಮೊಮ್ಮೊಗ ಮತ್ತು ಸೊಸೆ ಚೆನ್ನಾಗಿ ಇದ್ದಾರೆ. ಅವರು ಬೆರಳು ತೋರಿಸುವಂತೆ ನಾನು ಮಾಡಲಿಲ್ಲ. ಚಿನ್ನದ ಹಾಗೆಯೇ ಇದ್ದಾರೆ ಜೊತೆಗೆ ನಾನು ಯಾವುದೇ ಕೊರತೆ ಮಾಡಿಲ್ಲ. ನಮ್ಮ ಆಂತರಿಕ ಸುದ್ದಿಯನ್ನು ಈ ರೀತಿ ಕೇಳುವಾಗ ನನಗೆ ಬೇಸರವಾಗುತ್ತದೆ. ಯಾರು ಏನಾದರೂ ಹೇಳಲಿ, ನನ್ನ ಆತ್ಮಸಾಕ್ಷಿಯಂತೆ ನಾನು ನಡೆದುಕೊಂಡಿದ್ದೇನೆ ಎಂದು ಈ ಸಂದರ್ಭದಲ್ಲಿ ಲೀಲಾವತಿ ಅವರು ಹೇಳಿದ್ದಾರೆ.

600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ನನ್ನ ಮಗನ ಮದುವೆ ಅದ್ದೂರಿಯಾಗಿ ಮಾಡಬೇಕು ಎಂಬ ಆಸೆ ನೆರವೇರಲಿಲ್ಲ ಎನ್ನುವ ಬೇಸರ ಈಗಲೂ ಇದೆ. ಯಾವ ತಾಯಿ ಕೂಡ ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿ ಇರೋದು ಬೇಡ ಎಂದು ಬಯಸುವುದಿಲ್ಲ.ನನ್ನ ಬಡತನದ ಬಗ್ಗೆ ಹೇಳಲು ಸಂಕೋಚವಾಗುತ್ತದೆ. ನೋಡುವವರು ಏನೇನೋ ಅಂದುಕೊಳ್ಳುತ್ತಾರೆ. ನಾನು ಬರೀ 30 ಸಾವಿರಕ್ಕೆ ಈ ಜಮೀನು ಖರೀದಿ ಮಾಡಿದೆ. ಮೊಮ್ಮಗನಿಗೆ ಸೊಸೆಗೆ ಒಳ್ಳೆ ಬಂಗಲೆಯಿದೆ. ಎಲ್ಲಾ ಸೌಕರ್ಯವು ಇದೆ. ಈ ರೀತಿ ಪದೇ ಪದೇ ನನ್ನ ವಿಚಾರಗಳನ್ನು ಮಾತನಾಡಿ ನೋವು ಮಾಡುವವರು ನರಕಕ್ಕೆ ಹೋಗುತ್ತಾರೆ.

 

ಇದನ್ನು ಓದಿ : Rahul Gandhi : ರಾಹುಲ್ ಗಾಂಧಿ ಜೈಲು ಶಿಕ್ಷೆ ಬಗ್ಗೆ ಇಂದು ತೀರ್ಮಾನ! ಶಿಕ್ಷೆಯೊಂದಿಗೆ ಅನರ್ಹತೆ ರದ್ಧಾಗುತ್ತಾ ಇಲ್ಲ ಸಿಂಧುವಾಗುತ್ತಾ?

Leave A Reply

Your email address will not be published.