Actor Ponnambalam : ಟಾಲಿವುಡ್​ ಸ್ಟಂಟ್​ಮ್ಯಾನ್​ ಪೊನ್ನಂಬಲಂ ಬಿಚ್ಚಿಟ್ಟರು ಭಯಾನಕ ಸತ್ಯ!

Actor Ponnambalam : ಟಾಲಿವುಡ್ (tallywood) ನ ಸ್ಟಂಟ್ ಮ್ಯಾನ್ (stant man) ನಟ ಪೊನ್ನಂಬಲಂ ( Actor Ponnambalam)ತಮ್ಮ ಆರೋಗ್ಯ (health) ಚೇತರಿಕೆ ಕಂಡ ನಂತರ ಯುಟ್ಯೂಬ್ ಚಾನಲ್(YouTube channel) ಒಂದರಲ್ಲಿ ಸಂದರ್ಶನದ ಮೂಲಕ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಭಯನಕ ಸತ್ಯ ಒಂದನ್ನು ಬಿಚ್ಚಿಟ್ಟಿದ್ದಾರೆ.

ದೊಡ್ಡ ದೇಹದ ಕಪ್ಪು ಬಣ್ಣದ ಭಯಾನಕ ಎನ್ನಿಸುವ ಮುಖಭಾವದ ಈ ನಟ ಖಳನಟ ಪಾತ್ರಕ್ಕಾಗಿಯೇ ಹುಟ್ಟಿದವರು ಎನ್ನಬಲ್ಲ ದೇಹ ಪ್ರಕೃತಿ ಹೊಂದಿದವರು. ಅನೇಕ ತಮಿಳು ಚಿತ್ರಗಳಲ್ಲಿ ಕಾಮಿಡಿಯನ್ ಆಗಿ ಗುರುತಿಸಿಕೊಂಡಿದ್ದ ಇವರು ಕನ್ನಡ ಹಾಗೂ ತೆಲುಗು ಅಲ್ಲಿ 80 – 90 ರ ದಶಕದಲ್ಲಿ ಖಳನಟನಾಗಿ ಸೂಪರ್ ಸ್ಟಾರ್ ರಜನಿಕಾಂತ್, ದಳಪತಿ ವಿಜಯ್, ಕಮಲ್ ಹಾಸನ್, ಅಜಿತ್ ಇಂತಹ ಜನಪ್ರಿಯ ನಟರ ಜೊತೆ ವಿಲನ್ ಆಗಿ ಬಣ್ಣ ಹಚ್ಚಿದ್ದಾರೆ. ಕನ್ನಡದ ಲೇಡಿ ಕಮಿಷನರ್, ಚಿನ್ನ, ಗುನ್ನ, ಕಿಚ್ಚ ಹಾಗೂ ಕೆಲವೊಂದು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಈಗ ಪೊನ್ನಂಬಲಂ ಆರೋಗ್ಯ (health) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಕಿಡ್ನಿ ವೈಫಲ್ಯ (kidney failure) ಎಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸಮಸ್ಯೆಗೆ ಹೆಚ್ಚು ಹಣ ಖರ್ಚಾಗಿದ್ದು, ಅವರು ಹಣದ ಸಮಸ್ಯೆಗೂ ಕೂಡ ಒಳಗಾಗಿದ್ದರು. ಇವರ ಈ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದವರು ತೆಲುಗಿನ ಹೆಸರಾಂತ ನಟರಾದ ಚಿರಂಜೀವಿಯವರು. ಇವರ ಈ ಸಹಾಯಕ್ಕೆ ಪೊನ್ನಂಬಲಂ ಅವರು ಚಿರಋಣಿ ಎಂದು ತಿಳಿಸಿದ್ದಾರೆ. ಪೊನ್ನಂಬಲಂ ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಹಾಯ ಮಾಡಿದ್ದು ರಾಮ್ ಚರಣ್ ಹಾಗೂ ಅವರ ಪತ್ನಿ ಆಸ್ಪತ್ರೆಯಲ್ಲಿ ಸುಮಾರು 45 ಲಕ್ಷ ಖರ್ಚಾಗಿದ್ದು, ಈ ಎಲ್ಲ ಹಣವನ್ನು ಚಿರಂಜೀವಿ ಅವರೆ ಭರಿಸಿದ್ದರು. ಇವರ ಈ ದೊಡ್ಡ ಗುಣವೇ ಸದಕಾಲ ಅವರನ್ನು ಕಾಯುತ್ತಿರುವುದು ಎಂದು ತಿಳಿಸುವ ಮೂಲಕ ಕೃತಜ್ಞತೆ ತಿಳಿಸಿದ್ದಾರೆ.Ponnambalam Wiki, Biography, Bigg Boss, Caste, Age, Family

ಅವರ ಕಿಡ್ನಿ ವೈಫಲ್ಯ ದ ನಿಜಾಂಶ ತಿಳಿದರೆ ಎಲ್ಲರೂ ಬೆಚ್ಚಿ ಬೀಳುತ್ತೀರಿ. ಅವರು ತಿಳಿಸಿರುವ ವಿಷಯ ಕೇಳಿ ಇಡೀ ಚಿಂತ್ರರಂಗವೇ ಶಾಕ್ ಆಗಿದೆ. ಅಭಿಮಾನಿಗಳು ವಿಷಯ ಕೇಳಿ ನೊಂದುಕೊಂಡಿದ್ದಾರೆ. ಅವರ ಕಿಡ್ನಿ ಫೇಲ್ಯೂರ್ ಗೆ ಅವರು ಹೆಚ್ಚಾಗಿ ಕುಡಿಯುತ್ತಿದ್ದದ್ದೇ ಕಾರಣ ಎಂದು ತಿಳಿದಿದ್ದರು. ಆದರೆ ಸತ್ಯ ವಿಚಾರವನ್ನು ತಿಳಿಸಿದ ಪೊನ್ನಂಬಲಂ ಇದಕ್ಕೆಲ್ಲ ನನ್ನ ಕುಟುಂಬ ಎಂದರು. ತನ್ನ ಸಹೋದರನೇ ಕಾರಣ ಎಂದು ಸಂದರ್ಶನದಲ್ಲಿ ಹೇಳಿದ್ದರು. ತಾನು ತಿಂದ ಆಹಾರದಲ್ಲಿಯೇ ವಿಷವನ್ನು ಬೇರೆಸಿದ್ದರು, ಅವರು ಕುಡಿಯುತ್ತಿದ್ದ ಬಿಯರ್ ನಲ್ಲಿ ಸ್ಲೋ ಪಾಯಿಸನ್ ಹಾಕುತ್ತಿದ್ದರು. ನನಗೆ ವಿಷ ನೀಡಿ ಈ ಸಮಸ್ಯೆ ಬಂದಿದೆ ಎಂದು ತಿಳಿದಿದ್ದು ವೈದ್ಯರ ತಪಾಸಣೆ ನಂತರವೇ. ಈ ವಿಷಯ ಕೇಳಿ ನಿಜಕ್ಕೂ ಪೊನ್ನಂಬಲಂ ಬೇಸರ ಗೊಂಡಿದ್ದೆ. ನನ್ನ ತಮ್ಮನೇ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದರೆ ನಿಜಕ್ಕೂಎಲ್ಲರಿಗೂ ಆಶ್ಚರ್ಯ ತಂದಿದೆ. ಇವನು ನನ್ನ ತಂದೆಯ ಮೂರನೇ ಹೆಂಡತಿಯ ಮಗ. ಇವನು ನನ್ನ ಜೊತೆ ನನ್ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಅವನನ್ನು ನಾನು ನನ್ನ ಸ್ವಂತ ತಮ್ಮನ ರೀತಿ ನೋಡಿದ್ದೆ. ನನ್ನ ಮೇಲೆ ಮಾಟಮಂತ್ರಗಳನ್ನು ಮಾಡಿದ್ದಾರೆ ಆದರೆ ಈಗ ಅವನೇ ನಂಬಿಕೆ ದ್ರೋಹ ಮಾಡಿದ್ದಾನೆ ಎಂದು ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದರು. ಯಾಕೆ ಈ ರೀತಿ ಮಾಡಿದ್ದಾರೆ ಎಂಬುವುದು ನಿಜಕ್ಕೂ ಅವರಿಗೆ ತಿಳಿದಿಲ್ಲ.

ರಜಿನಿಕಾಂತ್ ಹಾಗೂ ಕಮಲ್ ಹಾಸನ್ ಅವರು ಪೊನ್ನಂಬಲಂ ಅವರಿಗೆ ಸಾಕಷ್ಟು ನೆರವು ನೀಡಿದ್ದಾರೆ. ಕಮಲ್ ಹಾಸನ್ ಅವರು ಅವರ ಮಕ್ಕಳ ಶಿಕ್ಷಣದ ವೆಚ್ಚವನ್ನು ನೋಡಿಕೊಂಡಿದ್ದಾರೆ. ಹಾಗೂ ರಜಿನಿಕಾಂತ್ ಅವರು ಇವರ ಪ್ರತಿ ಒಂದು ವಿಷಯಕ್ಕೂ ಸಂಪೂರ್ಣ ಸಹಾಯ ಮಾಡಿದ್ದಾರೆ. ಚಿತ್ರರಂಗಕ್ಕೆ ಸ್ಟಂಟ್ ಮ್ಯಾನ್ ಆಗಿ ಕಾಲಿಟ್ಟ ಪೊನ್ನಂಬಲಂ ನಂತರ ಖಳನಟ ಆಗಿ ನಟಿಸಿದರು. ರಜಿನಿಕಾಂತ್ ಅವರ ಜೊತೆ ಅರುಣಾಚಲಂ ಎಂಬ ಚಿತ್ರದಲ್ಲಿ ಅಭಿನಿಸಿದ್ದರು. ಸದ್ಯ ಇದೀಗ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ (health condition) ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

 

ಇದನ್ನೂ ಓದಿ: PM Kisan 14th Installment : ಪಿಎಂ ಕಿಸಾನ್ 14ನೇ ಕಂತು ಯಾವಾಗ ಬಿಡುಗಡೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

 

Leave A Reply

Your email address will not be published.